
ಜುನ್ನರ್ (ಪುಣೆ), ಜುಲೈ ೧೦ (ವರದಿ) – ಜುನ್ನರ್ ತಾಲೂಕಿನ ಕಾಂದಳಿಯಲ್ಲಿ (ಪುಣೆ ಜಿಲ್ಲೆ) ಇರುವ ಆಶ್ರಮದಲ್ಲಿ ‘ಶ್ರೀ ರಾಮಚಂದ್ರ ದೇವ ಟ್ರಸ್ಟ್ ಏವಂ ಪ.ಪೂ. ಭಕ್ತರಾಜ ಮಹಾರಾಜ ಸಮಾಧಿ ಟ್ರಸ್ಟ್’ ವತಿಯಿಂದ ಜುಲೈ ೯ ಮತ್ತು ೧೦ ರಂದು ಗುರುಪೂರ್ಣಿಮಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಜುಲೈ ೯ ರಂದು ರಾತ್ರಿ ೯ ರಿಂದ ಮಧ್ಯರಾತ್ರಿ ೨ ರವರೆಗೆ ಭಕ್ತರು ಪ.ಪೂ. ಬಾಬಾರವರ ಭಜನೆಗಳನ್ನು ಹಾಡಿದರು. ಜುಲೈ ೧೦ ರಂದು ಬೆಳಿಗ್ಗೆ ೯ ರಿಂದ ೧೦ ರವರೆಗೆ ಪ.ಪೂ. ಬಾಬಾರವರ ಸಮಾಧಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕವನ್ನು ಸೂರತ್ನ ಶ್ರೀ. ನಿಖಿಲ ಪಾಟ್ಕರ್ ಅವರು ಮಾಡಿದರು. ಆ ಸಮಯದಲ್ಲಿ ಶ್ರೀ. ಅತ್ರೆ ಮತ್ತು ಶ್ರೀ. ನಿಖಿಲ ಕುಲಕರ್ಣಿ ಅವರು ಪೌರೋಹಿತ್ಯ ಮಾಡಿದರು. ನಂತರ ಸತ್ಯನಾರಾಯಣ ಪೂಜೆ ನಡೆಯಿತು. ಶ್ರೀ. ಚಂದ್ರಮೋಹನ ಭಾವಸಾರ ಮತ್ತು ಸೌ. ಪ್ರತಿಭಾ ಚಂ. ಭಾವಸಾವರ್ (ಜಳಗಾಂವ) ಅವರು ಸತ್ಯನಾರಾಯಣ ಪೂಜೆಯ ಯಜಮಾನರಾಗಿದ್ದರು, ಮತ್ತು ಶ್ರೀ. ರವಿ ಪೇಠಕರ ಅವರು ಪೂಜೆಯ ಪೌರೋಹಿತ್ಯ ಮಾಡಿದರು. ಬೆಳಿಗ್ಗೆ ೧೧ ರಿಂದ ೧೨ ರವರೆಗೆ ನಾಶಿಕ್ನ ‘ಪ.ಪೂ. ಶಂಕರ ಮಹಾರಾಜ ಭಜನಿ ಮಂಡಳಿ’ಯ ಭಜನೆ ಸೇವೆ ನಡೆಯಿತು. ಕಾರ್ಯಕ್ರಮವು ಮಹಾಪ್ರಸಾದದೊಂದಿಗೆ ಸಮಾಪ್ತಗೊಂಡಿತು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ