ಝಾರ್ಖಂಡ್‌ನ ಬೊಕಾರೊದಲ್ಲಿ ಜಮೀಲ್ ನಿಂದ ಹಿಂದೂ ವಿವಾಹಿತ ಮಹಿಳೆಯ ಅಪಹರಣ

  • ವಿವಾಹಿತೆಯನ್ನು ಬಂಧಿಸಿದ್ದನು

  • ಅಖ್ತರ್ ಮೇಲೆ ೩ ಯುವತಿಯರ ಜೊತೆಗೆ ವಿವಾಹ ಮಾಡಿಕೊಂಡಿರುವ ಆರೋಪ

ಬೊಕಾರೋ (ಝಾರ್ಖಂಡ್) – ಇಲ್ಲಿಯ ಲೋಹಾಂಚಲ ಪ್ರದೇಶದಿಂದ ಒಡಿಶಾದ ಭುವನೇಶ್ವರದಿಂದ ಆರು ತಿಂಗಳಿನಿಂದ ಕಾಣೆಯಾಗಿದ್ದ ಹಿಂದೂ ವಿವಾಹಿತ ಮಹಿಳೆ, ಬೊಕಾರೊದ ಲೋಹಾಂಚಲ್ ಪ್ರದೇಶದಲ್ಲಿ ಜಮೀಲ್ ಅಖ್ತರ್‌ನೊಂದಿಗೆ ಪತ್ತೆಯಾಗಿದ್ದಾಳೆ. ಜಮೀಲ್ ಈ ಸಂತ್ರಸ್ತ ವಿವಾಹಿತ ಮಹಿಳೆಯನ್ನು ಪ್ರೀತಿಸುವಂತೆ ನಟಿಸಿ ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತ ಮಹಿಳೆಯ ತಂದೆ ಒಡಿಶಾದ ಭುವನೇಶ್ವರದ ಮಂಚೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು, ಬೊಕಾರೊದ ಲೋಹಾಂಚಲ್‌ನಲ್ಲಿ ದಾಳಿ ನಡೆಸಿ, ಜಮೀಲ್ ಅಖ್ತರ್‌ನನ್ನು ಹಿಂದೂ ಮಹಿಳೆಯೊಂದಿಗೆ ವಶಕ್ಕೆ ಪಡೆದಿದ್ದಾರೆ.

೧. ಮಹಿಳೆಯ ತಂದೆಯು, ಜಮೀಲ್ ತಮ್ಮ ಮಗಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ, ಮೋಸದಿಂದ ಅಪಹರಿಸಿದ್ದಾನೆ, ಎಂದು ಆರೋಪಿಸಿದ್ದಾರೆ. ಜಮೀಲ್ ಈ ಹಿಂದೆ ಇದೇ ರೀತಿ ಮೂವರು ಹಿಂದೂ ಯುವತಿಯರನ್ನು ಮೋಸಗೊಳಿಸಿ ವಿವಾಹವಾಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ಮಗಳು ವಿವಾಹಿತಳಾಗಿದ್ದು, ಇನ್ನೂ ವಿಚ್ಛೇದನವಾಗಿಲ್ಲ ಎಂದು ತಂದೆ ತಿಳಿಸಿದ್ದಾರೆ.

೨. ಪೊಲೀಸರು ಲೋಹಾಂಚಲ್‌ನಲ್ಲಿರುವ ಮನೆ ಸಂಖ್ಯೆ 161ಕ್ಕೆ ದಾಳಿ ನಡೆಸಿದಾಗ, ಜಮೀಲ್ ಆ ಮಹಿಳೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದನು. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

೩. ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಸಂಜೀವ ಕುಮಾರ್ ಇದನ್ನು ‘ಲವ್ ಜಿಹಾದ್’ನ ಸ್ಪಷ್ಟ ಉದಾಹರಣೆ ಎಂದು ಬಣ್ಣಿಸಿದ್ದಾರೆ. ಜಮೀಲ್ ನಕಲಿ ಹಿಂದೂ ಹೆಸರಿನಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದಾನೆ ಎಂದೂ ಆರೋಪಿಸಲಾಗಿದೆ.

೪. ಜಮೀಲ್‌ನ ಪೂರ್ವ ಇತಿಹಾಸವನ್ನು ಗಮನಿಸಿದರೆ, ಈ ಪ್ರಕರಣ ಗಂಭೀರವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಲವ್ ಜಿಹಾದ ತಡೆಯುವದಕ್ಕಾಗಿ ಕೇವಲ ಕಾನೂನು ಅಷ್ಟೇ ಅಲ್ಲದೆ, ಪ್ರಭಾವಶಾಲಿ ಹಿಂದೂ ಸಂಘಟನೆಗಳ ಅವಶ್ಯಕತೆಯೂ ಇದೆ !