ಮುಸಲ್ಮಾನರು ಮಾಜಿ ಸಂಸದೆ ಸೌ. ನವನಿತ ರಾಣಾ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ! – ಪತಿ, ಶಾಸಕ ರವಿ ರಾಣಾ ಅವರ ಆರೋಪ

  • ‘ಸರ್ ತನ್ ಸೆ ಜುದಾ’ ಬೆದರಿಕೆ ನೀಡಲಾಗಿದೆ ಎಂದೂ ಆರೋಪ

  • ಶಾಸಕ ರವಿ ರಾಣಾ ಅವರು ಸಂಬಂಧಪಟ್ಟವರನ್ನು ಮನೆಗೆ ನುಗ್ಗಿ ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದಾರೆ!

(‘ಸರ್ ತನ್ ಸೆ ಜುದಾ’ ಎಂದರೆ ತಲೆಯನ್ನು ದೇಹದಿಂದ ಬೇರ್ಪಡಿಸುವುದು)

ಅಮರಾವತಿ – ಮಾಜಿ ಸಂಸದೆ ಸವ. ನವನೀತ ರಾಣಾ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ 8 ರಿಂದ 10 ಮುಸ್ಲಿಂ ಯುವಕರು ಭಾಗಿಯಾಗಿದ್ದಾರೆ ಮತ್ತು ಕೊಲೆಗೆ ಸಂಚು ರೂಪಿಸಲಾಗಿದೆ, ಅದಕ್ಕಾಗಿ ಸಭೆಗಳೂ ನಡೆದಿವೆ ಎಂದು ಸ್ವತಂತ್ರ ಶಾಸಕ ರವಿ ರಾಣಾ ಗಂಭೀರವಾಗಿ ಆರೋಪಿಸಿದ್ದಾರೆ. ಪೊಲೀಸರು ಮುಖ್ಯ ಆರೋಪಿ ‘ಇಸಾ’ ಎಂಬ ಮುಸ್ಲಿಂ ಯುವಕನನ್ನು ಮಧ್ಯಪ್ರದೇಶದಿಂದ ಬಂಧಿಸಿದ್ದಾರೆ. ‘ನಾನು ಇಂದು ಕಾನೂನಿನ ಭಾಷೆಯಲ್ಲಿ ಮಾತನಾಡುತ್ತಿದ್ದೇನೆ, ಆದರೆ ಮುಂದಿನ ಬಾರಿ ಮನೆಗೆ ನುಗ್ಗಿ ಹೊಡೆಯುತ್ತೇನೆ’ ಎಂದು ಶಾಸಕ ರಾಣಾ ಎಚ್ಚರಿಕೆ ನೀಡಿದ್ದಾರೆ.

ಅವರು ಮಾತು ಮುಂದುವರೆಸಿ,

1. ಆರೋಪಿಗಳು ನವನೀತ ರಾಣಾ ಅವರಿಗೆ ಅಶ್ಲೀಲ ಭಾಷೆಯಲ್ಲಿ ನಿಂದಿಸಿ ಬೆದರಿಕೆ ಹಾಕಿದ್ದರು. ‘ಸರ್ ತನ್ ಸೆ ಜುದಾ’ ಎಂದು ಸಹ ಹೇಳಿದ್ದರು.

2. ಈ ಘಟನೆಯಲ್ಲಿ ಮುಸ್ಲಿಂ ಯುವಕರು ಭಾಗಿಯಾಗಿರುವುದರಿಂದ, ಇಡೀ ಮುಸ್ಲಿಂ ಸಮುದಾಯವನ್ನು ನಾನು ದೂಷಿಸುವುದಿಲ್ಲ; ಆದರೆ ಸಮುದಾಯವು ಇಂತಹ ಪ್ರವೃತ್ತಿಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಮುಂದಿನ ಬಾರಿ ಕಾನೂನು-ಸುವ್ಯವಸ್ಥೆಯನ್ನು ಪಕ್ಕಕ್ಕಿಡಬೇಕಾಗಬಹುದು.

3. ಯಾವುದೇ ಮಹಿಳೆಯ ಬಗ್ಗೆ ಅಶ್ಲೀಲ ಭಾಷೆ ಬಳಸುವವರಿಗೆ ‘ಏಟಿಗೆ ಎದಿರೇಟು’ ನೀಡಲಾಗುವುದು. ಯುವ ಸ್ವಾಭಿಮಾನ ಪಕ್ಷದ ಕಾರ್ಯಕರ್ತರು ಇಂತಹ ವಿಕೃತಿಯನ್ನು ಸಹಿಸುವುದಿಲ್ಲ.

ಸಂಪಾದಕೀಯ ನಿಲುವು

ಜನಪ್ರತಿನಿಧಿಗಳಿಗೆ ಕೊಲೆ ಬೆದರಿಕೆಗಳು ಬರುತ್ತಿದ್ದರೆ, ಸಾಮಾನ್ಯ ಜನರ ಸುರಕ್ಷತೆಯ ಸ್ಥಿತಿ ಏನಾಗಿರಬಹುದು?