
ಜುನ್ನರ್ (ಪುಣೆ), ಜುಲೈ ೧೦ (ವರದಿ) – ಜುನ್ನರ್ ತಾಲೂಕಿನ ಕಾಂದಳಿಯಲ್ಲಿ (ಪುಣೆ ಜಿಲ್ಲೆ) ಇರುವ ಆಶ್ರಮದಲ್ಲಿ ‘ಶ್ರೀ ರಾಮಚಂದ್ರ ದೇವ ಟ್ರಸ್ಟ್ ಏವಂ ಪ.ಪೂ. ಭಕ್ತರಾಜ ಮಹಾರಾಜ ಸಮಾಧಿ ಟ್ರಸ್ಟ್’ ವತಿಯಿಂದ ಜುಲೈ ೯ ಮತ್ತು ೧೦ ರಂದು ಗುರುಪೂರ್ಣಿಮಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಜುಲೈ ೯ ರಂದು ರಾತ್ರಿ ೯ ರಿಂದ ಮಧ್ಯರಾತ್ರಿ ೨ ರವರೆಗೆ ಭಕ್ತರು ಪ.ಪೂ. ಬಾಬಾರವರ ಭಜನೆಗಳನ್ನು ಹಾಡಿದರು. ಜುಲೈ ೧೦ ರಂದು ಬೆಳಿಗ್ಗೆ ೯ ರಿಂದ ೧೦ ರವರೆಗೆ ಪ.ಪೂ. ಬಾಬಾರವರ ಸಮಾಧಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕವನ್ನು ಸೂರತ್ನ ಶ್ರೀ. ನಿಖಿಲ ಪಾಟ್ಕರ್ ಅವರು ಮಾಡಿದರು. ಆ ಸಮಯದಲ್ಲಿ ಶ್ರೀ. ಅತ್ರೆ ಮತ್ತು ಶ್ರೀ. ನಿಖಿಲ ಕುಲಕರ್ಣಿ ಅವರು ಪೌರೋಹಿತ್ಯ ಮಾಡಿದರು. ನಂತರ ಸತ್ಯನಾರಾಯಣ ಪೂಜೆ ನಡೆಯಿತು. ಶ್ರೀ. ಚಂದ್ರಮೋಹನ ಭಾವಸಾರ ಮತ್ತು ಸೌ. ಪ್ರತಿಭಾ ಚಂ. ಭಾವಸಾವರ್ (ಜಳಗಾಂವ) ಅವರು ಸತ್ಯನಾರಾಯಣ ಪೂಜೆಯ ಯಜಮಾನರಾಗಿದ್ದರು, ಮತ್ತು ಶ್ರೀ. ರವಿ ಪೇಠಕರ ಅವರು ಪೂಜೆಯ ಪೌರೋಹಿತ್ಯ ಮಾಡಿದರು. ಬೆಳಿಗ್ಗೆ ೧೧ ರಿಂದ ೧೨ ರವರೆಗೆ ನಾಶಿಕ್ನ ‘ಪ.ಪೂ. ಶಂಕರ ಮಹಾರಾಜ ಭಜನಿ ಮಂಡಳಿ’ಯ ಭಜನೆ ಸೇವೆ ನಡೆಯಿತು. ಕಾರ್ಯಕ್ರಮವು ಮಹಾಪ್ರಸಾದದೊಂದಿಗೆ ಸಮಾಪ್ತಗೊಂಡಿತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ