|

ಕರ್ಣಾವತಿ (ಗುಜರಾತ) – ಸಿರಿಯಾದ ನಾಲ್ಕು ನಾಗರಿಕರು ಗಾಜಾದ ಸಂತ್ರಸ್ತರ ಹೆಸರಿನಲ್ಲಿ ಇಲ್ಲಿನ ಮಸೀದಿಗಳಿಂದ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿದ್ದಾರೆ. ವಾಸ್ತವವಾಗಿ ಆ ಹಣವನ್ನು ಗಾಜಾಕ್ಕೆ ಕಳುಹಿಸದೆ, ಅದನ್ನು ತಮ್ಮ ಐಷಾರಾಮಿ ಜೀವನಕ್ಕೆ ಬಳಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ ಪೊಲೀಸರು, ಇಲ್ಲಿನ ಎಲಿಸ್ ಬ್ರಿಜ್ ಪ್ರದೇಶದ ಹೋಟೆಲ್ ಒಂದರಿಂದ 23 ವರ್ಷದ ಅಲಿ ಮೆಘಾಟ್ ಅಲ್-ಅಝಹರ್ ನನ್ನು ಬಂಧಿಸಿದ್ದಾರೆ. ಇವನು ಸಿರಿಯಾದ ರಾಜಧಾನಿ ದಮಾಸ್ಕಸ್ ನಿವಾಸಿಯಾಗಿದ್ದಾನೆ. ಇತರ 3 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
🚨 Karnavati (Ahmedabad): Crime Branch busts a Syrian gang that extorted lakhs from local mosques by posing as Gaza conflict victims – one arrested.
📽️ Fake videos of starving families were used to collect donations.
🔎 Gujarat ATS & NIA now probing the racket to trace the… pic.twitter.com/GlyDRgcJHG
— Sanatan Prabhat (@SanatanPrabhat) August 24, 2025
ಪೊಲೀಸ್ ಸಹಾಯಕ ಆಯುಕ್ತ ಶರದ ಸಿಂಘಲ ಈ ಪ್ರಕರಣದ ಬಗ್ಗೆ ಹೇಳಿಕೆ ನೀಡುತ್ತಾ, ಆರೋಪಿಗಳಿಂದ 3 ಸಾವಿರ 600 ಡಾಲರ್ (3 ಲಕ್ಷ 14 ಸಾವಿರ ಭಾರತೀಯ ರೂಪಾಯಿಗಳು) ಹಾಗೂ 25 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಮೂವರು ವ್ಯಕ್ತಿಗಳಾದ ಜಕಾರಿಯಾ ಹೈತಮ ಅಲ್ಜಾರ್, ಅಹ್ಮದ್ ಅಲಹಬಾಶ್ ಮತ್ತು ಯೂಸುಫ್ ಅಲ್-ಜಹರ್ ಇವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಲಾಗುತ್ತಿದೆ, ಎಂದು ಹೇಳಿದರು.
ಮಸೀದಿಗಳಲ್ಲಿ ಗಾಜಾದಲ್ಲಿನ ಹಸಿದ ಕುಟುಂಬಗಳ ವೀಡಿಯೊಗಳನ್ನು ತೋರಿಸಿ ಹಣ ಪಡೆದರು!
ಈ ಗುಂಪು ಜುಲೈ 22ರಂದು ಪ್ರವಾಸಿ ವೀಸಾದ ಮೇಲೆ ಕೋಲಕಾತಾಗೆ ಬಂದಿತ್ತು. ನಂತರ ಆಗಸ್ಟ್ 2ರಂದು ಕರ್ಣಾವತಿಯನ್ನು ತಲುಪಿದ್ದರು. ಈ ಗುಂಪು ಮಸೀದಿಗಳಿಗೆ ಭೇಟಿ ನೀಡಿ ಗಾಜಾದ ಹಸಿದ ಕುಟುಂಬಗಳ ವೀಡಿಯೊಗಳನ್ನು ತೋರಿಸಿ, ಅಲ್ಲಿನ ಮುಸ್ಲಿಮರಿಂದ ಹಣವನ್ನು ಸಂಗ್ರಹಿಸಿದ್ದಾರೆ. ಈ ಹಣ ಗಾಜಾವನ್ನು ತಲುಪಿದೆ ಎಂಬುದಕ್ಕೆ ಪೊಲೀಸರಿಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ‘ಪ್ರಾಥಮಿಕವಾಗಿ ಈ ಗುಂಪು ಸಂಶಯಾಸ್ಪದ ವ್ಯಕ್ತಿಗಳ ಸಂಪರ್ಕದಲ್ಲಿದೆ ಎಂದು ಕಂಡುಬಂದಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!