ಹಿಂಸಾಚಾರದ ಹಿಂದೆ ದರ್ಗಾದ ಮುಖ್ಯಸ್ಥ ಅಬ್ಬಾಸ್ ಸಿದ್ದಿಕಿ ಮತ್ತು ಅವರ ಇಂಡಿಯನ್ ಸೆಕ್ಯುಲರ್ ಫ್ರಂಟ್ ಪಕ್ಷದ ಶಾಸಕ ಸಹೋದರ ನೌಶಾದ್ ಸಿದ್ದೀಕಿ ಅವರ ಕೈವಾಡ!

ಪಶ್ಚಿಮ ಬಂಗಾಳ: ಮುರ್ಷಿದಾಬಾದ್ ನಂತರ ದಕ್ಷಿಣ ೨೪ ಪರಗಣದ ಭಾಂಗಾರನಲ್ಲಿ ಮುಸಲ್ಮಾನರ ಹಿಂಸಾಚಾರ

ಕೋಲ್ಕತ್ತಾ (ಪಶ್ಚಿಮ ಬಂಗಾಳ) – ಮುರ್ಷಿದಾಬಾದ್ ನಂತರ ಪಶ್ಚಿಮ ಬಂಗಾಳದ ದಕ್ಷಿಣ ೨೪ ಪರಗಣ ಜಿಲ್ಲೆಯ ಭಾಂಗಾರನಲ್ಲಿ ಏಪ್ರಿಲ್ ೧೪ ರಂದು ಸಂಜೆ ಮುಸಲ್ಮಾನರು ಹಿಂಸಾಚಾರ ನಡೆಸಿ ಬೆಂಕಿ ಹಚ್ಚಿದರು. ಈ ಹಿಂಸಾಚಾರದ ವೇಳೆ ಹಿಂದೂಗಳು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಲಾಯಿತು. ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಇಲ್ಲಿ ವಕ್ಫ್ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದಾಗ ಮುಸಲ್ಮಾನರು ಈ ಹಿಂಸಾಚಾರ ನಡೆಸಿದರು. ಪೊಲೀಸರು ಈ ಪ್ರಕರಣದಲ್ಲಿ ಇದುವರೆಗೆ ೨ ಜನರನ್ನು ಬಂಧಿಸಿದ್ದಾರೆ. ಈ ಹಿಂಸಾಚಾರದ ಹಿಂದೆ ಫುರ್ಫುರಾ ಶರೀಫ್ ದರ್ಗಾದ ಮುಖ್ಯಸ್ಥ ಪೀರ್ಜಾದಾ ಅಬ್ಬಾಸ್ ಸಿದ್ದಿಕಿ ಮತ್ತು ಅವರ ಸಹೋದರ ಇಂಡಿಯನ್ ಸೆಕ್ಯುಲರ್ ಫ್ರಂಟ್ ಶಾಸಕ ನೌಶಾದ್ ಸಿದ್ದಿಕಿ ಅವರ ಕೈವಾಡವಿದೆ ಎಂದು ತಿಳಿದುಬಂದಿದೆ.

೧. ಪೊಲೀಸ್ ಮೂಲಗಳು ಮತ್ತು ಸ್ಥಳೀಯ ಜನರ ಪ್ರಕಾರ, ಅಬ್ಬಾಸ್ ಸಿದ್ದಿಕಿ ಮತ್ತು ಅವರ ಪಕ್ಷ ಇಂಡಿಯನ್ ಸೆಕ್ಯುಲರ್ ಫ್ರಂಟ್ ಹಿಂಸಾಚಾರದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಸಿದ್ದಿಕಿ ಸ್ವತಃ ಮುಸಲ್ಮಾನರನ್ನು ವಕ್ಫ್ ಕಾನೂನಿನ ವಿರುದ್ಧ ಪ್ರಚೋದಿಸಿದ್ದರಿಂದ ಇಲ್ಲಿ ಹಿಂಸಾಚಾರ ನಡೆದಿದೆ. ಈ
ಪ್ರತಿಭಟನೆಯ ನೇತೃತ್ವವನ್ನು ಶಾಸಕ ನೌಶಾದ್ ಸಿದ್ದಿಕಿ ವಹಿಸಿದ್ದರು. ಸಿದ್ದಿಕಿ ಅವರು ವಕ್ಫ್ ಕಾನೂನನ್ನು ‘ಮುಸಲ್ಮಾನರ ವಿರುದ್ಧ ನಡೆದ ಆಕ್ರಮಣ’ ಎಂದು ಹೇಳಿ ಮುಸಲ್ಮಾನರನ್ನು ಪ್ರಚೋದಿಸಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

೨. ಫುರ್ಫುರಾ ಶರೀಫ್ ದರ್ಗಾದ ಪೀರ್ಜಾದಾ ಅಬ್ಬಾಸ್ ಸಿದ್ದಿಕಿ ಅವರು ಅಕ್ಟೋಬರ್ ೨೦೨೧ ರಲ್ಲಿ, ‘ಬಾಂಗ್ಲಾದೇಶದ ದುರ್ಗಾ ಪೂಜಾ ಮಂಟಪದಲ್ಲಿ ಕುರಾನ್‌ನ ಪ್ರತಿಯನ್ನು ಇಟ್ಟವರ ಶಿರಚ್ಛೇದ ಮಾಡಬೇಕು’ ಎಂದು ಹೇಳಿಕೆ ನೀಡಿದ್ದರು. ದುರ್ಗಾ ಪೂಜೆಯಂತಹ ಹಿಂದೂ ಹಬ್ಬಗಳಲ್ಲಿ ಭಾಗವಹಿಸುವ ಬಗ್ಗೆ ಸಿದ್ದಿಕಿ ಮುಸಲ್ಮಾನರನ್ನು ಟೀಕಿಸುತ್ತಾ, ಅವರಿಗೆ ಅಂತಹ ಹಬ್ಬಗಳಲ್ಲಿ ಅಷ್ಟು ಆಸಕ್ತಿಯಿದ್ದರೆ ಅವರು ಇಸ್ಲಾಂ ಧರ್ಮವನ್ನು ತೊರೆಯಬೇಕು ಎಂದು ಹೇಳಿದ್ದರು. (ಇಂತಹ ಹೇಳಿಕೆ ನೀಡಿದವರನ್ನು ಜೈಲಿಗೆ ಯಾಕೆ ತಳ್ಳಲಿಲ್ಲ?, ಎಂದು ಹಿಂದೂಗಳು ತೃಣಮೂಲ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸಬೇಕು! – ಸಂಪಾದಕರು).

ಸಂಪಾದಕೀಯ ನಿಲುವು

  • ಈ ಬಗ್ಗೆ ದೇಶದ ಜಾತ್ಯತೀತವಾದಿ, ಧರ್ಮನಿರಪೇಕ್ಷ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ನಾಯಕರು ಬಾಯಿ ತೆರೆಯುವುದಿಲ್ಲ; ಯಾಕೆಂದರೆ ಹಿಂಸಾಚಾರ ಮಾಡಿದವರು ಮುಸಲ್ಮಾನರಲ್ಲವೇ!
  • ಹಿಂದೂಗಳು ಎಂದಾದರೂ ಗಲಭೆಗಳನ್ನು ಮಾಡಿ ಮುಸಲ್ಮಾನರ ಮೇಲೆ ಆಕ್ರಮಣ ಮಾಡಿದ್ದನ್ನು ನೀವು ಕೇಳಿದ್ದೀರಾ?