ಕರ್ಣಾವತಿಯಲ್ಲಿನ ವಿಮಾನ ಅಪಘಾತದ ಹಿಂದೆ ಟರ್ಕಿಯ ಕೈವಾಡವಿದೆಯೇ? ಇದರ ತನಿಖೆಯಾಗಬೇಕು! – ಯೋಗಋಷಿ ರಾಮ್‌ದೇವಬಾಬಾ

ನವದೆಹಲಿ: ನನ್ನ ಮಾಹಿತಿಯ ಪ್ರಕಾರ, ಟರ್ಕಿ ದೇಶದ ಒಂದು ಸಂಸ್ಥೆಯು ಬೋಯಿಂಗ್ ವಿಮಾನಗಳ ನಿರ್ವಹಣಾ ಕೆಲಸವನ್ನು ನೋಡಿಕೊಳ್ಳುತ್ತಿತ್ತು. ವಿಮಾನ ಅಪಘಾತದ ತನಿಖೆ ನಡೆಸುವಾಗ ಈ ವಿಷಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು.

ಕರ್ಣಾವತಿಯಲ್ಲಿನ ವಿಮಾನ ಅಪಘಾತದ ಮೂಲಕ ಟರ್ಕಿಯು ಭಾರತದ ವಿರುದ್ಧ ಸೇಡು ತೀರಿಸಿಕೊಂಡಿದೆಯೇ? ಅಥವಾ ಈ ಸಂಸ್ಥೆಯು ಅಪಘಾತದ ಪಿತೂರಿ ನಡೆಸಿತ್ತೇ? ಎಂದು ಯೋಗಋಷಿ ರಾಮ್‌ದೇವ ಬಾಬಾ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಈ ಅಪಘಾತದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯೂ ಅಪಘಾತ ಸ್ಥಳಕ್ಕೆ ತಲುಪಿದೆ.