ನಿಜವಾದ ಕುಣಬಿಗಳಿಗೆ ಮಾತ್ರ ಮೀಸಲಾತಿ; ಸುಳ್ಳು ಹೇಳಿದರೆ ನಡೆಯುವುದಿಲ್ಲ ! – ಮುಖ್ಯಮಂತ್ರಿ

ಮೀಸಲಾತಿ ಅಧಿಸೂಚನೆ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ಮಾಹಿತಿ

ಮುಂಬಯಿ – ಮರಾಠಾ ಆಂದೋಲನಕಾರ ಮನೋಜ್ ಜಾರಂಗೆ ಅವರ ಪ್ರತಿಭಟನೆಯ ನಂತರ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯು ಮರಾಠಾ ಸಮುದಾಯದ ಎಲ್ಲರಿಗೂ ಮೀಸಲಾತಿಯ ಲಾಭವನ್ನು ಒದಗಿಸುವುದಿಲ್ಲ. ಈ ವಿಷಯದಲ್ಲಿ ನಿಜವಾದ ಕುಣಬಿಗಳು ಯಾರು ಇರುತ್ತಾರೋ, ಅವರಿಗೆ ಮಾತ್ರ ಮೀಸಲಾತಿಯ ಲಾಭ ಸಿಗಲಿದೆ. ಈ ವಿಷಯದಲ್ಲಿ ಯಾರೂ ಸುಳ್ಳು ಹೇಳುವುದು ನಡೆಯುವುದಿಲ್ಲ, ಎಂದು ಮುಖ್ಯಮಂತ್ರಿ ದೇವೇಂದ್ರ ಫಡನ್ವಿಸ್ ಇವರು ಸ್ಪಷ್ಟಪಡಿಸಿದರು.