|

ಬರೇಲಿ (ಉತ್ತರಪ್ರದೇಶ) – ಕಳೆದ ಒಂದು ವರ್ಷಗಳಿಂದ ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ನಿವಾಸ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ತಯಾರಿಸಿಕೊಡುತ್ತಿದ್ದ ಮಹಮ್ಮದ್ ಫಾಹಿಮ್ ಮತ್ತು ಅವನ ಜೊತೆಗಾರ ಝಿಯಾವುಲ್ ಮುಸ್ತಫ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಲೋಕಕಲ್ಯಾಣ ಕೇಂದ್ರಗಳ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ನಕಲಿ ದಾಖಲೆಗಳು ದೊರೆತವು. ಉತ್ತರಪ್ರದೇಶ, ದೆಹಲಿ, ಬಿಹಾರ ಮತ್ತು ಜಾರ್ಖಂಡ್ ನಲ್ಲಿರುವ ಜನರ ನಕಲಿ ದಾಖಲೆಗಳು ಈ ಇಬ್ಬರ ಬಳಿ ದೊರೆತಿದೆ. ಪೊಲೀಸ್ ಅಧಿಕಾರಿ ಮುಕೇಶ ಚಂದ್ರ ಮಿಶ್ರ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ, ಈ ಇಬ್ಬರು ಆರೋಪಿಗಳು ಕಳೆದ ೧ ವರ್ಷಗಳಿಂದ ನಕಲಿ ದಾಖಲೆಗಳನ್ನು ತಯಾರಿಸುತ್ತಿದ್ದರು ಎಂದು ತಿಳಿಸಿದರು.
೧.ಫಹಿಮ್ ಎಂಬವನು ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕಿನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಕೆಲಸ ಮಾಡುತ್ತಿದ್ದನು ; ಆದರೆ ಅವನು ಜನರಿಂದ ಹೆಚ್ಚು ಹಣ ಪಡೆದು ಕೆಲಸ ಮಾಡುತ್ತಾನೆ, ಎಂದು ದೂರುಗಳು ಬಂದ ನಂತರ ಬ್ಯಾಂಕ್ ನ ಹಿರಿಯರು ಅವನನ್ನು ಕೆಲಸದಿಂದ ವಜಾ ಗೊಳಿಸಿದರು.
೨.ಆ ನಂತರ ೨೦೨೪ ರಲ್ಲಿ ಅವನು ತನ್ನ ಗ್ರಾಮದಲ್ಲಿ ‘ಅಜರಿ ಜನ ಕಲ್ಯಾಣ ಕೇಂದ್ರ ‘ ಮತ್ತು ‘ ಆಧಾರ ಕೇಂದ್ರ ‘ ತೆರೆದನು. ಅಲ್ಲಿ ಅವನು ಝಿಯಾವುಲ್ ಮುಸ್ತಫಾ ಎಂಬವನ ಜೊತೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾನ ಗುರುತಿನ ಚೀಟಿ, ನಿವಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಹೈಸ್ಕೂಲ್ ಆಫ್ ಯುಪಿ ಬೋರ್ಡ್ ನ ನಕಲಿ ಮಾರ್ಕ್ಸ್ ಮುಂತಾದ ದಾಖಲೆಗಳು ತಯಾರಿಸುತ್ತಿದ್ದನು. ಇವರಿಬ್ಬರೂ ಕೇವಲ ೯೦೦ ರೂಪಾಯಿ ಪಡೆದು ನಕಲಿ ದಾಖಲೆಗಳನ್ನು ತಯಾರಿಸಿ ಕೊಡುತ್ತಿದ್ದರು.
೩. ನಕಲಿ ದಾಖಲೆಗಳು ತಯಾರಿಸಿ ಈ ತಂಡ ಇಲ್ಲಿಯವರೆಗೆ ಕೋಟ್ಯಾಂತರ ರೂಪಾಯಿ ಸಂಪಾದಿಸಿದೆ.
ಸಂಪಾದಕೀಯ ನಿಲುವು
|
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein