ಮಧ್ಯಪ್ರದೇಶ: ಖಚರೋಡ್ನಲ್ಲಿ ‘ಲವ್ ಜಿಹಾದ್’ ವಿರುದ್ಧ ಹಿಂದೂಗಳು ಬೀದಿಗೆ!

ಉಜ್ಜೈನ (ಮಧ್ಯಪ್ರದೇಶ) – ಆಗಸ್ಟ್ 7 ರಂದು ಇಲ್ಲಿನ ಖಚರೋಡ್ನಲ್ಲಿ ಹೆಚ್ಚುತ್ತಿರುವ ‘ಲವ್ ಜಿಹಾದ್’ ಘಟನೆಗಳ ವಿರುದ್ಧ ಹಿಂದೂ ಪಂಚಾಯತ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, 5,000 ಕ್ಕೂ ಹೆಚ್ಚು ಜನರು ಉಜ್ಜೈನ ಗೇಟ್ನಿಂದ ಮೆರವಣಿಗೆ ನಡೆಸಿದರು. ಇದರಲ್ಲಿ ಸಾಧುಗಳು, ಸಂತರು, ಮಹಿಳೆಯರು, ಯುವಕರು ಮತ್ತು ಸಾಮಾಜಿಕ ಸಂಘಟನೆಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಖಚರೋಡ್ ಮಾರುಕಟ್ಟೆಯನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿತ್ತು. ಜಿಹಾದಿ ಪ್ರವೃತ್ತಿಯ ಬೆಂಬಲಿಗ ಸಮುದಾಯವನ್ನು ಆರ್ಥಿಕವಾಗಿ ಬಹಿಷ್ಕರಿಸಲು ಈ ಪಂಚಾಯತ್ನಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.
Ujjain, Khachrod, MP : Boycott Call Against Jihadi Supporters – Hindus hit the streets against Love Jihad!
If Hindus across India take up such spontaneous action, every form of jihad could be crushed in no time!
खाचरोद I उज्जैन
VC: @kscChouhan pic.twitter.com/5mCjxXhq53— Sanatan Prabhat (@SanatanPrabhat) August 9, 2025
1. ಈ ಕಾರ್ಯಕ್ರಮದ ಉದ್ದೇಶ ಹಿಂದೂ ಸಮಾಜವನ್ನು ಜಾಗೃತಗೊಳಿಸುವುದು ಮತ್ತು ಯುವತಿಯರ ಸುರಕ್ಷತೆಯನ್ನು ಖಚಿತಪಡಿಸುವುದು. ಆನಂದ್ ಗಿರಿ ಮಹಾರಾಜ್, ನರೇಂದ್ರ ಗಿರಿ ಮತ್ತು ನೇಪಾಳ ಸಿಂಗ್ ಡೋಡಿಯಾ ಅವರಂತಹ ಭಾಷಣಕಾರರು ಮೆರವಣಿಗೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ಘಟನೆಯು ಈ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಜಾಗೃತಿಗೆ ಉತ್ತೇಜನ ನೀಡಿದೆ.
2. ಹಿಂದೂ ಜಾಗರಣ ಮಂಚ್ನ ಮಾಲ್ವಾ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ಮೋಹಿತ್ ಸೆಂಗರ್ ಅವರು ಮಾತನಾಡಿ, ಕೆಲವು ಜನರು ಸುಳ್ಳು ಪ್ರೀತಿಯ ಜಾಲದಲ್ಲಿ ¯ಹಿಂದೂ ಹೆಣ್ಣುಮಕ್ಕಳನ್ನು ಸಿಲುಕಿಸಿ ಜನಸಂಖ್ಯೆಯ ಅಸಮತೋಲನ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದರು.
ಸಂಪಾದಕೀಯ ನಿಲುವುಹಿಂದೂಗಳು ಎಲ್ಲೆಡೆ ಸ್ವಯಂಪ್ರೇರಿತರಾಗಿ ಇದೇ ರೀತಿ ಮಾಡಿದರೆ, ದೇಶದಲ್ಲಿ ಎಲ್ಲಾ ರೀತಿಯ ಜಿಹಾದ್ ಶೀಘ್ರದಲ್ಲೇ ಕೊನೆಗೊಳ್ಳುವುದು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!