ಆನ್‌ ಲೈನ್ ಜೂಜಾಟ ನಿಷೇಧಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು! – Online Rummy Games Ban

  • ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಿಜೇಶ ಪಾಠಕ ಅವರ ಆಶ್ವಾಸನೆ

  • ಆನ್‌ ಲೈನ್ ಜೂಜಾಟ ನಿಯಂತ್ರಣಕ್ಕೆ ರಾಷ್ಟ್ರವ್ಯಾಪಿ ಕಾನೂನು ಜಾರಿಗೆ ‘ಸುರಾಜ್ಯ ಅಭಿಯಾನ’ದ ಬೇಡಿಕೆ

ಲಕ್ಷಣಪುರಿ (ಉತ್ತರ ಪ್ರದೇಶ) – ದೇಶಾದ್ಯಂತ ವೇಗವಾಗಿ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟದಿಂದ (‘ರಿಯಲ್ ಮನಿ ಗೇಮಿಂಗ್’ನಿಂದ) ಲಕ್ಷಾಂತರ ಕುಟುಂಬಗಳು ನಾಶವಾಗುತ್ತಿದ್ದು, ಸಾವಿರಾರು ಕೋಟಿ ರೂಪಾಯಿಗಳ ಲೂಟಿಯಾಗುತ್ತಿದೆ. ಇದನ್ನು ಕೇವಲ ರಾಜ್ಯ ಮಟ್ಟದಲ್ಲಿ ಕಾನೂನು ಮಾಡಿ ನಿಯಂತ್ರಿಸುವುದು ಸಾಕಾಗುವುದಿಲ್ಲ, ಬದಲಾಗಿ ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಮತ್ತು ಪರಿಣಾಮಕಾರಿ ಕಾನೂನು ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ವು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಿಜೇಶ ಪಾಠಕ ಅವರನ್ನು ಖುದ್ದಾಗಿ ಭೇಟಿ ಮಾಡಿ, ಭಾರತೀಯ ಸಂವಿಧಾನದ ಕಲಂ 252ರ ಅಡಿಯಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿತು. ಇದಕ್ಕೆ ಉಪ ಮುಖ್ಯಮಂತ್ರಿ ಬ್ರಿಜೇಶ ಪಾಠಕ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರದಲ್ಲೇ ಕೇಂದ್ರ ಸರಕಾರಕ್ಕೆ ಇಂತಹ ಪ್ರಸ್ತಾವನೆಯನ್ನು ಕಳುಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ‘ಸುರಾಜ್ಯ ಅಭಿಯಾನ’ದ ಉತ್ತರ ಪ್ರದೇಶ ಸಂಯೋಜಕ ಶ್ರೀ. ವಿಶ್ವನಾಥ ಕುಲಕರ್ಣಿ, ಉತ್ತರ ಪ್ರದೇಶ ಸರಕಾರದ ಜಂಟಿ ಕಾರ್ಯದರ್ಶಿ ಶಶಿಕಾಂತ ಶುಕ್ಲಾ, ಸಚಿವಾಲಯ ಸಂಘದ ಮಾಜಿ ಅಧ್ಯಕ್ಷ ಹರಿಶರಣ ಮಿಶ್ರಾ, ಉತ್ತರ ಪ್ರದೇಶ ಸ್ಥಳೀಯ ಸ್ವಯಂ ಆಡಳಿತ ಕೇಂದ್ರೀಯ ಕಂದಾಯ ಸೇವಾ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ಮಿಶ್ರಾ ಮತ್ತು ದಿಲೀಪ ಗುಪ್ತಾ ಉಪಸ್ಥಿತರಿದ್ದರು.