ಧಾರ್ಮಿಕ ಸ್ಥಳಗಳ ವಿರುದ್ಧ ಯೋಜಿತ ಪಿತೂರಿಗಳನ್ನು ರೂಪಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ! : Karnataka Dharmasthala Row

  • ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ವಿಶೇಷ ತನಿಖೆ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಮ್ಮಿಕೊಂಡಿದ್ದ ಆಂದೋಲನ ಹಳಿಯಾಳದಲ್ಲಿ ಸಂಪನ್ನ

  • ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಳಿಯಾಳದಲ್ಲಿ ಜನಾಗೃಹ ಆಂದೋಲನ

ಹಳಿಯಾಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಜನಸಮೂಹ

ಹಳಿಯಾಳ: ಸುಮಾರು 800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳದ ವಿರುದ್ಧ ಸಂಚು, ಸುಳ್ಳು ಪ್ರಚಾರ ಹಾಗೂ ದುರುದ್ದೇಶಿತ ವರದಿಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ ವ್ಯಕ್ತ ಪಡಿಸಿದೆ. ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಸರ್ಕಾರ ತನಿಖಾದಳ ರಚಿಸಿ ಕಾರ್ಯಾಚರಣೆ ನಡೆಸಿದರು ಸತ್ಯ ಹೊರಬಂದಿಲ್ಲ.ಕೆಲವು ಯೂಟ್ಯೂಬರಗಳು ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಧರ್ಮಸ್ಥಳದ ಬಗ್ಗೆ ಸುಳ್ಳು ಹಾಗೂ ದುರುದ್ದೇಶಿತ ವರದಿಗಳನ್ನು ಪ್ರಸಾರ ಮಾಡಿರುವುದು ಹಿಂದೂ ಸಮಾಜದ ಭಾವನೆಗಳಿಗೆ ತೀವ್ರ ಅವಮಾನವಾಗಿದೆ ,ಸುಳ್ಳು ಪ್ರಚಾರ ಹಾಗು ಧರ್ಮಸ್ಥಳದ ತೇಜೋವಧೆ ಮಾಡಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹಳಿಯಾಳ ತಾಲ್ಲೂಕಿನ ಸಮಸ್ತ ಭಕ್ತವೃಂದ ಹಾಗೂ ಸಮಿತಿಯು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ನಗರದ ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಅಂಬೇಡ್ಕರ್ ಸರ್ಕಲ್, ಶಿವಾಜಿ ಸರ್ಕಲ್ ಮೂಲಕ ಸಾಗಿತು.
ಮೆರವಣಿಗೆಯಲ್ಲಿ 1000 ಕ್ಕಿಂತ ಹೆಚ್ಚು ಭಕ್ತಾದಿಗಳು, ಹಿಂದುತ್ವನಿಷ್ಟರು ತಪಿಸ್ಥರ ವಿರುದ್ಧ. ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ವೈಶಿಷ್ಠ್ಯಪೂರ್ಣ ಅಂಶಗಳು:

1.ತಹಶೀಲ್ದಾರ್ ಅವರಿಗೆ ಮನವಿ ಕೊಡುವಾಗ ಸ್ವತಃ CPI ಮುಂದೆ ಬಂದು ಮನವಿ ಕೊಡುವುದರಲ್ಲಿ ಸಹಭಾಗಿಯಾದರು.

2.ಉಪಸ್ಥಿತಿ ಸಂಖ್ಯೆ ಕಂಡು ತಹಶೀಲ್ದಾರರು ಕೌತುಕ ವ್ಯಕ್ತ ಪಡಿಸಿದರು.

3.ಭಾಗಿಯಾದವರ ಎಲ್ಲರಲ್ಲಿ ಜಾಗೃತ ಮೂಡಿತ್ತು ಮತ್ತು ಸಂಘಟನೆಯಲ್ಲಿ ಬಲವಿದೆ ಎನ್ನುವುದು ಗಮನಕ್ಕೆ ಬಂದಿತು .

4.ಸುಮಾರು 1000 ಜನರ ಉಪಸ್ಥಿತಿ ಇತ್ತು.