
೧. ಉಚ್ಚ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದ್ದರಿಂದ ಸಾಧಕನಿಗೆ ೩ ವರ್ಷ ಪುಣೆಯಲ್ಲಿಯೇ ಇರಬೇಕಾಯಿತು
‘೨೫.೫.೨೦೧೯ ರಂದು ‘ಕೇಂದ್ರೀಯ ತನಿಖಾ ದಳ’ವು (‘ಸಿ.ಬಿ.ಐ.’) ನನ್ನನ್ನು ‘ನರೇಂದ್ರ ದಾಭೋಳಕರ ಹತ್ಯೆಯ ಪ್ರಕರಣ’ ದಲ್ಲಿ ಬಂಧಿಸಿತು. ೧೧ ದಿನಗಳ ಪೊಲೀಸ್ ಕಸ್ಟಡಿಯ ನಂತರ ನನ್ನನ್ನು ‘ಯೆರವಾಡಾ ಕೇಂದ್ರ ಕಾರಾಗೃಹ’ಕ್ಕೆ ಕಳುಹಿಸಲಾಯಿತು. ೬.೫.೨೦೨೧ ರಂದು ಮುಂಬೈ ಉಚ್ಚ ನ್ಯಾಯಾಲಯವು ನನಗೆ ಜಾಮೀನು ಮಂಜೂರು ಮಾಡಿತು ಮತ್ತು ೧೩.೫.೨೦೨೧ ರಂದು ನನ್ನನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು; ಆದರೆ ಉಚ್ಚ ನ್ಯಾಯಾಲಯವು ನನಗೆ ಜಾಮೀನು ಮಂಜೂರು ಮಾಡುವಾಗ, ‘ಖಟ್ಲೆ ಮುಗಿಯುವ ವರೆಗೆ ನಾನು ಪುಣೆ ಜಿಲ್ಲೆಯ ಹೊರಗೆ ಹೋಗಬಾರದು’ ಎಂಬ ಷರತ್ತು ವಿಧಿಸಿತ್ತು. ಆದ್ದರಿಂದ ನಾನು ಖಟ್ಲೆ ಮುಗಿಯುವ ವರೆಗೆ, ಅಂದರೆ ಮುಂದಿನ ೩ ವರ್ಷಗಳ ಕಾಲ ಪುಣೆಯಲ್ಲೇ ಇರಬೇಕಾಯಿತು.
೨. ಸಂತರಾದ ತಂದೆಯವರ ನಿಧನವಾಗುವುದು; ಆದರೆ ತಂದೆಯ ಅಂತಿಮ ದರ್ಶನ ಆಗದಿರುವುದು
೨೫.೬.೨೦೨೧ ರಂದು ನನ್ನ ತಂದೆಯ, ಸನಾತನದ ೩೫ ನೆಯ ಸಂತರಾದ ಪೂ. ವೈದ್ಯ ವಿನಯ ನೀಲಕಂಠ ಭಾವೆ ಇವರ ರತ್ನಾಗಿರಿಯಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾದಿಂದ ನಿಧನವಾಯಿತು. ಆಗ ನನಗೆ ಪುಣೆಯ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನನಗೆ ತಂದೆಯ ಅಂತಿಮ ದರ್ಶನಕ್ಕೆ ಹೋಗಲು ಸಾಧ್ಯವಾಗಲಿಲ್ಲ ಮತ್ತು ನಾನು ಒಬ್ಬನೇ ಮಗನಾಗಿದ್ದರೂ ಅವರ ಪಾರ್ಥಿವಕ್ಕೆ ಅಗ್ನಿ ಕೊಡಲು ಸಾಧ್ಯವಾಗಲಿಲ್ಲ. ‘ರತ್ನಾಗಿರಿ ಜಿಲ್ಲೆಯಲ್ಲಿನ ನಮ್ಮ ಊರಿಗೆ ಹೋಗಿ ಹತ್ತನೇ ಮತ್ತು ಹದಿಮೂರನೇ ದಿನಗಳ ವಿಧಿಯನ್ನು ಮಾಡಲು ಅನುಮತಿ ನೀಡಬೇಕು’, ಎಂದು ನಾನು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಯಿತು. ಆ ಅರ್ಜಿ ಆಲಿಕೆಗೆ ಬಂದು ನನ್ನ ಮನವಿಯನ್ನು ಮನ್ನಿಸಲು ೩ ವಾರಗಳು ಬೇಕಾಯಿತು. ಆದ್ದರಿಂದ ನಾನು
ತಂದೆಯ ದೇಹತ್ಯಾಗದ ನಂತರ ಹತ್ತನೇ ಮತ್ತು ಹದಿಮೂರನೇಯ ವಿಧಿಗಳನ್ನೂ ಸರಿಯಾದ ಸಮಯದಲ್ಲಿ ಮಾಡಲು ಸಾಧ್ಯವಾಗಲಿಲ್ಲ.
೩. ಪತ್ನಿಯು ಓರ್ವ ಸಾಧಕಿಯ ಬಗ್ಗೆ ಹೇಳಿದ ಪ್ರಸಂಗ
೩ ಅ. ಓರ್ವ ಸಾಧಕಿಗೆ ಅವಳ ಪತಿಯ ನಿಧನದ ಸಮಯದಲ್ಲಿ ಪತಿಯನ್ನು ಅಂತಿಮ ಸಮಯಲ್ಲಿ ಭೇಟಿಯಾಗಲು ಸಾಧ್ಯವಾಗದ ದುಃಖವು ಅವಳ ಮನಸ್ಸಿನಲ್ಲಿ ಉಳಿಯುವುದು : ೨೦೧೯ ರಲ್ಲಿ ನನಗೆ ಬಂಧಿಸುವ ಮೊದಲು ನಾನು ಪನವೇಲ್ನಲ್ಲಿ ಇರುತ್ತಿದ್ದೆನು ಮತ್ತು ನನ್ನ ಪತ್ನಿ (ಸೌ. ವೈದೇಹಿ) ಗೋವಾದಲ್ಲಿ ಇರುತ್ತಿದ್ದಳು. ಒಮ್ಮೆ ಪತ್ನಿಯೊಂದಿಗೆ ಸಂಚಾರವಾಣಿಯಲ್ಲಿ ಮಾತನಾಡುವಾಗ ಅವಳು, ”ಓರ್ವ ಸಾಧಕಿಯು ಮಾಳಿಗೆಯಲ್ಲಿ ಒಬ್ಬಂಟಿಯಾಗಿ ದುಃಖದಿಂದ ನಿಂತಿದ್ದಳು. ಕೆಲವು ದಿನಗಳ ಹಿಂದೆ ಆ ಸಾಧಕಿಯ ಪತಿ ತೀರಿಕೊಂಡಿದ್ದರು. ಪತಿಯ ಮರಣದ ಸಮಯದಲ್ಲಿ ಅವರು ಸೇವೆಯ ನಿಮಿತ್ತ ಬೇರೆ ರಾಜ್ಯಕ್ಕೆ ಹೋಗಿದ್ದರು. ಆದ್ದರಿಂದ ಅವರಿಗೆ ಪತಿಯ ಕೊನೆಯ ಭೇಟಿ ಆಗಲಿಲ್ಲ. ಆ ಸಾಧಕಿ ನನಗೆ, ”ಪತಿ ತೀರಿಕೊಳ್ಳುವ ಮೊದಲು ಒಮ್ಮೆಯಾದರೂ ನನ್ನ ಯಜಮಾನರ ಕೊನೆಯ ಭೇಟಿ ಆಗಿದ್ದರೆ ಚೆನ್ನಾಗಿತ್ತು !” ಎಂದಳು. ಆಗ ಪತ್ನಿಯು ಅವಳಿಗೆ ಸಮಾಧಾನ ಹೇಳಿದಳು.
೩ ಆ. ಪರಾತ್ಪರ ಗುರು ಡಾ. ಆಠವಲೆ ಯವರು ಸಾಧಕಿಯ ಸ್ಥಿತಿಯ ಬಗ್ಗೆ ನೀಡಿದ ಉತ್ತರವನ್ನು ಪತ್ನಿಯು ಸಂಚಾರವಾಣಿಯಲ್ಲಿ ಹೇಳಿದ್ದರಿಂದ ‘ಪತ್ನಿಯು ಇದೆಲ್ಲವನ್ನು ಏಕೆ ಹೇಳುತ್ತಿದ್ದಾಳೆ ?’, ಎಂಬ ಪ್ರಶ್ನೆ ಬರುವುದು : ಅನಂತರ ಪತ್ನಿಯು ಒಂದು ಸತ್ಸಂಗದಲ್ಲಿ ಗುರುದೇವರಿಗೆ ಮೇಲಿನ ಪ್ರಸಂಗ ಮತ್ತು ಆ ಸಾಧಕಿಯ ಸ್ಥಿತಿಯ ಬಗ್ಗೆ ಕೇಳಿದಳು. ಆಗ ಗುರುದೇವರು, ‘ಇದೆಲ್ಲ ಸಂಸ್ಕಾರಗಳಿಂದ ಆಗುತ್ತಿರುತ್ತದೆ. ‘ಪತಿಯ ಕೊನೆಯ ಭೇಟಿ ಆಗಬೇಕಿತ್ತು’, ಎಂದೆನಿಸುವುದು, ಇದೂ ಸಹ ಒಂದು ಸಂಸ್ಕಾರವೇ ಆಗಿದೆ’. ನಂತರ ಪತ್ನಿಯು ನನಗೆ ಸಂಚಾರವಾಣಿಯಿಂದ ಈ ಪ್ರಸಂಗವನ್ನು ಹೇಳಿದಳು. ಆಗ ನನಗೆ ‘ಈಗ ಅಂತಹದೇನು ಸಂದರ್ಭ ಇಲ್ಲದಿರುವಾಗ ಪತ್ನಿಯು ನನಗೆ ಇದೆಲ್ಲವನ್ನು ಏಕೆ ಹೇಳುತ್ತಿದ್ದಾಳೆ ?’ ಎಂಬ ಪ್ರಶ್ನೆ ಬಂದಿತು. ಆಗ ‘ಪರಾತ್ಪರ ಗುರು ಡಾ. ಆಠವಲೆಯವರಿಂದ ಬಂದ ಮಾತುಗಳನ್ನು ಕೇಳಲು ಸಿಗುತ್ತವೆ, ಇದು ಭಾಗ್ಯದ ವಿಷಯ’, ಎಂದು ವಿಚಾರ ಮಾಡಿ ನಾನು ಆ ಮಾತುಗಳನ್ನು ಕೇಳಿದೆನು.
೩ ಇ. ತಂದೆಯವರಿಗೆ ಅಂತಿಮ ಸಮಯದಲ್ಲಿ ನೋಡಲು ಸಾಧ್ಯವಾಗದಿರುವುದು ಇದರಿಂದ ದುಃಖವಾಗುವುದು ಮತ್ತು ಪರಾತ್ಪರ ಗುರು ಡಾಕ್ಟರರು ಸಾಧಕಿಯ ಪ್ರಸಂಗದ ನೆನಪು ಮತ್ತು ಅದು ಸಂಸ್ಕಾರವಾಗಿದೆ ಎಂಬ ಅರಿವು ಮಾಡಿಕೊಟ್ಟ ಕೂಡಲೇ ಮನಸ್ಸಿನಲ್ಲಿನ ದುಃಖ ಕಡಿಮೆಯಾಗಿ ಕೃತಜ್ಞತೆ ಅನಿಸುವುದು : ಜೂನ್ ೨೦೨೧ ರಲ್ಲಿ ನನ್ನ ತಂದೆಯವರು ದೇಹ ತ್ಯಾಗ ಮಾಡಿದರು ಮತ್ತು ‘ನನಗೂ ಕೂಡ ಅವರಿಗೆ ಅಂತಿಮ ಸಮಯದಲ್ಲಿ ನೋಡಲು ಸಾಧ್ಯವಾಗಲಿಲ್ಲ ಮತ್ತು ಭೇಟಿ ಆಗಲಿಲ್ಲ. ಅವರ ಪಾರ್ಥಿವಕ್ಕೆ ಅಗ್ನಿಯನ್ನೂ ನೀಡಲು ಸಾಧ್ಯವಾಗಲಿಲ್ಲ’, ಈ ವಿಚಾರಗಳಿಂದ ನಾನು ದುಃಖ ಪಡುತ್ತಿದ್ದೆನು. ಆ ಸಮಯದಲ್ಲಿ ಗುರುದೇವರೇ ‘ಆ ಸಾಧಕಿಯ ಮನಸ್ಸಿನಲ್ಲಿರುವ ದುಃಖ ಮತ್ತು ಆ ಕುರಿತು ಪತ್ನಿಯು ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳಿದ ನಂತರ ಅವರು ಮಾಡಿದ ಮಾರ್ಗದರ್ಶನ’, ಈ ಎಲ್ಲದರ ಬಗ್ಗೆ ನನಗೆ ನೆನಪು ಮಾಡಿಕೊಟ್ಟರು. ಅದೇ ಕ್ಷಣದಲ್ಲಿ, ‘ತಂದೆಯವರ ಕೊನೆಯ ಭೇಟಿ ಆಗಬೇಕಿತ್ತು, ಅವರಿಗೆ ಕೊನೆಯದಾಗಿ ನೋಡಲು ಸಿಗಬೇಕಿತ್ತು, ಅವರ ಪಾರ್ಥಿವಕ್ಕೆ ಅಗ್ನಿಯನ್ನು ನೀಡಬೇಕಿತ್ತು’, ಈ ಎಲ್ಲವೂ ನನ್ನ ಸಂಸ್ಕಾರಗಳೇ ಆಗಿವೆ ಮತ್ತು ಇವು ಸಾಧನೆಯಲ್ಲಿ ಅಡ್ಡಿ ತರುತ್ತವೆ; ಆದ್ದರಿಂದ ಅವುಗಳನ್ನು ತೆಗೆದು ಹಾಕಬೇಕು’, ಎಂದು ನನ್ನ ಗಮನಕ್ಕೆ ಬಂದಿತು. ಪತ್ನಿಯು ಹೇಳಿದ ಪ್ರಸಂಗಗಳ ಸಂದರ್ಭವು ಆಗ ನನ್ನ ಗಮನಕ್ಕೆ ಬರುತ್ತಿತ್ತು. ಅದೇ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿನ ದುಃಖವು ದೂರವಾಯಿತು ಮತ್ತು ನನ್ನ ಮನಸ್ಸು ಗುರುದೇವರ ಬಗ್ಗೆ ಕೃತಜ್ಞತೆಯಿಂದ ತುಂಬಿ ಬಂದಿತು.
೪. ಶ್ರೀರಾಮಕೃಷ್ಣ ಪರಮಹಂಸರ ಒಂದು ಪ್ರಸಂಗ
೪ ಅ. ನನಗೆ ರಾಮಕೃಷ್ಣ ಪರಮಹಂಸರ ಜೀವನದಲ್ಲಿನ ಒಂದು ಪ್ರಸಂಗದ ನೆನಪಾಯಿತು. ‘ಶ್ರೀರಾಮಕೃಷ್ಣ ಪರಮಹಂಸರು ಕೆಲವು ದಿನ ಒಬ್ಬರೇ ಕಾಡಿನಲ್ಲಿ ಹೋಗುತ್ತಿದ್ದರು. ಅವರ ಜೊತೆಯಲ್ಲಿ ಶಿಷ್ಯರು ಬರುತ್ತಿದ್ದರೆ, ಅವರು ಶಿಷ್ಯರನ್ನು ಬರಲು ತಡೆಯುತ್ತಿದ್ದರು. ಹೀಗೆ ಅನೇಕ ದಿನಗಳ ವರೆಗೆ ನಡೆದಿತ್ತು. ಆಗ ಕೆಲವು ಶಿಷ್ಯರ ಮನಸ್ಸಿನಲ್ಲಿ ವಿಕಲ್ಪ ಬಂದಿತು. ಅವರು ಶ್ರೀರಾಮಕೃಷ್ಣ ಪರಮಹಂಸರನ್ನು ಕದ್ದು ಹಿಂಬಾಲಿಸಬೇಕೆಂದು ನಿರ್ಧರಿಸಿದರು ಮತ್ತು ಅದೇ ರೀತಿ ಮಾಡಿ ದರು. ಆಗ, ‘ಅವರ ಗುರುದೇವರು ಕಾಡಿನಲ್ಲಿ ಒಂದು ಸ್ಥಳದಲ್ಲಿ ನಿಂತುಕೊಂಡರು. ಅವರು ಸೊಂಟದ ಪಂಜೆ, ಲಂಗೋಟಿ ಮುಂತಾದವುಗಳನ್ನೆಲ್ಲ ಕಳಚಿದರು, ಕೊರಳಲ್ಲಿನ ಜನಿವಾರವನ್ನೂ ತೆಗೆದಿಟ್ಟರು ಮತ್ತು ಅವರು ಧ್ಯಾನಸ್ಥರಾದರು. (ಧ್ಯಾನ ಮಾಡಲು ಕುಳಿತರು) ಕೆಲವು ಸಮಯದ ನಂತರ ಅವರು ಧ್ಯಾನದಿಂದ ಎಚ್ಚೆತ್ತು ಪುನಃ ಬಟ್ಟೆಗಳನ್ನು ಮತ್ತು ಜನಿವಾರವನ್ನು ಧರಿಸಿ ಆಶ್ರಮಕ್ಕೆ ಮರಳಿ ಬರುತ್ತಿದ್ದರು.’ ಈ ರೀತಿ ಸತತವಾಗಿ ಅನೇಕ ದಿನಗಳವರೆಗೆ ನಡೆಯುತ್ತಿತ್ತು. ಎಲ್ಲ ಶಿಷ್ಯರು ಅವರನ್ನು ಕದ್ದು ಹಿಂಬಾಲಿಸಿ ಅದನ್ನೆಲ್ಲ ನೋಡುತ್ತಿದ್ದರು.
೪ ಆ. ಒಂದು ದಿನ ಶಿಷ್ಯರು ಧೈರ್ಯದಿಂದ ಶ್ರೀರಾಮಕೃಷ್ಣ ಪರಮಹಂಸರನ್ನು, ”ಗುರುದೇವಾ, ತಾವು ಒಬ್ಬರೇ ಕಾಡಿನಲ್ಲಿ ಹೋಗುತ್ತೀರಿ. ಆದ್ದರಿಂದ ಸಂದೇಹದಿಂದ ನಾವು ತಮ್ಮನ್ನು ಹಿಂಬಾಲಿಸಿದೆವು. ಅದಕ್ಕಾಗಿ ನಮ್ಮನ್ನು ಕ್ಷಮಿಸಿ; ಆದರೆ ಒಂದು ಪ್ರಶ್ನೆ ಮೂಡುತ್ತಿದೆ, ‘ಎಲ್ಲಿದ್ದರೂ ತಮಗೆ ಧ್ಯಾನ ತಗಲುತ್ತದೆ. ಹೀಗಿರುವಾಗ ಧ್ಯಾನ ಮಾಡಲು ಕಾಡಿನಲ್ಲಿ ಹೋಗುವುದು, ಬಟ್ಟೆಗಳನ್ನು ಮತ್ತು ಜನಿವಾರ ವನ್ನು ತೆಗೆದು ಇಡುವುದು, ಈ ಎಲ್ಲದರ ಅರ್ಥವೇನು ?’ ಎಂದು ಕೇಳಿದರು. ಶ್ರೀರಾಮಕೃಷ್ಣ ಪರಮಹಂಸರು ಅವರಿಗೆ ಉತ್ತರವನ್ನು ನೀಡಿದರು, ”ನಾನು ಎಲ್ಲ ಸಂಸ್ಕಾರಗಳನ್ನು ತೆಗೆದುಹಾಕಲು ಹೀಗೆ ಮಾಡುತ್ತಿದ್ದೇನೆ. ಆಶ್ರಮದಲ್ಲಿ ಧ್ಯಾನ ಮಾಡುವಾಗ ‘ನನ್ನ ಆಶ್ರಮ’ ಎಂಬ ಸಂಸ್ಕಾರವಿರುತ್ತದೆ; ಆದ್ದರಿಂದ ನಾನು ಕಾಡಿನಲ್ಲಿ ಹೋಗಿ ಧ್ಯಾನ ಮಾಡುತ್ತಿದ್ದೆನು. ಮೈಮೇಲೆ ಬಟ್ಟೆಗಳಿದ್ದರೆ, ನಾಚಿಕೆಯ ಸಂಸ್ಕಾರವಾಗುತ್ತದೆ; ಆದ್ದರಿಂದ ನಾನು ಬಟ್ಟೆಗಳನ್ನು ತೆಗೆದಿಡುತ್ತಿದ್ದೆನು ಮತ್ತು ಕೊರಳಿನಲ್ಲಿ ಜನಿವಾರ ಇದ್ದರೆ ‘ನಾನು ಬ್ರಾಹ್ಮಣನಾಗಿದ್ದೇನೆ’, ಎಂಬ ಸಂಸ್ಕಾರವಾಗುತ್ತದೆ; ಆದ್ದರಿಂದ ನಾನು ಅದನ್ನೂ ತೆಗೆದು ಇಡುತ್ತಿದ್ದೆನು. ಮುಂದೆ ಮುಂದೆ ‘ನಾನು ಪುರುಷ’ ಅಥವಾ ‘ನಾನು ಸ್ತ್ರೀ’ ಎಂಬ ಸಂಸ್ಕಾರವೂ ಹೋಗಬೇಕು. ಯಾವಾಗ ಎಲ್ಲ ಸಂಸ್ಕಾರಗಳು ಹೋಗುತ್ತವೆಯೋ, ಆಗಲೇ ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯವಾಗುವುದು !” ಎಂದು ಹೇಳಿದರು. ಹೀಗೆ ಹೇಳಿದನಂತರ ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರಿಗೆ ಸಮಾಧಾನವಾಯಿತು.’
– ಶ್ರೀ. ವಿಕ್ರಮ ವಿನಯ ಭಾವೆ (ವಯಸ್ಸು ೪೨ ವರ್ಷ), ಹಿಂದೂ ವಿಧಿಜ್ಞ ಪರಿಷತ್ತು, ಮುಂಬೈ.