‘ವಂದೇ ಭಾರತ್’ ಎಕ್ಸ್‌ಪ್ರೆಸ್‌ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !

ಗುತ್ತಿಗೆದಾರನಿಗೆ ೧೦ ಲಕ್ಷ ರೂಪಾಯಿ ದಂಡ !

ಮುಂಬಯಿ – ಅಹಮದಾಬಾದ್-ಮುಂಬಯಿ ಮಾರ್ಗದ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಆದಿತ್ಯ ಡಿಡ್ವಾನಿಯಾ ಎಂಬ ಪ್ರಯಾಣಿಕರು ‘ಎಕ್ಸ್’ (X) ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ‘ಐ.ಆರ್.ಸಿ.ಟಿ.ಸಿ’ (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ – IRCTC) ಸಂಬಂಧಪಟ್ಟ ಆಹಾರ ಪೂರೈಕೆ ಗುತ್ತಿಗೆದಾರನಿಗೆ ೧೦ ಲಕ್ಷ ರೂಪಾಯಿ ದಂಡ ವಿಧಿಸಿದೆ, ಅಲ್ಲದೆ ಆತನ ಗುತ್ತಿಗೆಯನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನೂ ಪ್ರಾರಂಭಿಸಲಾಗಿದೆ.

ಜಿರಲೆ ಪತ್ತೆಯಾದ ನಂತರ ಇತರ ಪ್ರಯಾಣಿಕರು ಕೂಡ ಊಟ ಮಾಡುವುದನ್ನು ನಿಲ್ಲಿಸಿದರು. ಪ್ರಯಾಣಿಕರು ಸಂಬಂಧಪಟ್ಟ ಆಹಾರದ ಛಾಯಾಚಿತ್ರಗಳು (ಫೋಟೋಗಳು) ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ರೈಲ್ವೆ ಸಚಿವಾಲಯವನ್ನೂ ‘ಟ್ಯಾಗ್’ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಪ್ರಯಾಣಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆಯೂ ಆಗಬೇಕು !