ಈ ಪ್ರಕರಣದ ಬಗ್ಗೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರವರು ಉತ್ತರಿಸಬೇಕು!

ಭುವನೇಶ್ವರ (ಒಡಿಶಾ) – ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ‘ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ’ (‘ಎನ್ಎಸ್ಯುಐ’)ದ ಪ್ರದೇಶಾಧ್ಯಕ್ಷನಾದ ಉದಿತ ಪ್ರಧಾನನನ್ನು 19 ವರ್ಷದ ವಿದ್ಯಾರ್ಥಿನಿ ಮೇಲೆ ಬಲಾತ್ಕಾರ ಮಾಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಮಂಚೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಾಗ ವಿದ್ಯಾರ್ಥಿನಿಯು, ಮಾರ್ಚ್ 18 ರಂದು ಉದಿತ ಪ್ರಧಾನ ತನ್ನನ್ನು ಊಟಕ್ಕಾಗಿ ಒಂದು ಹೋಟೆಲ್ಗೆ ಕರೆದಿದ್ದನು. ಅಲ್ಲಿ ತಂಪು ಪಾನೀಯ ನೀಡಿದ್ದು, ಅದರಲ್ಲಿ ಕೆಲವು ಮಾದಕ ವಸ್ತುಗಳನ್ನು ಬೆರೆಸಲಾಗಿತ್ತು. ನಂತರ ಆರೋಪಿ ತನ್ನನ್ನು ಹೋಟೆಲಿನ ಕೊಠಡಿಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ.
ಕಾಂಗ್ರೆಸ್ಸಿನ ಮೌನವು ಅಪರಾಧಕ್ಕೆ ಬೆಂಬಲ ನೀಡಿದಂತಿದೆ ! – ಭಾಜಪ
Shameful but not surprising.
Udit Pradhan, the Odisha State President of Congress’s student wing, has been arrested for the rape of a 19-year-old engineering student in Bhubaneswar.
This comes close on the heels of another horrific case — where student leaders from both BJD and… pic.twitter.com/MqL0qIqokE
— Amit Malviya (@amitmalviya) July 21, 2025
ಭಾಜಪ ನಾಯಕ ಅಮಿತ್ ಮಾಲವೀಯರವರು ಕಾಂಗ್ರೆಸ್ಸನ್ನು ತೀವ್ರವಾಗಿ ಟೀಕಿಸುತ್ತ, `ಇದು ಅತ್ಯಂತ ನಾಚಿಕೆಗೇಡಿನ ವಿಷಯ; ಆದರೆ ಇದು ಈಗ ಆಶ್ಚರ್ಯಕರವಲ್ಲ. ಈ ಪಕ್ಷಗಳು ತಮ್ಮ ನಾಯಕರಿಗೆ ಎಷ್ಟು ದಿನಗಳವರೆಗೆ ರಕ್ಷಣೆ ನೀಡುತ್ತಲೇ ಇರುತ್ತವೆ ಎಂಬುದು ಪ್ರಶ್ನೆಯಾಗಿದೆ. ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಮೊದಲು ಇನ್ನೆಷ್ಟು ಹುಡುಗಿಯರು ನೋವು ಅನುಭವಿಸಬೇಕು ? ಕಾಂಗ್ರೆಸ್ಸಿನ ಮೌನವು ಅಪರಾಧಗಳಿಗೆ ಒಂದು ರೀತಿಯ ಬೆಂಬಲವೇ ಆಗಿದೆ. ಈಗ ಸಮಯ ಬಂದಿದೆ. ಇಂತಹ ಪ್ರಕರಣಗಳಲ್ಲಿನ ಸತ್ಯವನ್ನು ಹೊರಗೆತರಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ