ಮಣಿಮಹೇಶ್ ಯಾತ್ರೆಯ ೮ ಸಾವಿರ ಭಕ್ತರ ರಕ್ಷಣೆ!

ಶಿಮ್ಲಾ (ಹಿಮಾಚಲ ಪ್ರದೇಶ) – ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ರಾಜ್ಯದ ಚಂಬಾ ಜಿಲ್ಲೆಯಲ್ಲಿ ಸಿಲುಕಿದ್ದ ಜಮ್ಮು ಮತ್ತು ಕಾಶ್ಮೀರದ ಸುಮಾರು ೮ ಸಾವಿರ ಮಣಿಮಹೇಶ್ ಯಾತ್ರಾ ಭಕ್ತರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಭರಮೌರ್ ಮತ್ತು ಹಡ್ಸರ್‌ನಲ್ಲಿ ಸಿಲುಕಿದ್ದ ಉಳಿದ ಯಾತ್ರಿಕರನ್ನು ಹೊರತರಲು ಯುದ್ಧೋಪಾದಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ ಇನ್ನೂ ಎರಡು-ಎರಡೂವರೆ ಸಾವಿರ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದಾರೆ.