ವಾರಣಾಸಿ (ಉತ್ತರ ಪ್ರದೇಶ) ಇಲ್ಲಿ ‘ಅಲ್ಲಾಹು ಅಕ್ಬರ್’ ಹೇಳಲು ನಿರಾಕರಿಸಿದ ಕಾವಡ ಯಾತ್ರಾರ್ಥಿಗಳ ಮೇಲೆ ಹಲ್ಲೆ – Varanasi Muslims Attack Kanwar Yatris

ಓರ್ವ ಯಾತ್ರಾರ್ಥಿಗೆ ಗಂಭೀರ ಗಾಯ

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿ ‘ಹರ್ ಹರ್ ಮಹಾದೇವ’ ಮತ್ತು ‘ಬಂ ಭೋಲೆ’ ಘೋಷಣೆಗಳನ್ನು ಕೂಗುತ್ತಾ ಹೋಗುತ್ತಿದ್ದ ಕಾವಡ ಯಾತ್ರಾರ್ಥಿಗಳ ಮೇಲೆ ‘ಅಲ್ಲಾಹು ಅಕ್ಬರ್’ ಹೇಳಲು ಮತ್ತು ಮತಾಂತರಗೊಳ್ಳಲು ಮತಾಂಧ ಮುಸ್ಲಿಮರು ಒತ್ತಡ ಹೇರಿದ್ದಾರೆ. ಯಾತ್ರಾರ್ಥಿಗಳು ನಿರಾಕರಿಸಿದಾಗ ಅವರ ಮೇಲೆ ಹಲ್ಲೆ ಮಾಡಲಾಯಿತು. ಇದರಲ್ಲಿ ಒಬ್ಬ ಯಾತ್ರಾರ್ಥಿ ಗಾಯಗೊಂಡಿದ್ದಾರೆ. ಪೊಲೀಸರು ಈ ಸಂಬಂಧ 6 ಮುಸ್ಲಿಮರನ್ನು ಬಂಧಿಸಿದ್ದಾರೆ. ಈ ಘಟನೆ ಜುಲೈ 28 ರ ಸಂಜೆ ನಡೆದಿದೆ.

1. ಇಲ್ಲಿನ ಮುಖ್ಯ ಬಜಾರನಲ್ಲಿ ಶುಭಂ ಯಾದವ್ ಮತ್ತು ಪಲ್ಟು ಯಾದವ್ ಕಾವಡ ಹೊತ್ತು ಸಾಗುತ್ತಿದ್ದರು. ಈ ಸಮಯದಲ್ಲಿ 10 ರಿಂದ 12 ಮುಸ್ಲಿಮರು ಅವರನ್ನು ಸುತ್ತುವರೆದರು. ‘ನೀವು ಹುಡುಗಿಯರನ್ನು ಚುಡಾಯಿಸುತ್ತಿದ್ದೀರಿ’ ಎಂದು ಈ ಮುಸ್ಲಿಮರು ಯಾತ್ರಾರ್ಥಿಗಳ ಮೇಲೆ ಸುಳ್ಳು ಆರೋಪ ಮಾಡಿದರು, ಹಾಗೆಯೇ ಅವರು ಕೂಗುತ್ತಿದ್ದ ‘ಹರ್ ಹರ್ ಮಹಾದೇವ್’ ಮತ್ತು ‘ಬೋಲ್ ಬಂ’ ಘೋಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅವರಲ್ಲಿ ಒಬ್ಬ ಮುಸ್ಲಿಂ ಯುವಕ, “ಇಂತಹ ಘೋಷಣೆಗಳನ್ನು ಕೂಗಬೇಡಿ. ನೀವು ‘ಅಲ್ಲಾಹು ಅಕ್ಬರ್’ ಎಂದು ಹೇಳಿ” ಎಂದನು.

2. ಯಾತ್ರಾರ್ಥಿಗಳು ಇದನ್ನು ನಿರ್ಲಕ್ಷಿಸಿ ಮುಂದೆ ಸಾಗಿದರು; ಆದರೆ ಅವರ ಹಿಂದೆಯೇ ಮುಸ್ಲಿಮರು ಹಿಂದೂ ದೇವರುಗಳ ಬಗ್ಗೆ ಅಶ್ಲೀಲ ಟೀಕೆಗಳನ್ನು ಮಾಡಿದರು. ಯಾತ್ರಾರ್ಥಿಗಳು ಇದನ್ನು ವಿರೋಧಿಸಿದಾಗ ಮುಸ್ಲಿಮರು ಹಲ್ಲೆ ಮಾಡಿದರು.

3. ಕಾಶಿಯ ಬಡೈನಿ ಕಲಾ ಗ್ರಾಮದ ಸಂತ್ರಸ್ತ ಯಾತ್ರಾರ್ಥಿ ಪಲ್ಟು ಯಾದವ ಅವರು, ನಾವು ಅದಲಪುರದಿಂದ ನೀರನ್ನು ತೆಗೆದುಕೊಂಡು ಜಂಸಾ ಶಿವಮಂದಿರಕ್ಕೆ ಹೋಗುತ್ತಿದ್ದೆವು. ಆಗ ನಮ್ಮನ್ನು ತಡೆದು ನಮ್ಮ ಮೇಲೆ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರಲಾಯಿತು. ವಿರೋಧಿಸಿದಾಗ ನನ್ನ ತಲೆಯ ಮೇಲೆ ಮಾರಕಾಯುಧದಿಂದ ಹಲ್ಲೆ ಮಾಡಿದರು. ಈ ವೇಳೆ ಶುಭಂ ಓಡಿಹೋಗುತ್ತಿದ್ದಾಗ ಅವನನ್ನೂ ಬೆನ್ನಟ್ಟಿ ಥಳಿಸಿದರು ಎಂದು ತಿಳಿಸಿದ್ದಾರೆ.

4. ಘಟನಾ ಸ್ಥಳದಲ್ಲಿದ್ದ ಇತರ ಕಾವಡ ಯಾತ್ರಾರ್ಥಿಗಳು ಶುಭಂ ಮತ್ತು ಪಲ್ಟು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಈ ಘಟನೆಯ ನಂತರ ಆಕ್ರೋಶಗೊಂಡ ಯಾತ್ರಾರ್ಥಿಗಳು ಮತ್ತು ಹಿಂದೂ ಸಂಘಟನೆಗಳು ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆದರು. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು; ಆದರೆ ಯಾತ್ರಾರ್ಥಿಗಳು ಕಠಿಣ ಕ್ರಮದ ಬೇಡಿಕೆಗಾಗಿ ಆಂದೋಲನದಲ್ಲಿ ದೃಢವಾಗಿ ನಿಂತರು. ಇದರ ನಂತರ, 12 ಆರೋಪಿಗಳ ವಿರುದ್ಧ ಹಲ್ಲೆ, ದರೋಡೆ, ಮತಾಂತರದ ಒತ್ತಡ ಮತ್ತು ಆಮಿಷಗಳಂತಹ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ ಇದ್ದರೂ ಇಂತಹ ಪರಿಸ್ಥಿತಿ ಇದೆ ಎಂದರೆ, ಇತರ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿರಬಹುದು? ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರ ಅತ್ಯಂತ ಅವಶ್ಯಕವಾಗಿದೆ!