Kanwar Yatra Meat : ಫಿರೋಜಾಬಾದ್ (ಉತ್ತರ ಪ್ರದೇಶ) ಇಲ್ಲಿ ಕಾವಡ್ ಯಾತ್ರೆಯ ಮಾರ್ಗದಲ್ಲಿ ಮಾಂಸದ ತುಂಡು ಎಸೆದ ದುಷ್ಕರ್ಮಿಗಳು

ಫಿರೋಜಾಬಾದ್ (ಉತ್ತರ ಪ್ರದೇಶ) – ಜುಲೈ 20 ರಂದು ಸಂಜೆ ಫಿರೋಜಾಬಾದ್ ಜಿಲ್ಲೆಯ ಕೋಟ್ಲಾ ವೃತ್ತದ ಬಳಿ ಇರುವ ಕಾನಡ್ ಯಾತ್ರೆಯ ಮಾರ್ಗದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿರುವುದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆಡಳಿತ ಮಂಡಳಿ ತಕ್ಷಣವೇ ಆ ಮಾರ್ಗವನ್ನು ಸ್ವಚ್ಛಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ.

ಪೊಲೀಸ್ ಅಧಿಕಾರಿ ಸಂಜುಲ ಪಾಂಡೆ ಅವರು ಮಾತನಾಡಿ, “ಕೆಲವು ಸಮಾಜಘಾತುಕ ಶಕ್ತಿಗಳು ಕೋಟ್ಲಾ ವೃತ್ತದ ಮೇಲ್ಸೇತುವೆಯಿಂದ ಮಾಂಸದ ತುಂಡುಗಳು ಇದ್ದ ಚೀಲವನ್ನು ರಸ್ತೆಗೆ ಎಸೆದಿದ್ದಾರೆ. ಈ ಘಟನೆಯ ತನಿಖೆಗಾಗಿ 2 ವಿಶೇಷ ತಂಡಗಳನ್ನು ರಚಿಸಲಾಗಿದೆ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಈ ಅಪರಿಚಿತರು ಯಾರು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ! ಇಂತಹವರ ಧಾರ್ಮಿಕ ಯಾತ್ರೆಯಲ್ಲಿ  ಯಾರಾದರೂ ಅವರಿಗಾಗಿ ನಿಷೇಧಿಸಲಾದ ಪ್ರಾಣಿಯ ಮಾಂಸದ ತುಂಡುಗಳನ್ನು ಎಸೆದರೆ ಏನಾಗುತ್ತದೆ?  ಹಿಂದೂಗಳು ಸಹಿಷ್ಣುರಾಗಿರುವುದರಿಂದ ಅದರ ಲಾಭವನ್ನು ನಿರಂತರವಾಗಿ ಮತ್ತು ವರ್ಷಾನುಗಟ್ಟಲೆ  ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ!