ಯೂಟ್ಯೂಬ್ ದಲ್ಲಿನ ಸುಳ್ಳು ಮಾಹಿತಿಯನ್ನು ತೀವ್ರವಾಗಿ ಖಂಡಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು – ಯೂಟ್ಯೂಬ್ನಂತಹ ಮಾಧ್ಯಮಗಳಿಂದ ಹರಡುತ್ತಿರುವ ಸುಳ್ಳು ಮತ್ತು ಆಕ್ಷೇಪಾರ್ಹ ಮಾಹಿತಿಯ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಾಧ್ಯಮಗಳ ಮೇಲೆ ಜನರಿಗೆ ನಂಬಿಕೆ ಇದೆ. ಹಾಗಾಗಿ, ಸತ್ಯಗಳನ್ನು ಪರಿಶೀಲಿಸದೆ ಆರೋಪಗಳನ್ನು ಪ್ರಕಟಿಸುವುದು ತಪ್ಪು ಎಂದು ನ್ಯಾಯಾಲಯ ಹೇಳಿದೆ. ಅದರಿಂದ, ಯೂಟ್ಯೂಬ್ನಂತಹ ಮಾಧ್ಯಮಗಳನ್ನು ನಿಯಂತ್ರಿಸಲು ಮಾನನಷ್ಟ ಕಾನೂನು ಒಂದೇ ಸಾಕಾಗುವುದಿಲ್ಲ; ಏಕೆಂದರೆ ಜನರು ನಿರ್ಭಯವಾಗಿ ಯಾರ ಬಗ್ಗೆಯಾದರೂ ಮಾನಹಾನಿ ಮಾಡುತ್ತಿದ್ದಾರೆ, ಹಾಗೆಯೇ ಅವರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಒಂದು ದೃಢವಾದ ನೀತಿ ಆವಶ್ಯಕವಾಗಿದೆ. ಸಚಿವ ಕೆ.ಜೆ. ಜಾರ್ಜ್ ಅವರು ‘ಕನ್ನಡ ಪ್ರಭ’ ಸುದ್ದಿ ವಾಹಿನಿಯ ಸಂಪಾದಕ ರವಿ ಹೆಗಡೆ ಅವರ ವಿರುದ್ಧ ದಾಖಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 2020 ರಲ್ಲಿ, ರವಿ ಹೆಗಡೆ ಅವರು ಜಾರ್ಜ್ ಅವರ ವಿರುದ್ಧ ಯೂಟ್ಯೂಬ್ನಲ್ಲಿ ಸುಳ್ಳು ಮಾಹಿತಿ ಪ್ರಕಟಿಸಿದ್ದರು ಎಂದು ಆರೋಪಿಸಲಾಗಿದೆ.
🚨 Karnataka HC on Fake YouTube Content
“The defamation law alone isn’t enough… people are fearlessly defaming anyone!” ⚖️
Court slams unchecked lies & slander spread online.#KarnatakaHighCourt
PC: @news24tvchannel pic.twitter.com/lOP3ovpGBa— Sanatan Prabhat (@SanatanPrabhat) September 4, 2025
ನ್ಯಾಯಾಲಯವು ರವಿ ಹೆಗಡೆ ಅವರಿಗೆ ಒಂದು ಪ್ರಕಟಣೆಯನ್ನು ಹೊರಡಿಸುವಂತೆ ಸೂಚಿಸಿದ್ದು, “ಈ ಸುದ್ದಿ ಇನ್ನೊಬ್ಬರ ಹೇಳಿಕೆಗಳ ಆಧಾರಿತವಾಗಿದ್ದು, ಅದರಿಂದ ಯಾರಿಗಾದರೂ ನೋವಾಗಿದ್ದರೆ ಪತ್ರಿಕೆಗೆ ವಿಷಾದವಿದೆ” ಎಂದು ಸ್ಪಷ್ಟಪಡಿಸುವಂತೆ ಸೂಚಿಸಿದೆ. ಇದರೊಂದಿಗೆ, ನ್ಯಾಯಾಲಯವು ಎರಡೂ ಪಕ್ಷಗಳಿಗೆ ತಮ್ಮೊಳಗೆ ರಾಜಿ ಮಾಡಿಕೊಳ್ಳಲು ಸಲಹೆ ನೀಡಿತು, ಇಲ್ಲದಿದ್ದರೆ ಪ್ರಕರಣವನ್ನು ಮತ್ತೆ ಮಧ್ಯಸ್ಥಿಕೆಗೆ ಕಳುಹಿಸಲಾಗುವುದು ಎಂದು ತಿಳಿಸಿದೆ. ಹಿಂದಿನ ವಿಚಾರಣೆಯ ಸಮಯದಲ್ಲಿಯೂ, ಪುರಾವೆ ಅಥವಾ ವಿವರಣೆ ಇಲ್ಲದೆ ಆರೋಪಗಳನ್ನು ಪ್ರಕಟಿಸುವುದು ಪತ್ರಿಕೋದ್ಯಮದ ನೀತಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!