|

ಕಾಬೂಲ್ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ತಾಲಿಬಾನ್ ಸರಕಾರವು ಇರಾನ್ ಮತ್ತು ಪಾಕಿಸ್ತಾನಕ್ಕೆ ಹರಿಯುವ ನದಿಗಳ ನೀರನ್ನು ತಡೆಯಲು ಕಾಲುವೆಗಳು ಮತ್ತು ಅಣೆಕಟ್ಟುಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ದೇಶದಲ್ಲಿ ಕೃಷಿಗೆ ನೀರಿನ ಅವಶ್ಯಕತೆ ಇರುವುದರಿಂದ ಸರಕಾರ ಈ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗುತ್ತಿದೆ; ಆದರೆ ಇದರ ಮೂಲ ಉದ್ದೇಶ ಮಾತ್ರ ನೀರನ್ನು ತಡೆಗಟ್ಟುವುದಾಗಿದೆ.
೧. ಪಾಕಿಸ್ತಾನ ಮತ್ತು ಇರಾನ್ ಲಕ್ಷಾಂತರ ಅಫ್ಘಾನ್ ನಿರಾಶ್ರಿತರನ್ನು ತಮ್ಮ ದೇಶದಿಂದ ಹೊರಹಾಕುತ್ತಿವೆ. ಇದರಿಂದ ತಾಲಿಬಾನ್ ಸರಕಾರ ಅಸಮಾಧಾನಗೊಂಡಿದೆ. ಈ ಕಾರಣದಿಂದ ಅದು ನೀರನ್ನು ತಡೆಯುವ ನಿರ್ಧಾರ ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ಹರಿಯುವ ಕುನಾರ್ ನದಿಯ ಮೇಲೆ ಅಫ್ಘಾನಿಸ್ತಾನ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಇದು ಪಾಕಿಸ್ತಾನದಲ್ಲಿ ನೀರು ಸರಬರಾಜು ಮತ್ತು ಪ್ರಾದೇಶಿಕ ಸ್ಥಿರತೆಯ ಬಗ್ಗೆ ಕಳವಳಗಳನ್ನು ಸೃಷ್ಟಿಸಿದೆ.

೨. ಉತ್ತರ ಅಫ್ಘಾನಿಸ್ತಾನದಲ್ಲಿ ೫ ಲಕ್ಷ ೬೦ ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲು ಒಂದು ದೊಡ್ಡ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯು ಕೋಶ್ ಟೆಪಾ ಕಾಲುವೆಯ ಮೇಲೆ ನಡೆಯುತ್ತಿದ್ದು, ಇದರಿಂದ ಅಮೂ ದರ್ಯಾ ಕಾಲುವೆಯ ಶೇ. ೨೧ರಷ್ಟು ನೀರು ಬೇರೆಡೆಗೆ ತಿರುಗುವ ಸಾಧ್ಯತೆಯಿದೆ. ಈ ನದಿಯು ಉಜ್ಬೆಕಿಸ್ತಾನ್, ತುರ್ಕ್ಮೆನಿಸ್ತಾನ್ ಮತ್ತು ಕಜಕಿಸ್ತಾನಕ್ಕೆ ಬಹಳ ಮುಖ್ಯವಾಗಿದೆ.
೩. ಮತ್ತೊಂದೆಡೆ, ಇರಾನ್ನಲ್ಲಿ ಹೆಲ್ಮಂಡ್ ನದಿಯ ಬಗ್ಗೆ ವಿವಾದವಿದೆ. ಎರಡೂ ದೇಶಗಳ ನಡುವೆ ಜಲ ಹಂಚಿಕೆ ಒಪ್ಪಂದವಿದೆ; ಆದರೆ ಹವಾಮಾನ ಬದಲಾವಣೆಯಿಂದಾಗಿ ಈಗ ಹೆಚ್ಚಿನ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ತಾಲಿಬಾನ್ ಸರಕಾರ ಹೇಳಿದೆ.
ಸಂಪಾದಕೀಯ ನಿಲುವುಕೆಲವು ವರ್ಷಗಳ ಹಿಂದೆ, ‘ಮೂರನೇ ಮಹಾಯುದ್ಧ ನೀರಿನ ಕಾರಣದಿಂದ ಆಗಲಿದೆ’ ಎಂದು ಹೇಳಲಾಗಿತ್ತು. ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸುವುದು ಮತ್ತು ಈಗ ಅಫ್ಘಾನಿಸ್ತಾನವು ನೀರನ್ನು ತಡೆಯಲು ಪ್ರಾರಂಭಿಸಿರುವುದರಿಂದ ಇದು ನಿಜವಾಗಲಿದೆ ಎಂದು ಅನಿಸುತ್ತಿದೆ! |
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ