Haryana Religious Conversion : ಮುಸಲ್ಮಾನ ಯುವಕ ಹಿಂದೂ ಯುವತಿಯನ್ನು ಮದುವೆಯಾದ ಕಾರಣ 3 ಗ್ರಾಮಗಳಿಂದ ಯುವಕನ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ

ಚರಖಿ ದಾದ್ರಿ (ಹರಿಯಾಣ)ದಲ್ಲಿ ನಡೆದ ಘಟನೆ

ಚರಖಿ ದಾದ್ರಿ (ಹರಿಯಾಣ) – ಮಹಾರಾಣಾ ಗ್ರಾಮದಲ್ಲಿ ಮುಸಲ್ಮಾನ ಯುವಕ ಶಾಹಿದ್ ಮತ್ತು ಹಿಂದೂ ಯುವತಿ ಪ್ರೀತಿಯ ವಿವಾಹದಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ಪಾತುವಾಸ್ ಗ್ರಾಮದಲ್ಲಿ ಖೇಡಿ ಸನ್ವಾಲ್, ಮಹಾರಾಣಾ ಮತ್ತು ಪಾತುವಾಸ್ ಈ ಮೂರು ಗ್ರಾಮಗಳ ಜನರು ಜಂಟಿ ಪಂಚಾಯತ್ ಆಯೋಜಿಸಿದ್ದರು. ಈ ಪಂಚಾಯತ್ ಸುಮಾರು 4 ಗಂಟೆಗಳ ಕಾಲ ನಡೆಯಿತು ಮತ್ತು ಇದರಲ್ಲಿ ಮಾಧ್ಯಮಗಳು, ಪೊಲೀಸ್ ಮತ್ತು ಆಡಳಿತಾಧಿಕಾರಿಗಳಿಗೆ ಪ್ರವೇಶವಿರಲಿಲ್ಲ. “ಈ ಮೂರು ಗ್ರಾಮಗಳಲ್ಲಿ ಶಾಹಿದ್ ಕುಟುಂಬದೊಂದಿಗೆ ಯಾವುದೇ ಸಾಮಾಜಿಕ ಸಂಬಂಧವನ್ನು ಇಟ್ಟುಕೊಳ್ಳಲಾಗುವುದಿಲ್ಲ” ಎಂದು ಪಂಚಾಯತ್ನಲ್ಲಿ ನಿರ್ಧರಿಸಲಾಯಿತು. ಉದ್ವಿಗ್ನ ಪರಿಸ್ಥಿತಿಯಿಂದಾಗಿ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಇನ್ನೊಂದೆಡೆ ಶಾಹಿದ್ ಮತ್ತು ಪ್ರೀತಿ ಅವರ ವಿವಾಹ ಈಗ ಮುರಿದುಬಿದ್ದಿದೆ. ಅವರ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದು, ಆ ಸಂಬಂಧ ಅಫಿಡವಿಟ್ ಕೂಡ ಸಲ್ಲಿಸಲಾಗಿದೆ.

ಜುಲೈ 3 ರಂದು ಮಹಾರಾಣಾ ಗ್ರಾಮದ ಸುಮಾರು 25 ವರ್ಷದ ಶಾಹಿದ್, ಅದೇ ಗ್ರಾಮದ ಹಿಂದೂ ಯುವತಿ ಪ್ರೀತಿಯನ್ನು ಮತಾಂತರಗೊಳಿಸಿ ವಿವಾಹವಾದನು. ಜುಲೈ 6 ರಂದು ಈ ಘಟನೆ ಗ್ರಾಮಸ್ಥರಿಗೆ ತಿಳಿದಾಗ, ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗ್ರಾಮದಲ್ಲಿ ಮುಸಲ್ಮಾನರ ಅಂಗಡಿಗಳನ್ನು ಮುಚ್ಚಿಸಿದರು. ಈ ಘಟನೆಯ ನಂತರ ಶಾಹಿದ್ ಮನೆಯ ಹೊರಗೆ ಪೊಲೀಸ್ ಬಂದೋಬಸ್ತ್ ಇರಿಸಲಾಯಿತು.

ಸಂಪಾದಕೀಯ ನಿಲುವು

  • ಇಂತಹ ನಿರ್ಧಾರ ತೆಗೆದುಕೊಳ್ಳುವ ಸನ್ನಿವೇಶ ಪಂಚಾಯತ್‌ಗಳಿಗೆ ಏಕೆ ಬಂತು ಎಂಬುದನ್ನು ವ್ಯವಸ್ಥೆ ಯೋಚಿಸುತ್ತದೆಯೇ ಅಥವಾ ಅವುಗಳನ್ನು ‘ಮತಾಂಧ’ ಎಂದು ಹಣೆಪಟ್ಟಿ ಕಟ್ಟಿ ಸುಮ್ಮನಾಗುತ್ತದೆಯೇ?
  • ಮುಸಲ್ಮಾನ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆಯಾದ ನಂತರ ಮುಸಲ್ಮಾನರಿಂದ ಹಿಂದೂ ಯುವಕನನ್ನು ಹತ್ಯೆ ಮಾಡಲಾಗುತ್ತದೆ ಅಥವಾ ಈ ಯುವಕನನ್ನು ಮುಸಲ್ಮಾನನನ್ನಾಗಿ ಮಾಡಲಾಗುತ್ತದೆ!