ಎ.ಟಿ.ಎಸ್ನ ದೋಷಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ! – ವಕೀಲ ಸಂಜೀವ ಪುನಾಳೇಕರ್

ನ್ಯಾಯಾಲಯವು ತೀರ್ಪಿನಲ್ಲಿ ಭಯೋತ್ಪಾದನಾ ವಿರೋಧಿ ದಳದ (ಎ.ಟಿ.ಎಸ್) ತನಿಖೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ನ್ಯಾಯವು 17 ವರ್ಷಗಳ ನಂತರ ದೊರೆತಿದೆ. ಈ ಪ್ರಕ್ರಿಯೆಯಲ್ಲಿ ಆರೋಪಿಗಳ 17 ವರ್ಷಗಳು ವ್ಯರ್ಥವಾಗಿವೆ. ಎ.ಟಿ.ಎಸ್. ಆರೋಪಿಗಳ ಹೆಸರನ್ನು ಬದಲಾಯಿಸಿ ಬಂಧನಕ್ಕೂ ಮುನ್ನ ‘ಇಂಡಿಯಾ ಬುಲ್ಸ್’ ಸಂಸ್ಥೆಯ ವಿಮಾನದಲ್ಲಿ ಬೇರೆ ರಾಜ್ಯಗಳಿಗೆ ಕರೆದೊಯ್ದಿತ್ತು. ಬಂಧನಕ್ಕೂ ಮುನ್ನ ಅವರ ‘ಬ್ರೈನ್ ಮ್ಯಾಪಿಂಗ್’ (ಸತ್ಯ ಹೊರತೆಗೆಯುವ) ಪರೀಕ್ಷೆಯನ್ನು ನಡೆಸಲಾಗಿತ್ತು. ಇದರ ದಾಖಲೆಗಳು ಎನ್.ಐ.ಎ. ಬಳಿ ಇಲ್ಲ. ಇದರ ಬಗ್ಗೆ ತನಿಖೆಯಾಗಬೇಕು ಎಂದು ನಾವು 2013ರಲ್ಲಿ ಒಂದು ಅರ್ಜಿಯ ಮೂಲಕ ಒತ್ತಾಯಿಸಿದ್ದೆವು. ಈಗ ತೀರ್ಪಿನಲ್ಲಿ ಈ ವಿಷಯಗಳು ಪ್ರಸ್ತಾಪವಾಗಿವೆ. ಆದ್ದರಿಂದ ನಾವು ಈ ಅರ್ಜಿಯನ್ನು ಮುಂದುವರೆಸುತ್ತೇವೆ. ಎ.ಟಿ.ಎಸ್.ನ ದೋಷಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ನಾವು ಪ್ರಯತ್ನಿಸುತ್ತೇವೆ. ಇದರ ಹಿಂದಿನ ಅದೃಶ್ಯ ರಾಜಕೀಯ ಶಕ್ತಿಯನ್ನು ಹೊರಗೆ ತರಲು ನಾವು ಪ್ರಯತ್ನಿಸುತ್ತೇವೆ.
ಮಾಲೇಗಾಂವ್ ಪ್ರಕರಣ ಮುಕ್ತಾಯ; ಆದರೆ ಅನೇಕ ಪ್ರಶ್ನೆಗಳು ಪ್ರಶ್ನಾತೀತವೇ ಉಳಿದಿವೆ! – ವಕೀಲ ವೀರೇಂದ್ರ ಇಚಲಕರಂಜಿಕರ್, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್
ಮಾಲೇಗಾಂವ್ ಪ್ರಕರಣದಲ್ಲಿ ದಿಲೀಪ ಪಾಟಿಲ ಅವರಿಗೆ ಏನಾಯಿತು? ಅವರ ನಾಪತ್ತೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಂದಿನ ಸರಕಾರ ನಿರಾಕರಿಸಿತು. ಈಗಿನ ಸರಕಾರ ಏನು ಮಾಡಲಿದೆ? “ಇಂಡಿಯಾ ಬುಲ್ಸ್” ವಿಮಾನವನ್ನು ಭಯೋತ್ಪಾದನಾ ನಿಗ್ರಹ ದಳ ಖಾಸಗಿಯಾಗಿ ಹೇಗೆ ಬಾಡಿಗೆಗೆ ಪಡೆಯಿತು? ಸರಕಾರ ಆ ಹಣವನ್ನು ವಸೂಲಿ ಮಾಡುವುದೇ? ಸುಧಾಕರ್ ಚತುರ್ವೇದಿ ಅವರ ಮನೆಯಲ್ಲಿ ಆರ್ಡಿಎಕ್ಸ್ ಇಟ್ಟ ಅಧಿಕಾರಿಗಳ ವಿಚಾರಣೆ ನಡೆಯಲಿದೆಯೇ? ಇಂತಹ ಅನೇಕ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಇತಿಹಾಸ ನಮಗೆ ಈ ಪ್ರಶ್ನೆಗಳನ್ನು ಕೇಳುತ್ತದೆ.
‘ಬೆಸ್ಟ್ ಬೇಕರಿ’ಯಿಂದ ಇಬ್ಬರು ಬಿಡುಗಡೆಗೊಂಡರು, ಮಾಲೇಗಾಂವ್ನಿಂದ ಇಬ್ಬರು ಬಿಡುಗಡೆಗೊಂಡರು, ದಾಭೋಳ್ಕರ್ ಪ್ರಕರಣದಲ್ಲಿ ಇಬ್ಬರಿಗೆ ಶಿಕ್ಷೆಯಾಗಿದ್ದು ದುರದೃಷ್ಟಕರ. ಅವರು ಕೂಡ ಉಚ್ಚ ನ್ಯಾಯಾಲಯದಿಂದ ಬಿಡುಗಡೆಗೊಳ್ಳುತ್ತಾರೆ ಮತ್ತು ಹಿಂದೂ ಭಯೋತ್ಪಾದನೆಯ ಉಳಿದ ಪ್ರಕರಣಗಳಲ್ಲಿ ಅವರನ್ನು ಹೇಗೆ ಸಿಲುಕಿಸಲಾಗಿತ್ತು ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ನಾವು ಪ್ರಯತ್ನಿಸುತ್ತೇವೆ.
ಮಹಾರಾಷ್ಟ್ರದಲ್ಲಿ ಎರಡು ಪ್ರತ್ಯೇಕ ತನಿಖಾ ವಿಧಾನಗಳು ರೂಢಿಯಾಗುತ್ತಿದೆಯೇ? ಮತ್ತು ಇದನ್ನು ಕಾಂಗ್ರೆಸ್ ರೂಢಿಸಿತೇ? ಇದೇ ವಿಷಯ ದಾಭೋಳ್ಕರ್, ಪನ್ಸಾರೆ ಪ್ರಕರಣದಲ್ಲಿಯೂ ನಡೆದಿದೆ. ಈ ಪದ್ಧತಿಯನ್ನು ಮುರಿಯಬೇಕು.
ರಾಜಕೀಯ ವ್ಯಕ್ತಿಗಳ ಆರೋಪಗಳಿಂದ ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಬಂತು! – ವಕೀಲ ಪ್ರಕಾಶ್ ಸಾಳಸಿಂಗೀಕರ್ (ಆರೋಪಿ ಸುಧಾಕರ್ ಚತುರ್ವೇದಿ ಅವರ ವಕೀಲರು)
ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ 6 ಜನರು ಸಾವನ್ನಪ್ಪಿದರು, 101 ಜನರು ಗಾಯಗೊಂಡರು. ಹೀಗಿರುವಾಗ, ಅಂದಿನ ವಿವಿಧ ರಾಜಕೀಯ ವ್ಯಕ್ತಿಗಳು ನೀಡಿದ ಹೇಳಿಕೆಗಳಿಂದ ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಬಂತು. ಇದರಿಂದಾಗಿಯೇ ನಡೆದ ತನಿಖೆ ಮತ್ತು ಸಲ್ಲಿಸಿದ ಆರೋಪಪತ್ರಗಳು ಎಷ್ಟು ತಪ್ಪಾಗಿದ್ದವು ಎಂಬುದನ್ನು ಎನ್ಐಎ (ರಾಷ್ಟ್ರೀಯ ತನಿಖಾ ದಳ) ಅದರಲ್ಲಿ ಸ್ವತಃ ಮಂಡಿಸಿದೆ. 2016ರಲ್ಲಿ ಎನ್ಐಎ ಸಲ್ಲಿಸಿದ ಆರೋಪಪತ್ರದಲ್ಲಿ, ಅನೇಕ ಸಾಕ್ಷಿದಾರರನ್ನು ‘ಟಾರ್ಚರ್’ (ಹಿಂಸಿಸಿ) ಮಾಡಿ ಅವರಿಂದ ಹೇಳಿಕೆಗಳನ್ನು ಪಡೆಯಲಾಗಿದೆ ಎಂದು ಎನ್ಐಎಗೆ ತಿಳಿದುಬಂದಿದೆ. ನಂತರ ಆರೋಪಿಗಳನ್ನೂ ‘ಟಾರ್ಚರ್’ ಮಾಡಿ ಅವರಿಂದ ತಪ್ಪೊಪ್ಪಿಗೆಯನ್ನು ಪಡೆಯಲಾಗಿದೆ. ‘ಆರ್ಡಿಎಕ್ಸ್ (ಸ್ಫೋಟಕಗಳನ್ನು) ಸುಧಾಕರ್ ಚತುರ್ವೇದಿ ಅವರ ಮನೆಯಲ್ಲಿ ಇಡಲಾಗಿದೆ’ ಅಂತಹ ಅನೇಕ ತಪ್ಪು ಕೆಲಸಗಳನ್ನು ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಮಾಡಿದೆ ಎಂದು ಎನ್ಐಎಗೆ ತಿಳಿದುಬಂದಿದೆ ಮತ್ತು ಅದನ್ನೇ ನ್ಯಾಯಾಲಯ ಹೇಳಿದೆ. ಆರೋಪಿಗಳಿಗೆ ಶಿಕ್ಷೆ ನೀಡುವಷ್ಟು ಪುರಾವೆ ಲಭ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯಕ್ಕೆ ಬಂದ 325 ಸಾಕ್ಷಿದಾರರಲ್ಲಿ ಯಾರೊಬ್ಬರ ಪುರಾವೆಗಳಿಂದಲೂ ಕೇಸರಿ ಭಯೋತ್ಪಾದನೆ ಇತ್ತು ಎಂದು ಹೊರಬಂದಿಲ್ಲ.
ಷಡ್ಯಂತ್ರ ರಚಿಸಿ ಅನುಕೂಲಕರವಾಗಿ ‘ಫೇಕ್ ನರೇಟಿವ್’ ಅಡಿಯಲ್ಲಿ ಹಿಂದೂ ಸಂತರು ಮತ್ತು ವ್ಯಕ್ತಿಗಳನ್ನು ಸಿಲುಕಿಸಲಾಯಿತು! – ವಕೀಲ ರಣಜಿತ್ ಸಂಗಳೆ, ರಕ್ಷಣಾ ವಕೀಲರು (ಶಂಕರಾಚಾರ್ಯ ಸ್ವಾಮಿ ಅಮೃತಾನಂದ ದೇವತೀರ್ಥ ಅವರ ವಕೀಲರು)

ಸುಧಾಕರ್ ಚತುರ್ವೇದಿ ಅವರ ಮನೆಯಲ್ಲಿ ಆರ್ಡಿಎಕ್ಸ್ (ಸ್ಫೋಟಕಗಳನ್ನು) ಇಡುವಷ್ಟು ಇವರ (ಪೊಲೀಸರ) ಮಿತಿ ದಾಟಲು ಸಾಧ್ಯವಾದರೆ, ಇಲ್ಲಿನ ಮಣ್ಣಿನಲ್ಲಿ ಆರ್ಡಿಎಕ್ಸ್ನ ‘ಟ್ರೇಸ್ಗಳನ್ನು’ (ಅಂಶಗಳನ್ನು) ಬೆರೆಸುವುದು ಕಷ್ಟವಾಗಿರಲಿಲ್ಲ. ಒಬ್ಬ ನಿಷ್ಪಕ್ಷಪಾತ ವ್ಯಕ್ತಿಯಾಗಿ ಇದನ್ನು ನೋಡಿದರೂ, ಆರೋಪಿಗಳ ದೋಷಪೂರಿತ ಸಹಭಾಗಿತ್ವವನ್ನು ಈ ಪ್ರಕರಣದಲ್ಲಿ ಸಾಬೀತುಪಡಿಸಲು ಯಾವುದೇ ದೃಢವಾದ ಪುರಾವೆ ನ್ಯಾಯಾಲಯದ ಮುಂದೆ ಬಂದಿಲ್ಲ. ಭೋಪಾಲ್ ಸಭೆಯ ಸಂಬಂಧದಲ್ಲಿ ಸಾಕ್ಷಿದಾರರಾಗಿ ತೋರಿಸಲ್ಪಟ್ಟ ಜನರು ಅಲ್ಲಿ ಹೋಗಲೇ ಇಲ್ಲ. ಅವರಿಗೆ ಬಲವಂತವಾಗಿ ಸುಳ್ಳು ಹೇಳಿಕೆ ನೀಡುವಂತೆ ಮಾಡಲಾಗಿದೆ. ಯಶ್ಪಾಲ್ ಭಡಾನಾ ಅವರಿಗೆ ಭೋಪಾಲ್ ಜೊತೆ ಯಾವುದೇ ಸಂಬಂಧವಿಲ್ಲದಿದ್ದರೂ, ‘ನೀವು ಆರೋಪಿಗಳಿಗೆ ಚಹಾ, ಉಪಹಾರ ನೀಡಿದ್ದೀರಿ’ ಎಂದು ಸುಳ್ಳು ಸಾಕ್ಷಿ ಹೇಳಲು ಒತ್ತಾಯಿಸಲಾಯಿತು. ಸಂವಿಧಾನದಿಂದ ಪ್ರಮಾಣೀಕರಿಸಿದ ನಿರ್ಧಾರದ ಮೂಲಕ ಅವರು ನಿರಪರಾಧಿಗಳೆಂದು ಸಾಬೀತಾದರು. ಇಂದು ಯಾರಾದರೂ ಈ ತೀರ್ಪಿನ ಬಗ್ಗೆ ಪ್ರಶ್ನೆ ಎತ್ತಿದರೆ, ಅವರು ನ್ಯಾಯವ್ಯವಸ್ಥೆಯ ಮೇಲೆ ಮಾತ್ರವಲ್ಲದೆ, ಸಂವಿಧಾನದ ಮೇಲೂ ಪ್ರಶ್ನೆ ಎತ್ತುತ್ತಿದ್ದಾರೆ. ಮೂಲ ಆರೋಪಿಗಳ ರಕ್ಷಣೆಗಾಗಿ ಮತ್ತು ನಿರಪರಾಧಿಗಳೆಂದು ಬಿಡುಗಡೆಗೊಂಡ ಆರೋಪಿಗಳನ್ನು ಇದರಲ್ಲಿ ಸಿಲುಕಿಸುವ ಕೆಲಸ ಮಾಡಿದವರನ್ನೇ ಈ ಬಾಂಬ್ ಸ್ಫೋಟದ ಬಗ್ಗೆ ಕೇಳಬೇಕು. ಷಡ್ಯಂತ್ರ ರಚಿಸಿ, ಅನುಕೂಲಕರವಾಗಿ ‘ಫೇಕ್ ನರೇಟಿವ್’ (ಸುಳ್ಳು ಕಥಾನಕ) ಅಡಿಯಲ್ಲಿ ಹಿಂದೂ ಸಂತರು, ವ್ಯಕ್ತಿಗಳನ್ನು ಇದರಲ್ಲಿ ಸಿಲುಕಿಸಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ