ಸರಸಂಘಚಾಲಕರನ್ನು ಬಂಧಿಸುವಂತೆ ಪರಂಬೀರ್ ಸಿಂಗ್ ಆದೇಶಿಸಿದ್ದರು!

  • ಭಯೋತ್ಪಾದನಾ ನಿಗ್ರಹ ದಳದ ಅಂದಿನ ಅಧಿಕಾರಿ ಮಹಬೂಬ್ ಮುಜಾವರ್ ಅವರ ಮಾಹಿತಿ

  • ಕೇಸರಿ ಭಯೋತ್ಪಾದನೆಯನ್ನು ಸಾಬೀತುಪಡಿಸಲು ಸುಳ್ಳು ತನಿಖೆ ನಡೆಸುವಂತೆ ಸೂಚಿಸಲಾಗಿತ್ತು!

  • ಸಂದೀಪ್ ಡಾಂಗೇ, ರಾಮ್ಜಿ ಕಲಸಂಗ್ರಾ ಅವರ ಹತ್ಯೆಯ ಮಾಹಿತಿ ಕೂಡ!

ಮುಂಬಯಿ – ಮಲೇಗಾಂವ್ ಸ್ಫೋಟ ಪ್ರಕರಣದ ಅಂದಿನ ಪ್ರಮುಖ ತನಿಖಾಧಿಕಾರಿ ಪರಂಬೀರ್ ಸಿಂಗ್ ಅವರು ನನಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಆದೇಶಿಸಿದ್ದರು, ಹಾಗೆಯೇ ಕೇಸರಿ ಭಯೋತ್ಪಾದನೆಯನ್ನು ಸಾಬೀತುಪಡಿಸಲು ಸುಳ್ಳು ತನಿಖೆ ನಡೆಸುವಂತೆ ನನಗೆ ಸೂಚಿಸಿದ್ದರು ಎಂದು ಭಯೋತ್ಪಾದನಾ ನಿಗ್ರಹ ದಳದ ಅಂದಿನ ಅಧಿಕಾರಿ ಮಹಬೂಬ್ ಮುಜಾವರ್ ಬಹಿರಂಗಪಡಿಸಿದ್ದಾರೆ. ಮಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪಿನ ನಂತರ ಅವರು ಒಂದು ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದರು.

ಮುಜಾವರ್ ಅವರು ಮುಂದೆ ಮಾತನಾಡಿ, “ಈ ಪ್ರಕರಣದ ಆರೋಪಿಗಳಾದ ಸಂದೀಪ್ ಡಾಂಗೇ ಮತ್ತು ರಾಮ್ಜಿ ಕಲಸಂಗ್ರಾ ಅವರನ್ನು ಹತ್ಯೆ ಮಾಡಲಾಗಿದೆ; ಆದರೆ ‘ಅವರು ಜೀವಂತವಾಗಿದ್ದಾರೆ’ ಎಂಬ ದೃಷ್ಟಿಯಿಂದ ನನಗೆ ತನಿಖೆ ನಡೆಸುವಂತೆ ಪರಂಬೀರ್ ಸಿಂಗ್ ಆದೇಶಿಸಿದ್ದರು. ನಾನು ಎಲ್ಲ ತಪ್ಪು ವಿಷಯಗಳನ್ನು ವಿರೋಧಿಸಿದೆ ಮತ್ತು ‘ನಾನು ತಪ್ಪು ತನಿಖೆ ಮಾಡುವುದಿಲ್ಲ’ ಎಂದು ಹೇಳಿದೆ. ಇದರಿಂದ ನನ್ನ ಮೇಲೆ ಹಲವಾರು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಯಿತು; ಆದರೆ ನಾನು ಅವುಗಳಿಂದ ನಿರಪರಾಧಿಯಾಗಿ ಬಿಡುಗಡೆಯಾದೆ” ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂಗಳನ್ನು ಭಯೋತ್ಪಾದಕರು ಎಂದು ಸಾಬೀತುಪಡಿಸಲು ಹಿರಿಯ ಪೊಲೀಸರು ತಮ್ಮ ಹುದ್ದೆಯನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! ಇಂತಹವರಿಗೆ ಜೀವಾವಧಿ ಶಿಕ್ಷೆಯಾಗಬೇಕು!
  • ಇದರಿಂದ ಪೊಲೀಸರ ಮೇಲಿದ್ದ ಕೊಂಚ ನಂಬಿಕೆಯೂ ಸಂಪೂರ್ಣವಾಗಿ ನಾಶವಾಗಿದೆ. ಇಂತಹ ಪೊಲೀಸರನ್ನು ಯಾರಾದರೂ ‘ಖಾಕಿ ಸಮವಸ್ತ್ರಧಾರಿ ಭಯೋತ್ಪಾದಕರು’ ಎಂದು ಕರೆದರೆ ಆಶ್ಚರ್ಯಪಡಬೇಕಾಗಿಲ್ಲ!