‘ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ, ಆರ್‌ಎಸ್‌ಎಸ್ (RSS) ಮೇಲೆ ನಿಷೇಧ ಹೇರುತ್ತೇವೆ!’ – ಪ್ರಿಯಾಂಕ್ ಖರ್ಗೆ

ಬೆಂಗಳೂರು – ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮೇಲೆ ಕಾನೂನು ಪ್ರಕ್ರಿಯೆಯಡಿಯಲ್ಲಿ ದೇಶಾದ್ಯಂತ ನಿಷೇಧ ಹೇರಲಾಗುವುದು ಎಂದು ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವರು ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದಾರೆ.

ಪ್ರಿಯಾಂಕ್ ಖರ್ಗೆ ಮುಂದೆ ಮಾತನಾಡಿ,

೧. ದೇಶದಲ್ಲಿ ದ್ವೇಷವನ್ನು ಯಾರು ಹರಡುತ್ತಿದ್ದಾರೆ, ಧಾರ್ಮಿಕ ಹಿಂಸಾಚಾರಕ್ಕೆ ಯಾರು ಕಾರಣ, ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಯಾರು ಮಾತನಾಡುತ್ತಿದ್ದಾರೆ?

೨. ಆರ್‌ಎಸ್‌ಎಸ್ ತನ್ನ ರಾಜಕೀಯ ಶಾಖೆಯಾದ ಬಿಜೆಪಿಗೆ ‘ದೇಶದಲ್ಲಿ ನಿರುದ್ಯೋಗ ಏಕೆ ಹೆಚ್ಚುತ್ತಿದೆ? ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ಹೇಗೆ ನಡೆಯಿತು?’ ಎಂಬಂತಹ ಪ್ರಮುಖ ಪ್ರಶ್ನೆಗಳನ್ನು ಏಕೆ ಕೇಳುತ್ತಿಲ್ಲ? ಇದರ ಬದಲು ಆರ್‌ಎಸ್‌ಎಸ್‌ನ ಜನರು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ.

೩. ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆ (IT Department) ಯಂತಹ ಎಲ್ಲಾ ಸಂಸ್ಥೆಗಳು ಕೇವಲ ವಿರೋಧ ಪಕ್ಷಗಳಿಗಾಗಿಯೇ ಇವೆಯೇ? ಸರಕಾರ ಆರ್‌ಎಸ್‌ಎಸ್‌ನ ತನಿಖೆ ಏಕೆ ಮಾಡುವುದಿಲ್ಲ? ಅವರ ಹಣ ಎಲ್ಲಿಂದ ಬರುತ್ತದೆ? ಅವರ ಆದಾಯದ ಮೂಲ ಯಾವುದು?

೪. ಆರ್‌ಎಸ್‌ಎಸ್‌ನ ಜನರು ದ್ವೇಷಪೂರಿತ ಭಾಷಣಗಳನ್ನು ನೀಡಿ ಮತ್ತು ಸಂವಿಧಾನವನ್ನು ಬದಲಾಯಿಸಿ ಎಂದು ಹೇಳಿ ಹೇಗೆ ತಪ್ಪಿಸಿಕೊಳ್ಳುತ್ತಾರೆ? ಆರ್ಥಿಕ ಅಪರಾಧಗಳನ್ನು ಮಾಡಿ ಹೇಗೆ ತಪ್ಪಿಸಿಕೊಳ್ಳುತ್ತಾರೆ? ಈ ಎಲ್ಲಾ ವಿಷಯಗಳ ಬಗ್ಗೆ ತನಿಖೆ ನಡೆಯಬೇಕು. (೧೯೭೬ ರಲ್ಲಿ ಕಾಂಗ್ರೆಸ್ ಯಾವ ಆಧಾರದ ಮೇಲೆ ಸಂವಿಧಾನವನ್ನು ಬದಲಾಯಿಸಿತು ಎಂಬುದಕ್ಕೆ ಖರ್ಗೆ ಮೊದಲು ಉತ್ತರಿಸಬೇಕು. ಅಲ್ಲದೆ, ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ ನಾಯಕರು ಪ್ರತಿ ಬಾರಿಯೂ ಜನರ ಕಣ್ಣಿಗೆ ಮಣ್ಣೆರಚಲು ಸಾಧ್ಯವಿಲ್ಲ ಎಂಬುದನ್ನೂ ಅವರು ನೆನಪಿನಲ್ಲಿಡಬೇಕು! – ಸಂಪಾದಕರು.)

ಸಂಪಾದಕೀಯ ನಿಲುವು

  • ಕಾಂಗ್ರೆಸ್‌ ಈಗಲೂ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ! ಕಾಂಗ್ರೆಸ್‌ನ ಈ ಮನಸ್ಥಿತಿಯನ್ನು ನೋಡಿದಾಗ, ಈಗ ಬಿಜೆಪಿ ಸರಕಾರವೇ ಕಾಂಗ್ರೆಸ್ ಅನ್ನು ನಿಷೇಧಿಸಲು ಪ್ರಯತ್ನಿಸಬೇಕು!
  • ಕಾಂಗ್ರೆಸ್ ಈ ಹಿಂದೆ ಎರಡು ಬಾರಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಿತ್ತು ಮತ್ತು ನಂತರ ಅದನ್ನು ತೆಗೆದುಹಾಕಿತ್ತು. ಇಂತಹ ಇತಿಹಾಸವಿದ್ದಾಗ, ಮತ್ತೆ ಇಂತಹ ಮೂರ್ಖತನದ ಆಲೋಚನೆ ಮಾಡುವುದು ಕಾಂಗ್ರೆಸ್‌ಗೆ ಆತ್ಮಹತ್ಯೆಯೇ ಆದೀತು!