‘ನಮ್ಮ ಸ್ಥಳ ಬಹಿರಂಗವಾಗಬಾರದು ಎಂಬುದಕ್ಕಾಗಿ ಭಾರತದ ಡ್ರೋನಗಳನ್ನು ತಡೆಯಲಿಲ್ಲವಂತೆ !’

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫರವರಿಂದ ಸಂಸತ್ತಿನಲ್ಲಿ ಹಾಸ್ಯಾಸ್ಪದ ಹೇಳಿಕೆ

ಇಸ್ಲಾಮಾಬಾದ (ಪಾಕಿಸ್ತಾನ) – ನಿನ್ನೆ (ಮೇ ೮ ರಂದು) ನಡೆದ ಡ್ರೋನ ದಾಳಿಯು ಮೂಲತಃ ನಮ್ಮ ಸ್ಥಳವನ್ನು ಪತ್ತೆಹಚ್ಚಲು ಮಾಡಲಾಗಿತ್ತು. ಇದು ಒಂದು ತಾಂತ್ರಿಕ ವಿಷಯವಾಗಿದ್ದು, ಅದನ್ನು ನಾನು ಈ ರೀತಿಯಲ್ಲಿ ಸ್ಪಷ್ಟಪಡಿಸಲು ಸಾಧ್ಯವಿಲ್ಲ. ಆದರೂ ನಮ್ಮ ಸ್ಥಳ ಬಹಿರಂಗವಾಗಬಾರದೆಂದು ಭಾರತೀಯ ಡ್ರೋನ್‌ಗಳನ್ನು ತಡೆಯಲಿಲ್ಲ ಎಂಬ ಹಾಸ್ಯಾಸ್ಪದ ಹೇಳಿಕೆಯನ್ನು ಪಾಕಿಸ್ತಾನದ ರಕ್ಷಣಾ ಸಚಿವರಾದ ಖ್ವಾಜಾ ಆಸಿಫರವರು ಮೇ ೯ ರಂದು ಸಂಸತ್ತಿನಲ್ಲಿ ನೀಡಿದರು. ಈ ಸಂದರ್ಭದಲ್ಲಿ ಅವರು ‘ಟರ್ಕಿ, ಚೀನಾ ಮತ್ತು ಅಜರಬೈಜಾನ ಪಾಕಿಸ್ತಾನದ ಪರವಾಗಿ ಬಹಿರಂಗವಾಗಿ ನಿಂತಿವೆ’ ಎಂಬ ಮಾಹಿತಿಯನ್ನೂ ನೀಡಿದರು.

ಸಂಪಾದಕೀಯ ನಿಲುವು

  • ಇಂತಹ ರಕ್ಷಣಾ ಸಚಿವರಿರುವ ದೇಶವು ಎಂದಿಗಾದರೂ ಭಾರತದೊಂದಿಗೆ ಯುದ್ಧ ಮಾಡಿ ಅದರಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವೇ ?
  • ಇದು ಪಾಕಿಸ್ತಾನದ ಅಸಮರ್ಥತೆಯನ್ನು ಮರೆಮಾಚಲು ಮಾಡಿರುವ ನಾಚಿಕೆಗೇಡಿನ ಹೇಳಿಕೆಯಾಗಿದೆ, ಇದನ್ನು ಪಾಕಿಸ್ತಾನದ ಒಂದು ಸಣ್ಣ ಮಗು ಕೂಡ ಹೇಳಬಲ್ಲದು !

ಮದರಸಾಗಳಲ್ಲಿರುವ ಮಕ್ಕಳು ಎರಡನೇ ರಕ್ಷಣಾ ಪಡೆ! – ಖ್ವಾಜಾ ಆಸಿಫ್

ಖ್ವಾಜಾ ಆಸಿಫರವರು ಮಾತು ಮುಂದುವರೆಸಿ, ಮದರಸಾಗಳಲ್ಲಿ ಕಲಿಯುವ ಮಕ್ಕಳು ಪಾಕಿಸ್ತಾನದ ಎರಡನೇ ರಕ್ಷಣಾ ಪಡೆಯಾಗಿದ್ದಾರೆ. ಅವರು ಧರ್ಮಕ್ಕೆ ಸಂಬಂಧಿಸಿದವರಾಗಿದ್ದಾರೆ ಹಾಗೂ ಇತರ ಅಗತ್ಯಗಳಿಗಾಗಿಯೂ ಅವರನ್ನು ಬಳಸಿಕೊಳ್ಳಬಹುದು. (ಎರಡನೇ ಪಡೆ ಎಂದರೆ ಜಿಹಾದಿ ಭಯೋತ್ಪಾದಕರಾಗಲು ಸಿದ್ಧವಿರುವ ಪಡೆ ! ಆಸಿಫರವರು ನೇರವಾಗಿ ಹೇಳದಿದ್ದರೂ, ಇದುವರೆಗೆ ಆಗಿರುವುದೇ ಅದು. – ಸಂಪಾದಕರು) ನಮ್ಮ ಸೈನ್ಯವು ಗಡಿಯಲ್ಲಿ ಪೂರ್ಣ ಶಕ್ತಿಯಿಂದ ಹೋರಾಡುತ್ತಿದೆ. ಪ್ರತಿಯೊಂದು ವಿಷಯದಲ್ಲೂ ಭಾರತದ ಶಕ್ತಿ ಮತ್ತು ಸೈನ್ಯವು ನಮ್ಮಗಿಂತ ದೊಡ್ಡದಾಗಿದೆ, ಆದರೂ ನಾವು ಅವರೊಂದಿಗೆ ಹೋರಾಡುತ್ತಿದ್ದೇವೆ ಎಂದು ಹೇಳಿದರು. (ಆಸಿಫರವರು ‘ಹೋರಾಡುತ್ತಿದ್ದೇವೆ’ ಎಂಬುದರ ಬದಲು ‘ಏಟು ತಿನ್ನುತ್ತಿದ್ದೇವೆ’ ಎಂದು ಹೇಳಬೇಕಿತ್ತು ! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತದ ಮದರಸಾಗಳಿಂದಲೂ ಪಾಕಿಸ್ತಾನದ ಬೆಂಬಲಕ್ಕೆ ಯಾರಾದರೂ ಹೋರಾಡಲು ಬೀದಿಗಿಳಿದರೆ ಆಶ್ಚರ್ಯಪಡಬೇಕಾಗಿಲ್ಲ!