ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಧಾರ್ಮಿಕ ಚಿಹ್ನೆ ಧರಿಸಲು ಅನುಮತಿ

ನವದೆಹಲಿ – ರೈಲ್ವೆ ನೇಮಕಾತಿ ಪರೀಕ್ಷೆಗಳ ಸಮಯದಲ್ಲಿ ಅಭ್ಯರ್ಥಿಗಳಿಗೆ ಪೇಟ, ಬಿಂದಿ ಮುಂತಾದ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಅನುಮತಿ ನೀಡಲಾಗುವುದು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹೊಸ ಬದಲಾವಣೆಯನ್ನು ‘ಧರ್ಮನಿರಪೇಕ್ಷ ಮಾರ್ಗದರ್ಶಿ ಸೂತ್ರಗಳು’ (ಜಾತ್ಯಾತೀತ ಮಾರ್ಗಸೂಚಿಗಳು) ಎಂದು ಹೆಸರಿಸಿದ್ದಾರೆ. ಈ ಹೊಸ ವ್ಯವಸ್ಥೆಯಲ್ಲಿ, ನಂಬಿಕೆಗಳಿಗೆ ಗೌರವ ನೀಡಲಾಗುವುದು ಮತ್ತು ಪರೀಕ್ಷೆಯ ಪಾರದರ್ಶಕತೆ ಹಾಗೂ ಸುರಕ್ಷತೆ ಮೊದಲಿನಂತೆಯೇ ಕಟ್ಟುನಿಟ್ಟಾಗಿರಲಿವೆ.

ಈ ಮೊದಲು ರೈಲ್ವೆಯ ಪರೀಕ್ಷೆಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ ಹಿಂದೂ, ಸಿಖ್, ಮುಸ್ಲಿಂ ಮತ್ತು ಇತರ ಧರ್ಮಗಳ ಅಭ್ಯರ್ಥಿಗಳು ಹಲವು ಬಾರಿ ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು. ಈ ಕಾರಣಕ್ಕಾಗಿ ಕೆಲವು ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ವಾದ- ವಿವಾದಗಳೂ ಸಹ ಉಂಟಾಗುತ್ತಿದ್ದವು.