ಹಿಂದುತ್ವನಿಷ್ಠರ ಸಹಾಯದಿಂದ ಆದಿವಾಸಿ ವಿಧವೆ ಫೂಲಾಬಾಯಿ ‘ಹಿಂದೂ ಕಿರಾಣಿ ಅಂಗಡಿ’ ಪ್ರಾರಂಭ !

  • ‘ಸೇವಾ ನ್ಯಾಯ ಉತ್ಥಾನ್ ಫೌಂಡೇಶನ್’ ಮತ್ತು ಸ್ಥಳೀಯ ಸಂಘಟನೆಗಳಿಂದ ಆರ್ಥಿಕ ನೆರವು ಲಭಿಸಿದೆ!

  • ಏಪ್ರಿಲ್‌ನಲ್ಲಿ ಮುಸ್ಲಿಂ ಗುತ್ತಿಗೆದಾರರು ಫೂಲಾಬಾಯಿ ಅವರ ಪತಿಯನ್ನು ಹತ್ಯೆ ಮಾಡಿದ್ದರು!

ರಾಯಸೇನ್ (ಮಧ್ಯಪ್ರದೇಶ) – ಏಪ್ರಿಲ್ 2025 ರಲ್ಲಿ, ಇಲ್ಲಿನ ಫೂಲಾಬಾಯಿ ಎಂಬ ಅಸಹಾಯಕ ವೃದ್ಧ ಆದಿವಾಸಿ ಮಹಿಳೆಯ ಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮರದ ವ್ಯಾಪಾರ ಮಾಡುವ ಮುಸ್ಲಿಂ ಗುತ್ತಿಗೆದಾರರು ಈ ಹತ್ಯೆ ಮಾಡಿದ್ದರು. ಫೂಲಾಬಾಯಿ ಅವರ ಕುಟುಂಬ ಮರಗಳನ್ನು ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುವುದರಿಂದ ಗುತ್ತಿಗೆದಾರರು ಅವರ ಪತಿಯನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ಸರಕಾರ ಫೂಲಾಬಾಯಿ ಅವರಿಗೆ ಆರ್ಥಿಕ ನೆರವನ್ನು ಘೋಷಿಸಿತ್ತು; ಆದರೆ ಅವರ ನಿರಕ್ಷರತೆಯ ಲಾಭ ಪಡೆದ ಸ್ಥಳೀಯರು ಆ ಹಣವನ್ನು ಕಬಳಿಸಿದರು. ಇದರಿಂದ ನ್ಯಾಯಾಲಯದ ಹೋರಾಟಕ್ಕೆ ಫೂಲಾಬಾಯಿ ಅವರ ಬಳಿ ಹಣ ಉಳಿದಿರಲಿಲ್ಲ. ಈ ಕಾರಣದಿಂದ, ‘ಸೇವಾ ನ್ಯಾಯ ಉತ್ಥಾನ್ ಫೌಂಡೇಶನ್’ ಎಂಬ ಹಿಂದೂ ಸ್ವಯಂಸೇವಾ ಸಾಮಾಜಿಕ ಸಂಸ್ಥೆಯ ಸ್ವಾತಿ ಗೋಯಲ್ ಶರ್ಮಾ ಅವರ ಸಹಕಾರದೊಂದಿಗೆ ಫೂಲಾಬಾಯಿ ಅವರು ‘ಹಿಂದೂ ಕಿರಾಣಿ ಅಂಗಡಿ’ಯನ್ನು ಪ್ರಾರಂಭಿಸಿದರು. ಈಗ ಈ ಅಂಗಡಿಯಿಂದ ಬರುವ ಲಾಭದಿಂದ ಫೂಲಾಬಾಯಿ ತಮ್ಮ ನ್ಯಾಯಾಲಯದ ಹೋರಾಟವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ದ ಸದಸ್ಯ ಶ್ರೀ. ಪ್ರಿಯಾಂಕ್ ಕಾನೂನ್‌ಗೋ ಅವರು ‘ಸನಾತನ ಪ್ರಭಾತ್’ಗೆ ಈ ಮಾಹಿತಿ ನೀಡಿದ್ದಾರೆ.

ಹಿಂದೂ ಕಿರಾಣಿ ಅಂಗಡಿಯ ಉದದ್ಘಾಟನೆಯಲ್ಲಿ ಆರ್‌ಎಸ್‌ಎಸ್‌ನ ಸ್ಥಳೀಯ ಕಾರ್ಯವಾಹ ರಾಜೇಂದ್ರಸಿಂಗ್ ಮತ್ತು ಸ್ಥಳೀಯ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು. ಮಧ್ಯಪ್ರದೇಶದ ಹಿಂದುತ್ವನಿಷ್ಠ ಮಾಧ್ಯಮ ‘ಆಯುಧ ಮೀಡಿಯಾ’ದ ಆಶುತೋಷ್ ಮತ್ತು ಇತರರ ವಿಶೇಷ ಕೊಡುಗೆ ಇದಕ್ಕೆ ದೊರೆತಿದೆ.

ಸಂಪಾದಕೀಯ ನಿಲುವು

ಈ ರೀತಿ ಅಸಹಾಯಕ ಹಿಂದೂಗಳಿಗೆ ನೆರವು ನೀಡುವ ಮೂಲಕ ನಿಜ ಅರ್ಥದಲ್ಲಿ ಹಿಂದೂಗಳ ಹಿತಾಸಕ್ತಿಗಳನ್ನು ಕಾಪಾಡಬಹುದು. ಈ ಕಾರ್ಯಕ್ಕಾಗಿ ‘ಸೇವಾ ನ್ಯಾಯ ಉತ್ಥಾನ್ ಫೌಂಡೇಶನ್’ಗೆ ಅಭಿನಂದನೆಗಳು!