ಓರ್ವ ದಂಪತಿಯ ವಿವಾಹ ರದ್ದು

ಜೈಪುರ (ರಾಜಸ್ಥಾನ) – ವಿವಾಹಕ್ಕಿಂತ ಮೊದಲು ಮಹಿಳೆಯು ತನ್ನ ಗಂಭೀರ ಕಾಯಿಲೆಯ ಬಗ್ಗೆ ಆಕೆಯ ಭಾವಿ ಪತಿ ಮತ್ತು ಕುಟುಂಬಕ್ಕೆ ಮಾಹಿತಿ ನೀಡದ ಕಾರಣ ಓರ್ವ ದಂಪತಿಯ ವಿವಾಹವನ್ನು ರಾಜಸ್ಥಾನ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಇದರ ಜೊತೆಗೆ ನ್ಯಾಯಾಲಯವು ಪತಿಯನ್ನು ಎಲ್ಲ ಕ್ರಿಮಿನಲ್ ಮತ್ತು ಆರ್ಥಿಕ ಪ್ರಕರಣಗಳಿಂದ ಮುಕ್ತಗೊಳಿಸಿದೆ. ಮಹಿಳೆಯು ‘ಸ್ಕಿಜೋಫ್ರೇನಿಯಾ’ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ನ್ಯಾಯಾಲಯವು, ‘ಸ್ಕಿಜೋಫ್ರೇನಿಯಾ’ ಕೇವಲ ತಾತ್ಕಾಲಿಕ ಖಿನ್ನತೆಯಲ್ಲ, ಅದು ಒಂದು ಗಂಭೀರ ಮಾನಸಿಕ ಕಾಯಿಲೆ. ಈ ಕಾಯಿಲೆಯು ಓರ್ವ ವ್ಯಕ್ತಿಯನ್ನು ಸಾಮಾನ್ಯ ದಾಂಪತ್ಯ ಜೀವನ ನಡೆಸುವುದರಿಂದ ತಡೆಯಬಹುದು. ಆದ್ದರಿಂದ, ವಿವಾಹಕ್ಕಿಂತ ಮೊದಲು ಮಹಿಳೆಯ ಈ ಗಂಭೀರ ಕಾಯಿಲೆಯ ಬಗ್ಗೆ ಆಕೆಯ ಭಾವಿ ಪತಿಯಿಂದ ಮರೆಮಾಡುವುದು ಹಿಂದೂ ವಿವಾಹ ಕಾಯಿದೆಯ ಕಲಂ 12(1)(ಸಿ) ಪ್ರಕಾರ ವಂಚನೆಯಾಗಿದೆ ಎಂದು ಹೇಳಿದೆ.
ಯಾವ ಪ್ರಕರಣ?
2013 ರಲ್ಲಿ ರಾಜಸ್ಥಾನದ ಕೋಟಾದ ಓರ್ವ ಮಹಿಳೆಯು ಚಿತ್ತೋಡಗಢದ ಓರ್ವ ಪುರುಷನೊಂದಿಗೆ ವಿವಾಹವಾಗಿದ್ದರು. ವಿವಾಹದ ನಂತರ ಮಹಿಳೆಯು ತನ್ನ ಗಂಡನ ಮನೆಯಲ್ಲಿ ಅಸಾಮಾನ್ಯ ವರ್ತನೆ ತೋರಿದರು ಎಂದು ಆರೋಪಿಸಲಾಗಿದೆ. ಈ ಪ್ರಕರಣ ನ್ಯಾಯಾಲಯಕ್ಕೆ ಹೋಯಿತು. ಕೋಟಾದ ಕುಟುಂಬ ನ್ಯಾಯಾಲಯವು 2019 ರಲ್ಲಿ ಪತಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಆದ್ದರಿಂದ, ಪೀಡಿತ ಪತಿಯು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದರು. ಕೊನೆಗೆ 12 ವರ್ಷಗಳ ನ್ಯಾಯಾಲಯ ಹೋರಾಟದ ನಂತರ ಪತಿಗೆ ನ್ಯಾಯ ಸಿಕ್ಕಿತು. ಕಾನೂನು ತಜ್ಞರ ಪ್ರಕಾರ, ಈ ತೀರ್ಪು ಒಂದು ಮಾದರಿ ಉದಾಹರಣೆಯಾಗಿದೆ; ಏಕೆಂದರೆ ಇದರಲ್ಲಿ ನ್ಯಾಯಾಲಯವು ಮಾನಸಿಕ ಕಾಯಿಲೆಯನ್ನು ವಿವಾಹ ರದ್ದುಗೊಳಿಸಲು ಒಂದು ಕಾರಣವೆಂದು ಪರಿಗಣಿಸಿದೆ, ಹಾಗೆಯೇ ಪತಿಯನ್ನು ಎಲ್ಲ ಕ್ರಿಮಿನಲ್ ಮತ್ತು ಆರ್ಥಿಕ ಜವಾಬ್ದಾರಿಗಳಿಂದಲೂ ಮುಕ್ತಗೊಳಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!