ಕೇನ್ಸ್ ಚಲನಚಿತ್ರೋತ್ಸವದಿಂದ ‘ಖಾಲಿದ್ ಕಾ ಶಿವಾಜಿ’ ಕೈಬಿಡಲಾಗಿದೆ!

ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ತಪ್ಪು ಇತಿಹಾಸ ತೋರಿಸಿದ ‘ಖಾಲಿದ್ ಕಾ ಶಿವಾಜಿ’ ಚಲನಚಿತ್ರವನ್ನು ‘ಕೇನ್ಸ್’ ಚಲನಚಿತ್ರೋತ್ಸವದಿಂದ ಕೈಬಿಡಲಾಗಿದೆ. ಈ ಬಗ್ಗೆ ರಾಜ್ಯ ಸರಕಾರವು ‘ಕೇನ್ಸ್’ಗೆ ಇಮೇಲ್ ಕಳುಹಿಸಿದೆ ಎಂದು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ ಶೆಲಾರ ಅವರು ಪ್ರಸಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ (ಸೆನ್ಸಾರ್ ಶಿಪ್) ಮಂಡಳಿಯು ಈ ಚಲನಚಿತ್ರವನ್ನು ಮರುಪರಿಶೀಲಿಸಿದೆ ಮತ್ತು ಚಲನಚಿತ್ರದ ಸಂಬಂಧಪಟ್ಟವರಿಗೆ ನೋಟಿಸ್ ಕಳುಹಿಸಿದೆ. ವಿಶೇಷ ಸಮಿತಿಯು ಈ ಚಿತ್ರವನ್ನು ‘ಕೇನ್ಸ್’ ಚಲನಚಿತ್ರೋತ್ಸವಕ್ಕಾಗಿ ಆಯ್ಕೆ ಮಾಡಿತ್ತು. ನಾನು ಕೇವಲ ಅದನ್ನು ಘೋಷಿಸಿದೆ. ಈ ಚಲನಚಿತ್ರದ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ. ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಇವೆಲ್ಲವೂ ಕಾನೂನು ಪ್ರಕ್ರಿಯೆಗಳಾಗಿದ್ದು, ತಜ್ಞರು ಈ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ’ ಎಂದು ಶೆಲಾರ್ ಹೇಳಿದ್ದಾರೆ.