
ಜುನ್ನರ್ (ಪುಣೆ), ಜುಲೈ ೧೦ (ವರದಿ) – ಜುನ್ನರ್ ತಾಲೂಕಿನ ಕಾಂದಳಿಯಲ್ಲಿ (ಪುಣೆ ಜಿಲ್ಲೆ) ಇರುವ ಆಶ್ರಮದಲ್ಲಿ ‘ಶ್ರೀ ರಾಮಚಂದ್ರ ದೇವ ಟ್ರಸ್ಟ್ ಏವಂ ಪ.ಪೂ. ಭಕ್ತರಾಜ ಮಹಾರಾಜ ಸಮಾಧಿ ಟ್ರಸ್ಟ್’ ವತಿಯಿಂದ ಜುಲೈ ೯ ಮತ್ತು ೧೦ ರಂದು ಗುರುಪೂರ್ಣಿಮಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಜುಲೈ ೯ ರಂದು ರಾತ್ರಿ ೯ ರಿಂದ ಮಧ್ಯರಾತ್ರಿ ೨ ರವರೆಗೆ ಭಕ್ತರು ಪ.ಪೂ. ಬಾಬಾರವರ ಭಜನೆಗಳನ್ನು ಹಾಡಿದರು. ಜುಲೈ ೧೦ ರಂದು ಬೆಳಿಗ್ಗೆ ೯ ರಿಂದ ೧೦ ರವರೆಗೆ ಪ.ಪೂ. ಬಾಬಾರವರ ಸಮಾಧಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕವನ್ನು ಸೂರತ್ನ ಶ್ರೀ. ನಿಖಿಲ ಪಾಟ್ಕರ್ ಅವರು ಮಾಡಿದರು. ಆ ಸಮಯದಲ್ಲಿ ಶ್ರೀ. ಅತ್ರೆ ಮತ್ತು ಶ್ರೀ. ನಿಖಿಲ ಕುಲಕರ್ಣಿ ಅವರು ಪೌರೋಹಿತ್ಯ ಮಾಡಿದರು. ನಂತರ ಸತ್ಯನಾರಾಯಣ ಪೂಜೆ ನಡೆಯಿತು. ಶ್ರೀ. ಚಂದ್ರಮೋಹನ ಭಾವಸಾರ ಮತ್ತು ಸೌ. ಪ್ರತಿಭಾ ಚಂ. ಭಾವಸಾವರ್ (ಜಳಗಾಂವ) ಅವರು ಸತ್ಯನಾರಾಯಣ ಪೂಜೆಯ ಯಜಮಾನರಾಗಿದ್ದರು, ಮತ್ತು ಶ್ರೀ. ರವಿ ಪೇಠಕರ ಅವರು ಪೂಜೆಯ ಪೌರೋಹಿತ್ಯ ಮಾಡಿದರು. ಬೆಳಿಗ್ಗೆ ೧೧ ರಿಂದ ೧೨ ರವರೆಗೆ ನಾಶಿಕ್ನ ‘ಪ.ಪೂ. ಶಂಕರ ಮಹಾರಾಜ ಭಜನಿ ಮಂಡಳಿ’ಯ ಭಜನೆ ಸೇವೆ ನಡೆಯಿತು. ಕಾರ್ಯಕ್ರಮವು ಮಹಾಪ್ರಸಾದದೊಂದಿಗೆ ಸಮಾಪ್ತಗೊಂಡಿತು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ