ಜಲ ಸಿಂಧೂ ಒಪ್ಪಂದವನ್ನು ರದ್ದುಪಡಿಸಿದರೆ ನಾವು ಭಾರತಕ್ಕೆ ಪ್ರತ್ಯುತ್ತರ ನೀಡುವುದು !

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫರವರ ಘೋಷಣೆ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತವು ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿದರೆ, ಪಾಕಿಸ್ತಾನವು ಅದಕ್ಕೆ ತೀವ್ರ ಪ್ರತ್ಯುತ್ತರ ನೀಡಲಿದೆ. ವಿಶ್ವ ಬ್ಯಾಂಕ ಕೂಡ ಸಿಂಧೂ ಜಲ ಒಪ್ಪಂದದಲ್ಲಿ ಸಹಭಾಗಿಯಾಗಿದೆ. ಆದುದರಿಂದ ಭಾರತವು ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಭಾರತದ ಕ್ರಮಕ್ಕೆ ಪಾಕಿಸ್ತಾನವು ತಕ್ಕ ಪ್ರತ್ಯುತ್ತರ ನೀಡಲಿದೆ, ಪಾಕಿಸ್ತಾನವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ ಹೇಳಿದ್ದಾರೆ. ಭಾರತವು ಪಹಲಗಾಮ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ 5 ಪ್ರಮುಖ ನಿರ್ಧಾರಗಳಲ್ಲಿ ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸುವ ನಿರ್ಧಾರವೂ ಒಂದಾಗಿದೆ. ಒಪ್ಪಂದ ರದ್ದಾದ ಕಾರಣ ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿಯ ನೀರನ್ನು ಪಾಕಿಸ್ತಾನಕ್ಕೆ ಬಿಡದಿರುವ ನಿರ್ಧಾರವನ್ನು ಭಾರತ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

೧. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ ಡಾರ ಮತ್ತು ಜಲ ಸಂಪನ್ಮೂಲ ಸಚಿವ ಮಿಯಾನ ಮೊಯಿನ ವಟ್ಟು ಅವರು ಈ ನಿರ್ಧಾರವನ್ನು ‘ಅಪಕ್ವ’ ಮತ್ತು ‘ದೇಶೀಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ’ ಎಂದು ಕರೆದಿದ್ದಾರೆ.

೨. ಪಾಕಿಸ್ತಾನದ ಸಿಂಧ ತರಕ್ಕಿ ಪಸಂದ ಪಕ್ಷದ ನಾಯಕ ಡಾ. ಕಾದಿರ ಮಗಸಿಯವರು ಭಾರತದ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಅವರು ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸುವ ಮೂಲಕ ಭಾರತವು ಪಾಕಿಸ್ತಾನದಲ್ಲಿ ಅಂತರ್ಯುದ್ಧವನ್ನು ಆರಂಭಿಸಲು ಬಯಸುತ್ತಿದೆ. ಇದು ಒಂದು ಷಡ್ಯಂತ್ರವಾಗಿದ್ದು, ಇದರಿಂದ ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ, ಭಾರತಕ್ಕೂ ಹಾನಿಯಾಗಬಹುದು ಎಂದು ಹೇಳಿದರು.

೩. ಮಗಸಿಯವರು ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸುವಂತೆ ಪಾಕಿಸ್ತಾನ ಸರಕಾರವನ್ನು ವಿನಂತಿಸಿದ್ದಾರೆ. ಭಾರತದ ನಿರ್ಧಾರವು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದೂ ಅವರು ಹೇಳಿದರು. ಅವರು ಭಾರತವು ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ವಿನಂತಿಸಿದರು ಮತ್ತು ಪಾಕಿಸ್ತಾನವು ಪ್ರಸ್ತುತ ಗಂಭೀರ ಪರಿಸ್ಥಿತಿಯಲ್ಲಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ಒಪ್ಪಂದವನ್ನು ರದ್ದುಪಡಿಸಿದ ನಂತರ ಪಾಕಿಸ್ತಾನಕ್ಕೆ ಅಣುಬಾಂಬ್‌ಗಿಂತಲೂ ಹೆಚ್ಚು ಹಾನಿಯಾಗಲಿದೆ. ಈ ನಿರ್ಧಾರವನ್ನು ಭಾರತವು ಕೆಲವು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು !