ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ ಚೌಹಾಣ್ ಅವರ ಕಾರ್ಗಿಲ್ ವಿಜಯ ದಿವಸದ ಸಂದೇಶ

ರಾಷ್ಟ್ರ ಸೇವೆಗೆ ಅಗ್ರಗಣ್ಯ ಆದ್ಯತೆ ನೀಡಿ!

ನವದೆಹಲಿ – ‘ಕಾರ್ಗಿಲ್ ವಿಜಯ ದಿವಸ’ ಕೇವಲ ಇತಿಹಾಸವನ್ನು ಸ್ಮರಿಸುವ ದಿನವಲ್ಲ, ಅದರಿಂದ ಸ್ಫೂರ್ತಿ ಪಡೆದು ದೇಶಭಕ್ತಿಯ ಭಾವನೆಯನ್ನು ಇನ್ನಷ್ಟು ಬಲಪಡಿಸುವ ಅವಕಾಶವಾಗಿದೆ. ಪ್ರತಿಯೊಬ್ಬ ನಾಗರಿಕನು ತನ್ನ ಕರ್ತವ್ಯಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ರಾಷ್ಟ್ರ ಸೇವೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಬೇಕು. ಇದು ನಮ್ಮ ವೀರ ಯೋಧರಿಗೆ ನಿಜವಾದ ಶ್ರದ್ಧಾಂಜಲಿಯಾಗಿದೆ. ಈ ಮಾತುಗಳನ್ನು ಜನರಲ್ ಅನಿಲ ಚೌಹಾಣ್, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರು) ಅವರು ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳನ್ನು ತಿಳಿಸುತ್ತಾ ಹೇಳಿದರು.

ಪಾಕಿಸ್ತಾನದ ವಂಚನೆಯ ಸತ್ಯ ಕಥೆ

ಜನರಲ ಚೌಹಾಣ್ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಕಾರ್ಗಿಲ್ ಯುದ್ಧವು ಕೇವಲ ಶೌರ್ಯದ ಕಥೆಯಲ್ಲ, ಆದರೆ ಪಾಕಿಸ್ತಾನದ ವಂಚನೆಯ ಸತ್ಯ ಕಥೆಯೂ ಹೌದು. ಶತ್ರು ಸೇನೆಯು ಭಯೋತ್ಪಾದಕರ ವೇಷದಲ್ಲಿ ತನ್ನ ತರಬೇತಿ ಪಡೆದ ಸೈನಿಕರನ್ನು ಎತ್ತರದ ಪರ್ವತ ಶ್ರೇಣಿಗಳಿಗೆ ಕಳುಹಿಸಿತ್ತು ಮತ್ತು ಮೊದಲೇ ಅಲ್ಲಿ ನೆಲೆಸಿ ಗುಂಡಿನ ದಾಳಿ ನಡೆಸಲು ಸ್ಥಳಗಳನ್ನು ಸಿದ್ಧಪಡಿಸಿತ್ತು. ಆದರೂ, ನಮ್ಮ ಸೈನಿಕರು ನೇರವಾಗಿ ಕಡಿದಾದ ಬೆಟ್ಟಗಳನ್ನು ಏರಿ, ಹಿಮಭರಿತ ಗಾಳಿ ಮತ್ತು ಗುಂಡಿನ ದಾಳಿಯನ್ನು ಎದುರಿಸಿ, ತಮ್ಮ ಪ್ರಾಣವನ್ನು ಲೆಕ್ಕಿಸದೆ ವಿಜಯ ಸಾಧಿಸಿದರು. ಇದು ನಮ್ಮ ಸೈನಿಕರ ಅಸಾಧಾರಣ ಧೈರ್ಯದ ಜೀವಂತ ಉದಾಹರಣೆಯಾಗಿದೆ. ‘ಆಪರೇಷನ್ ಸಿಂಧೂರ್’ ನ ಯಶಸ್ಸು ಸೈನಿಕರ ಶೌರ್ಯವನ್ನು ಮತ್ತೊಮ್ಮೆ ಎತ್ತಿ ಹಿಡಿಯುತ್ತದೆ.