
ಕರ್ಣಾವತಿ (ಗುಜರಾತ್) – ಇಲ್ಲಿನ ಶಾ ಅಲಂ ಪ್ರದೇಶದ ಬಳಿಯ ಚಂಡೊಲಾ ಸರೋವರದ ಪ್ರದೇಶದಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಅಕ್ರಮ ಕಟ್ಟಡಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇಲ್ಲಿ 50 ಬುಲ್ಡೋಜರ್ಗಳನ್ನು ನಿಯೋಜಿಸಲಾಗಿದೆ. ಈ ಕ್ರಮದ ವಿರುದ್ಧ ಗುಜರಾತ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕಾನೂನು ಕಾರ್ಯವಿಧಾನಗಳು ಮತ್ತು ನಿಯಮಗಳನ್ನು ಪಾಲಿಸದೆ ಇರುವುದರಿಂದ ಈ ಕೆಡವುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ನಿವಾಸಿಗಳು ನ್ಯಾಯಾಲಯದಲ್ಲಿ ಹೇಳಿದ್ದಾರೆ. “ಇಲ್ಲಿ ವಾಸಿಸುವ ಜನರು ಬಾಂಗ್ಲಾದೇಶಿಯರು ಎಂದು ಸಾಬೀತುಪಡಿಸಲು ಯಾವುದೇ ದೃಢವಾದ ಪುರಾವೆಗಳನ್ನು ಪ್ರಸ್ತುತಪಡಿಸಿಲ್ಲ” ಎಂದು ಅರ್ಜಿದಾರರು ವಾದಿಸಿದರು.
🚨 Karnavati (Ahmedabad): Action taken against illegal constructions by Bangladeshi infiltrators.
Over 1,000 illegal Bangladeshi infiltrators detained earlier 👥
Now, a massive demolition drive near Chandola Lake underway 🚜🏗️
🤔 Were the police & administration asleep while… https://t.co/RgtyucKZYt pic.twitter.com/lBm5okXOMs
— Sanatan Prabhat (@SanatanPrabhat) April 29, 2025
ಕಳೆದ 2 ದಿನಗಳಲ್ಲಿ, ಪೊಲೀಸರು ಈ ಪ್ರದೇಶದಿಂದ 890 ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ 143 ಜನರು ಬಾಂಗ್ಲಾದೇಶಿ ನಾಗರಿಕರು ಎಂದು ಗುರುತಿಸಲಾಗಿದೆ. ಪಹಲ್ಗಾಮ್ನಲ್ಲಿನ ದಾಳಿಯ ನಂತರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಸಂಪಾದಕೀಯ ನಿಲುವುಬಾಂಗ್ಲಾದೇಶಿ ನುಸುಳುಕೋರರು ಇಲ್ಲಿ ನಿರ್ಮಾಣ ಕಾರ್ಯ ಮಾಡುವವರೆಗೂ ಆಡಳಿತ ಮತ್ತು ಪೊಲೀಸರು ನಿದ್ರಿಸುತ್ತಿದ್ದರೇ? |