ಶಿಮ್ಲಾ (ಹಿಮಾಚಲಪ್ರದೇಶ): ಇಲ್ಲಿನ ಸಂಜೌಲಿ ಪ್ರದೇಶದಲ್ಲಿರುವ ಮಸೀದಿಯ ಅಕ್ರಮ ಮಹಡಿಗಳಿಗೆ ಸಂಬಂಧಿಸಿದಂತೆ ಕಳೆದ ೨ ವರ್ಷಗಳಿಂದ ನಡೆಯುತ್ತಿದ್ದ ವಿವಾದಕ್ಕೆ ಈಗ ಮಹಾನಗರ ಪಾಲಿಕೆ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. ಶಿಮ್ಲಾ ಮಹಾನಗರ ಪಾಲಿಕೆ ಆಯುಕ್ತ ಭೂಪಿಂದರ್ ಅತ್ರಿ ಅವರ ನ್ಯಾಯಾಲಯವು ಸಂಪೂರ್ಣ ಮಸೀದಿಯನ್ನು ಅಕ್ರಮವೆಂದು ಘೋಷಿಸಿದ್ದು, ಅದನ್ನು ಈಗ ಸಂಪೂರ್ಣವಾಗಿ ಕೆಡವಲು ಆದೇಶಿಸಲಾಗಿದೆ. ಈ ಹಿಂದೆ ನ್ಯಾಯಾಲಯವು ೨೦೨೪ರ ಅಕ್ಟೋಬರ್ ೫ರಂದು ತೀರ್ಪು ನೀಡುವಾಗ ಮಸೀದಿಯ ಮೇಲಿನ ೩ ಮಹಡಿಗಳನ್ನು ಕೆಡವಲು ಆದೇಶಿಸಿತ್ತು; ಆದರೆ ಮಸೀದಿ ಸಮಿತಿಯು ಈ ಮಹಡಿಗಳನ್ನು ಕೆಡವಿರಲಿಲ್ಲ. (ನ್ಯಾಯಾಲಯವು ಆದೇಶ ನೀಡಿದರೂ ಅಕ್ರಮ ಮಹಡಿಗಳನ್ನು ಕೆಡವದಿದ್ದಕ್ಕಾಗಿ ಮಸೀದಿ ಸಮಿತಿಗೂ ಶಿಕ್ಷೆಯಾಗಬೇಕು! – ಸಂಪಾದಕರು)
🚨 No action on Sanjauli Mosque demolition order even after 7 months!
Hindus protested, order was given, but Mosque Committee hasn’t complied.
Govt must step in, demolish illegal structures & recover costs!#SanjauliMosque #DemolitionOrder https://t.co/hPUurlyDxn pic.twitter.com/0ubMz7WTCR
— Sanatan Prabhat (@SanatanPrabhat) April 18, 2025
ಮಸೀದಿಯ ಭೂಮಿಯ ಮಾಲೀಕತ್ವವನ್ನು ಸಾಬೀತುಪಡಿಸಲು ವಕ್ಫ್ ಮಂಡಳಿಯು ನ್ಯಾಯಾಲಯಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ, ಆಗ ಈ ತೀರ್ಪನ್ನು ತೆಗೆದುಕೊಳ್ಳಲಾಗಿದೆ. ಹಾಗೆಯೇ ಮಸೀದಿಯ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಮಾನ್ಯ ನಕ್ಷೆ ಅಥವಾ ಮಹಾನಗರ ಪಾಲಿಕೆಯ ಅನುಮತಿಯನ್ನು ಸಲ್ಲಿಸಲಾಗಿಲ್ಲ. ವಿಚಾರಣೆಯ ಸಮಯದಲ್ಲಿ ವಕ್ಫ್ ಮಂಡಳಿಯ ವಕೀಲರು, ಈ ಮಸೀದಿಯು ೧೯೪೭ ಕ್ಕಿಂತ ಮೊದಲು ಅಸ್ತಿತ್ವದಲ್ಲಿತ್ತು ಮತ್ತು ಅದನ್ನು ಪುನರ್ನಿರ್ಮಿಸಲಾಗಿದೆ ಎಂದು ವಾದಿಸಿದರು.
ಇದಕ್ಕೆ ನ್ಯಾಯಾಲಯವು, ಈ ಮಸೀದಿಯು ಮೊದಲೇ ಅಸ್ತಿತ್ವದಲ್ಲಿದ್ದರೆ, ಹೊಸ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕೆಯ ಅನುಮತಿಯನ್ನು ಏಕೆ ಪಡೆಯಲಿಲ್ಲ?, ಎಂದು ಪ್ರಶ್ನೆ ಕೇಳಿದೆ.
ಕಳೆದ ವರ್ಷ ನಡೆದ ಘರ್ಷಣೆಯ ನಂತರ ಈ ಪ್ರಕರಣ ಬೆಳಕಿಗೆ ಬಂದಿತು !
೨೦೨೪ರ ಆಗಸ್ಟ್ ೨೯ ರಂದು ಶಿಮ್ಲಾದ ಮಲ್ಯಾನಾ ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಘರ್ಷಣೆ ನಡೆದಿತ್ತು. ಇದರಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದನು. ಈ ಸಮಯದಲ್ಲಿ ಸಂಜೌಲಿ ಮಸೀದಿ ಪ್ರಕರಣವು ಬೆಳಕಿಗೆ ಬಂದಿತು. ಇದರ ನಂತರ ಸಂಜೌಲಿ ಮಸೀದಿಯ ಹೊರಗೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು ಮತ್ತು ಅಕ್ರಮ ನಿರ್ಮಾಣದ ವಿಷಯ ಪ್ರಸ್ತಾಪವಾಯಿತು. ೨೦೨೪ರ ಸೆಪ್ಟೆಂಬರ್ ೧೧ ರಂದು ಹಿಂದೂ ಸಂಘಟನೆಗಳು ಮಸೀದಿಯ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರು ಪೊಲೀಸರು ಹಾಕಿದ್ದ ತಡೆಗೋಡೆಗಳನ್ನು ಕೆಡವಿ ಮಸೀದಿಯ ಕಡೆಗೆ ಧಾವಿಸಿದರು, ಇದರಿಂದ ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು. ಇದರಲ್ಲಿ ಅನೇಕ ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಇದರ ನಂತರ ಮಹಾನಗರ ಪಾಲಿಕೆ ನ್ಯಾಯಾಲಯವು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು.
ಸಂಪಾದಕೀಯ ನಿಲುವುಈ ಹಿಂದೆ ನ್ಯಾಯಾಲಯವು ಮಸೀದಿಯ ೨ ಮಹಡಿಗಳನ್ನು ಅಕ್ರಮವೆಂದು ಘೋಷಿಸಿ ಅವುಗಳನ್ನು ಕೆಡವಲು ಆದೇಶಿಸಿತ್ತು; ಆದರೆ ಹಲವು ತಿಂಗಳುಗಳು ಕಳೆದರೂ ಮಹಡಿಗಳನ್ನು ಕೆಡವಲಾಗಿಲ್ಲ. ಈಗ ಸಂಪೂರ್ಣ ಮಸೀದಿಯನ್ನು ಕೆಡವಲು ಆದೇಶಿಸಿರುವುದರಿಂದಲಾದರೂ ಕ್ರಮ ಕೈಗೊಳ್ಳಲಾಗುತ್ತದೆಯೇ?, ಎನ್ನುವುದೇ ಪ್ರಶ್ನೆ ! |