
ಕೋಲಕಾತಾ (ಬಂಗಾಳ) / ಗುವಾಹಟಿ (ಅಸ್ಸಾಂ) – ಬಂಗಾಳಿ ದೇಶದ ಎರಡನೇ ಅತಿ ಹೆಚ್ಚು ಆಡು ಭಾಷೆಯಾಗಿದ್ದು, ಅಸ್ಸಾಂನಲ್ಲೂ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಲು ಬಯಸುವವರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದು ಅಸಂವಿಧಾನಿಕ ಮತ್ತು ತಾರತಮ್ಯ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸ್ಸಾಂನ ಭಾಜಪ ಸರಕಾರದ ಮೇಲೆ ಆರೋಪಿಸಿದ್ದಾರೆ.
ನಾವು ನಾಗರಿಕರೊಂದಿಗೆ ಹೋರಾಡುತ್ತಿಲ್ಲ, ನುಸುಳುಕೋರರೊಂದಿಗೆ ಹೋರಾಡುತ್ತಿದ್ದೇವೆ! – ಅಸ್ಸಾಂ ಮುಖ್ಯಮಂತ್ರಿಗಳ ಸ್ಪಷ್ಟೀಕರಣ

ಇದಕ್ಕೆ ಉತ್ತರಿಸಿದ ಅಸ್ಸಾಂ ಮುಖ್ಯಮಂತ್ರಿ ಸರಮಾ, “ಅಸ್ಸಾಂನಲ್ಲಿ ನಾವು ನಮ್ಮದೇ ಜನರೊಂದಿಗೆ ಹೋರಾಡುತ್ತಿಲ್ಲ, ಬದಲಿಗೆ ಗಡಿಯಾಚೆಯಿಂದ ನಡೆಯುತ್ತಿರುವ ನುಸುಳುಕೋರರೊಂದಿಗೆ ಹೋರಾಡುತ್ತಿದ್ದೇವೆ. ಇದರಿಂದ ಅಸ್ಸಾಂನ ಜನಸಂಖ್ಯೆಯಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ. ಅನೇಕ ಜಿಲ್ಲೆಗಳಲ್ಲಿ ಹಿಂದೂಗಳು ಈಗ ಅಲ್ಪಸಂಖ್ಯಾತರಾಗುವ ಹಾದಿಯಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಕೂಡಾ ನುಸುಳುಕೋರರನ್ನು ಬಾಹ್ಯ ಆಕ್ರಮಣವೆಂದು ಪರಿಗಣಿಸಿದೆ. ನಾವು ನಮ್ಮ ಸಂಸ್ಕೃತಿ ಮತ್ತು ಗುರುತನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ; ಆದರೆ ಮಮತಾ ಬ್ಯಾನರ್ಜಿ ಇದನ್ನು ರಾಜಕೀಯಗೊಳಿಸುತ್ತಿದ್ದಾರೆ. ಅಸ್ಸಾಂನಲ್ಲಿ ಅಸ್ಸಾಮಿ, ಬಂಗಾಳಿ, ಬೋಡೋ, ಹಿಂದಿ, ಎಲ್ಲಾ ಭಾಷೆಗಳು ಮತ್ತು ಸಮುದಾಯಗಳು ಒಟ್ಟಾಗಿ ವಾಸಿಸುತ್ತವೆ; ಆದರೆ ಯಾವುದೇ ರಾಜ್ಯ ತನ್ನ ಗಡಿಗಳು ಮತ್ತು ಸಂಸ್ಕೃತಿಯನ್ನು ರಕ್ಷಿಸದಿದ್ದರೆ, ಅದು ಉಳಿಯುವುದಿಲ್ಲ” ಎಂದು ಹೇಳಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದ ನುಸುಳುಕೋರ ಮುಸ್ಲಿಮರು ಬಂಗಾಳಿ ಭಾಷಿಕರಾಗಿರುವುದರಿಂದ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಬಂಗಾಳದಲ್ಲಿನ ನುಸುಳುಕೋರ ಮುಸ್ಲಿಮರನ್ನು ಸಂತುಷ್ಟಗೊಳಿಸಿ ಮತಗಳನ್ನು ಗಳಿಸುವುದು ಅವರ ಪ್ರಯತ್ನವಾಗಿದೆ! |
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ