ಕೇದಾರನಾಥ: 7 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಯೋಜನೆ

ಸುರಂಗದಿಂದ 11 ಕಿ.ಮೀ. ಅಂತರ ಕಡಿಮೆ

ನವದೆಹಲಿ – ಉತ್ತರಾಖಂಡದ ಧಾರ್ಮಿಕ ಸ್ಥಳವಾದ ಕೇದಾರನಾಥಕ್ಕೆ ಹೋಗಲು 7 ಕಿ.ಮೀ. ಉದ್ದದ ಸುರಂಗವನ್ನು ನಿರ್ಮಿಸಲು ಕೇಂದ್ರೀಯ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಗೌರಿಕುಂಡದಿಂದ ರಾಂಬಾಡಾ-ಲಿಂಚೋಲಿ ಮಾರ್ಗವಾಗಿ ಕೇದಾರನಾಥ ಧಾಮದವರೆಗೆ ಕಾಲ್ನಡಿಗೆಯ ಮಾರ್ಗವು 16 ಕಿ.ಮೀ. ಉದ್ದವಿದೆ. ಸುರಂಗದ ನಿರ್ಮಾಣದ ನಂತರ, ಈ ಅಂತರವು 11 ಕಿ.ಮೀ. ಕಡಿಮೆಯಾಗಿ ಕೇವಲ 5 ಕಿ.ಮೀ. ಆಗಲಿದೆ. ಈ ಸುರಂಗ ಮಾರ್ಗವನ್ನು ಸಮುದ್ರ ಮಟ್ಟದಿಂದ 6,562 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು. ಕಾಳಿಮಠ ಕಣಿವೆಯ ಕೊನೆಯ ಗ್ರಾಮವಾದ ಚೌಮಾಸಿಯಿಂದ ಲಿಂಚೋಲಿವರೆಗೆ ಈ ಸುರಂಗವನ್ನು ನಿರ್ಮಿಸಲಾಗುವುದು.