
ನವದೆಹಲಿ – ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ನಾನು ಸಂಘವನ್ನು ಕೇವಲ ‘ತಾಲಿಬಾನ್’ಗೆ ಹೋಲಿಸುತ್ತೇನೆ. ಸಂಘವು ‘ಭಾರತೀಯ ತಾಲಿಬಾನ್’ ಆಗಿದೆ ಮತ್ತು ಪ್ರಧಾನಿ ಕೆಂಪು ಕೋಟೆಯಿಂದ ಸಂಘವನ್ನು ಹೊಗಳುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮಾಜಿ ಸಂಸದ ಬಿ.ಕೆ. ಹರಿಪ್ರಸಾದ ಹೇಳಿದ್ದಾರೆ. ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ‘ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷಗಳು ಪೂರ್ಣಗೊಂಡಿವೆ’ ಈ ನಿಮಿತ್ತ ಅಭಿನಂದಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಹರಿಪ್ರಸಾದ್ ಈ ಮೇಲಿನ ಟೀಕೆ ಮಾಡಿದ್ದಾರೆ.
🔥 Congress Leader’s Hate Rant
B.K. Hariprasad: “RSS is the Indian Taliban!”
❓If RSS were truly ‘Talibani’, would anti-Hindus or other faiths even be alive here? Would Hariprasad enjoy the freedom to spew such words?
He should ask himself if a Hindu could survive under the… pic.twitter.com/KGZJgReBcq
— Sanatan Prabhat (@SanatanPrabhat) August 17, 2025
ಸ್ವಾತಂತ್ರ್ಯ ಹೋರಾಟದಲ್ಲಿ ಸಂಘದ ಯಾವುದೇ ಕೊಡುಗೆ ಇಲ್ಲ! – ಹರಿಪ್ರಸಾದ
1. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಯಾವನಾದರೂ ‘ಸಂಘಿ’ (ಸಂಘದವರು) ಇದ್ದರಾ? ಸಂಘವು ನೋಂದಾಯಿತ ಸಂಘಟನೆಯಲ್ಲದಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಅವರಿಗೆ ಹಣ ಎಲ್ಲಿಂದ ಸಿಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಭಾಜಪ ಮತ್ತು ಸಂಘವು ಇತಿಹಾಸವನ್ನು ವಿರೂಪಗೊಳಿಸುವುದರಲ್ಲಿ ಪರಿಣತರಾಗಿದ್ದಾರೆ. (ಭಾಜಪ ಮತ್ತು ಸಂಘವಲ್ಲ, ಬದಲಾಗಿ ಕಾಂಗ್ರೆಸ್ ಇತಿಹಾಸವನ್ನು ವಿರೂಪಗೊಳಿಸಿದ್ದು, ಈಗ ಅದನ್ನು ಸರಿಪಡಿಸಲಾಗುತ್ತಿದೆ! – ಸಂಪಾದಕರು) ಅವರು ಇತಿಹಾಸವನ್ನು ಮತ್ತೆ ಬರೆಯಲು ಪ್ರಯತ್ನಿಸುತ್ತಿದ್ದಾರೆ.
2. ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳದ ಪ್ರಧಾನಿಯಾಗಿದ್ದ ಎ.ಕೆ. ಫಜಲುಲ್ ಹಕ್ ಮತ್ತು ಸಂಘದ ಚಿಂತಕ ಶ್ಯಾಮಪ್ರಸಾದ ಮುಖರ್ಜಿ ಅವರು ಬಂಗಾಳದ ವಿಭಜನೆಯ ಪ್ರಸ್ತಾವನೆಯನ್ನು ಮೊದಲು ಮಂಡಿಸಿದರು. ಮಹಮ್ಮದ್ ಅಲಿ ಜಿನ್ನಾ ಮತ್ತು ಸಾವರಕರ ಅವರು ಎರಡೂ ಧರ್ಮಗಳಿಗೆ ಪ್ರತ್ಯೇಕ ರಾಜ್ಯ ಅಗತ್ಯ ಎಂದು ನಂಬಿದ್ದರು. (‘ನಂಬುವಂತೆ ಸುಳ್ಳು ಹೇಳಿ ಎಂಬ ವೃತ್ತಿಯ ಕಾಂಗ್ರೆಸ್ಸಿಗರು! ವಿಭಜನೆಯ ಅಪರಾಧಿಗಳು ಯಾರು ಎಂದು ಇಡೀ ಜಗತ್ತಿಗೆ ತಿಳಿದಿದೆ. ಕಾಂಗ್ರೆಸ್ಸಿಗರು ಎಷ್ಟೇ ಸುಳ್ಳು ಹರಡಲು ಪ್ರಯತ್ನಿಸಿದರೂ, ಅವರಿಗೆ ಅದರಿಂದ ಯಾವುದೇ ಲಾಭವಾಗುವುದಿಲ್ಲ! – ಸಂಪಾದಕರು) ಆದರೆ ಈಗ ಮಾತ್ರ ಭಾಜಪದವರು ಇದಕ್ಕಾಗಿ ಕಾಂಗ್ರೆಸ್ ಅನ್ನು ದೂಷಿಸುತ್ತಿದ್ದಾರೆ.
ಕಾಂಗ್ರೆಸ್ನ ‘ತಾಲಿಬಾನ್’ ಮಾನಸಿಕತೆ! – ಭಾಜಪ
ಬಿ.ಕೆ. ಹರಿಪ್ರಸಾದ ಅವರಿಗೆ ಉತ್ತರ ನೀಡಿದ ಭಾಜಪ ವಕ್ತಾರ ಶೆಹಜಾದ ಪೂನಾವಾಲಾ, ‘ಕಾಂಗ್ರೆಸ್ಸಿನದು ‘ತಾಲಿಬಾನ್’ ಮಾನಸಿಕತೆ’ ಎಂದು ಹೇಳಿದ್ದಾರೆ. ಮ. ಗಾಂಧಿ ಮತ್ತು ಜಯಪ್ರಕಾಶ ನಾರಾಯಣ ಅವರು ಸಂಘವನ್ನು ಏಕೆ ಹೊಗಳಿದರು? ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ ಮುಖರ್ಜಿ ಅವರು ಸಂಘದ ಕೇಂದ್ರ ಕಚೇರಿಗೆ ಏಕೆ ಭೇಟಿ ನೀಡಿದರು?’ ಎಂದು ಅವರು ಪ್ರಶ್ನಿಸಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!