ಉಷ್ಣತೆಯನ್ನು ಕಡಿಮೆ ಮಾಡಲು ಮಾಡಬೇಕಾದ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉಪಾಯಗಳು !

ಸುಶ್ರೀ (ಕು.) ಮಧುರಾ ಭೋಸಲೆ

ಸದ್ಯ ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಆದುದರಿಂದ ಶರೀರದ ಉಷ್ಣತೆ ಹೆಚ್ಚಾಗಿ ಉಷ್ಣತೆಯ ತೊಂದರೆಯಾಗುತ್ತಿದೆ. ಅದೇ ರೀತಿ ಕೆಲವು ದಿನಗಳ ನಂತರ ಭಾರತದಲ್ಲಿ ಬಿಸಿಲಿನ ತಾಪಮಾನ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದ್ದರಿಂದ ಇಂತಹ ಭಯಾನಕ ಬಿಸಿಲಿನ ಬೇಗೆಯನ್ನು ಎದುರಿಸಲು ಪ್ರಭಾವಿ ಉಪಾಯವನ್ನು ತಿಳಿದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ದೇವರ ಕೃಪೆಯಿಂದ ಉಷ್ಣತೆಯ ವಿಧ ಮತ್ತು ಅವುಗಳ ನಿವಾರಣೋಪಾಯದ ಕುರಿತು ಹೊಳೆದಿರುವ ವಿಚಾರಗಳನ್ನು ಇಲ್ಲಿ ಕೊಡಲಾಗಿದೆ.

೧. ಉಷ್ಣತೆಯ ಸ್ತರ, ಉಷ್ಣತೆಯ ಸ್ವರೂಪ ಹಾಗೂ ಉಷ್ಣತೆಯನ್ನು ಕಡಿಮೆಗೊಳಿಸುವ ವಿವಿಧ ಉಪಾಯಗಳು ಉಷ್ಣತೆಯ ಸ್ತರ ಉಷ್ಣತೆಯ ಸ್ವರೂಪ ಉಷ್ಣತೆಯನ್ನು ಕಡಿಮೆ ಮಾಡಲು ಮಾಡಬೇಕಾದ ವಿವಿಧ ಉಪಾಯಗಳು

೨. ದೇಹದಲ್ಲಿನ ಉಷ್ಣತೆಯನ್ನು ಕಡಿಮೆಗೊಳಿಸಲು ಕುಡಿಯುವ ನೀರಿನಲ್ಲಿ ವಿವಿಧ ವನಸ್ಪತಿಗಳನ್ನು ಹಾಕುವುದು

ಟಿಪ್ಪಣಿ – ವಿವಿಧ ಎಲೆಗಳ ರಸ ಅಥವಾ ಎಲೆಗಳನ್ನು ೩ ಗಂಟೆ ನೀರಿನಲ್ಲಿ ನೆನೆಸಿ ಸಿದ್ಧವಾದ ನೀರನ್ನು ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡಿದರೆ ದೇಹದಲ್ಲಿನ ಉಷ್ಣತೆ ಕಡಿಮೆಯಾಗಲು ಸಹಾಯವಾಗುತ್ತದೆ.

೩. ಉಷ್ಣತೆಯಿಂದಾಗುವ ಇತರ ತೊಂದರೆಗಳು ಮತ್ತು ಅವುಗಳಿಗೆ ಉಪಾಯ

೩ ಅ ೧. ತೊಂದರೆ : ಉಷ್ಣತೆಯಿಂದ ದೇಹದ ಎಂಟನೇ ದ್ವಾರದಲ್ಲಿ (ಮೂತ್ರದ್ವಾರದಲ್ಲಿ) ಮತ್ತು ಒಂಬತ್ತನೆ ದ್ವಾರದಲ್ಲಿ (ಗುದದ್ವಾರದ ಮೇಲೆ) ಹುಣ್ಣುಗಳಾಗುತ್ತವೆ.
೩ ಆ. ವಿವಿಧ ಉಪಾಯಗಳು
೩ ಆ ೧. ಶಾರೀರಿಕ ಸ್ತರದ ಉಪಾಯ : ೧ ಚಮಚ ತೇಯ್ದ ಗಂಧವನ್ನು ನೀರಿನಲ್ಲಿ ಮಿಶ್ರಣ ಮಾಡಿ ಆ ನೀರನ್ನು ಸೇವಿಸಿದರೆ ಮಲ-ಮೂತ್ರ ಮಾರ್ಗದಲ್ಲಿ ಹೆಚ್ಚಾಗಿರುವ ಉಷ್ಣತೆ ಕಡಿಮೆಯಾಗಲು ಸಹಾಯವಾಗುತ್ತದೆ.
೩ ಆ ೨. ಆಧ್ಯಾತ್ಮಿಕ ಹಂತದಲ್ಲಿನ ಉಪಾಯ : ದೇಹದ ಎಂಟನೆ ದ್ವಾರ ಮತ್ತು ಒಂಬತ್ತನೆ ದ್ವಾರ (ಮೂತ್ರದ್ವಾರ ಮತ್ತು ಗುದದ್ವಾರ) ದಲ್ಲಿ ಹುಣ್ಣುಗಳಾದರೆ ಸದ್ಗುರು ಡಾ. ಮುಕುಲ ಗಾಡಗೀಳರು ಆ ಸ್ಥಾನಗಳಲ್ಲಿನ ಉಷ್ಣತೆಯನ್ನು ಕಡಿಮೆಗೊಳಿಸಲು ಈ ಮುಂದಿನ ೩ ಪ್ರಕಾರದ ದೇವತೆಗಳ ಸಂಯುಕ್ತ ನಾಮಜಪವನ್ನು ಕಂಡು ಹಿಡಿದಿದ್ದಾರೆ. ‘|| ಶ್ರೀ ಗುರುದೇವದತ್ತ || || ಶ್ರೀಹನುಮತೇ ನಮಃ ||
|| ಓಂ ನಮಃ ಶಿವಾಯ || || ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ ||’ ಈ ನಾಮಜಪವನ್ನು ಆ ತೊಂದರೆ ಕಡಿಮೆಯಾಗುವ ವರೆಗೆ ಪ್ರತಿದಿನ ೧ ಗಂಟೆ ಮಾಡಬೇಕು.

೪. ಕೃತಜ್ಞತೆ

‘ಶ್ರೀ ಗುರುಕೃಪೆಯಿಂದ ಉಷ್ಣತೆಯ ವಿವಿಧ ವಿಧಗಳು ಮತ್ತು ಅವುಗಳ ಮೇಲಿನ ಉಪಾಗಳ ಬಗ್ಗೆ ಜ್ಞಾನ ಸಿಕ್ಕಿತು’, ಅದಕ್ಕಾಗಿ ನಾನು ಭಕ್ತಿಭಾವದಿಂದ ಶ್ರೀ ಗುರುಚರಣಗಳಿಗೆ ಕೃತಜ್ಞತಾ ಪುಷ್ಪಗಳನ್ನು ಸಮರ್ಪಿಸುತ್ತಿದ್ದೇನೆ.’

– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫, ಸನಾತನ ಆಶ್ರಮ, ರಾಮನಾಥಿ ಗೋವಾ. (೭.೩.೨೦೨೫)