ರಾಜ್ಯಪಾಲರಿಗೆ ಅನಿರ್ದಿಷ್ಟ ಕಾಲದವರೆಗೆ ಮಸೂದೆ ಅನುಮೋದನೆ ತಡೆ ಹಿಡಿಯುವ ಅಧಿಕಾರವಿಲ್ಲ

ಸರ್ವೋಚ್ಚ ನ್ಯಾಯಾಲಯದ ತೀರ್ಪು

ನವದೆಹಲಿ – ಜನರಿಂದ ಚುನಾಯಿತರಾದ ರಾಜ್ಯ ಸರಕಾರಗಳು ರಾಜ್ಯಪಾಲರ ಇಚ್ಛೆಯಂತೆ ನಡೆಯಲು ಸಾಧ್ಯವಿಲ್ಲ. ವಿಧಾನ ಸಭೆಯು ಒಂದು ಮಸೂದೆಯನ್ನು ಎರಡನೇ ಬಾರಿಗೆ ರಾಜ್ಯಪಾಲರಿಗೆ ಕಳುಹಿಸಿದರೆ, ರಾಜ್ಯಪಾಲರು ಅದನ್ನು ರಾಷ್ಟ್ರಪತಿಗೆ ಕಳುಹಿಸಲು ಸಾಧ್ಯವಿಲ್ಲ. ಅಲ್ಲದೆ, ಅವರಿಗೆ ಅನಿರ್ದಿಷ್ಟ ಕಾಲದವರೆಗೆ ಮಸೂದೆ ಅನುಮೋದನೆ ತಡೆ ಹಿಡಿಯುವ ಅಧಿಕಾರವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.

ರಾಜ್ಯಪಾಲರಿಗೆ ಇರುವ 4 ಆಯ್ಕೆಗಳು!

ಸಂವಿಧಾನದ 200ನೇ ವಿಧಿಯ ಪ್ರಕಾರ, ರಾಜ್ಯಪಾಲರಿಗೆ ಮಸೂದೆಗಳ ಬಗ್ಗೆ ನಿರ್ಣಯ ಕೈಗೊಳ್ಳಲು 4 ಆಯ್ಕೆಗಳಿವೆ:

ಅ. ಮಸೂದೆಯನ್ನು ಸ್ವೀಕರಿಸುವುದು

ಆ. ಮಸೂದೆ ಅನುಮೋದನೆ ತಡೆ ಹಿಡಿಯುವುದು

ಇ. ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸುವುದು, ಅಥವಾ

ಈ. ಪುನರ್ ಪರಿಶೀಲನೆಗಾಗಿ ಮಸೂದೆಯನ್ನು ವಿಧಾನಸಭೆಗೆ ಹಿಂತಿರುಗಿಸುವುದು

ನಾಲ್ಕನೇ ಆಯ್ಕೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಹೇಳಿರುವುದೇನೆಂದರೆ, ಒಂದು ವೇಳೆ ವಿಧಾನಸಭೆಯು ಅದೇ ಮಸೂದೆಯನ್ನು ಮತ್ತೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದರೆ, ರಾಜ್ಯಪಾಲರು ಅದನ್ನು ಸ್ವೀಕರಿಸಲೇಬೇಕು.

ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ನೇತೃತ್ವದ ಐದು ನ್ಯಾಯಾಧೀಶರ ಪೀಠವು, ರಾಜ್ಯಪಾಲರು ಪುನರ್ ಪರಿಶೀಲನೆಗೆ ಕಳುಹಿಸದೆ ಮಸೂದೆ ಅನುಮೋದನೆ ತಡೆ ಹಿಡಿದರೆ, ಚುನಾಯಿತ ಸರಕಾರಗಳು ರಾಜ್ಯಪಾಲರ ಇಚ್ಛೆಯ ಮೇಲೆ ಅವಲಂಬಿತವಾಗುತ್ತವೆ. ರಾಜ್ಯಪಾಲರಿಗೆ ಅನಿರ್ದಿಷ್ಟ ಕಾಲದವರೆಗೆ ಮಸೂದೆ ಅನುಮೋದನೆ ತಡೆ ಹಿಡಿಯುವ ಅಧಿಕಾರವಿಲ್ಲ ಎಂದು ಹೇಳಿದೆ.

ಏನಿದು ಪ್ರಕರಣ ?

ಈ ಪ್ರಕರಣವು ತಮಿಳುನಾಡು ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವಿನ ವಿವಾದದಿಂದ ಬೆಳಕಿಗೆ ಬಂದಿದೆ. ಅಲ್ಲಿನ ರಾಜ್ಯಪಾಲರು ರಾಜ್ಯ ಸರಕಾರದ ಮಸೂದೆಗಳನ್ನು ತಡೆ ಹಿಡಿದಿದ್ದರು.