Karnataka CET Exam Controversy : ರಾಜ್ಯದಲ್ಲಿ ‘ಸಿಇಟಿ’ ಪರೀಕ್ಷೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಧಾರ್ಮಿಕ ಚಿಹ್ನೆಗಳನ್ನು ತೆಗೆಯಲು ಸೂಚನೆ: ರಾಷ್ಟ್ರಭಕ್ತ ಬ್ರಿಗೇಡ್‌ನಿಂದ ಖಂಡನೆ!

ಬೆಂಗಳೂರು – ರಾಜ್ಯದ ಪರೀಕ್ಷಾ ಪ್ರಾಧಿಕಾರದ ವತಿಯಿಂದ ‘ಸಿಇಟಿ’ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಏಪ್ರಿಲ್ ೧೬, ೨೦೨೫ ರಂದು ನಗರದ ಪರೀಕ್ಷಾ ಕೇಂದ್ರದಲ್ಲಿ ಹಿಂದೂ ವಿದ್ಯಾರ್ಥಿಗಳು ಧರಿಸಿದ್ದ ಕೆಂಪು ದಾರ, ಜನಿವಾರದಂತಹ ಧಾರ್ಮಿಕ ಚಿಹ್ನೆಗಳನ್ನು ತೆಗೆಯಲು ಸೂಚಿಸಲಾಯಿತು. ಈ ಕೃತ್ಯವನ್ನು ರಾಷ್ಟ್ರಭಕ್ತ ಬ್ರಿಗೇಡ್‌ನ ಸಂಚಾಲಕ ಕೆ.ಇ. ಕಾಂತೇಶ್ ಖಂಡಿಸಿದ್ದಾರೆ. ಹಿಂದೂ ವಿದ್ಯಾರ್ಥಿಗಳ ಧಾರ್ಮಿಕ ಚಿಹ್ನೆಗಳನ್ನು ತೆಗೆಯಲು ಒತ್ತಾಯಿಸುವುದು ಖಂಡನೀಯ ಎಂದು ಶ್ರೀ ಕಾಂತೇಶ್ ಹೇಳಿದ್ದಾರೆ. ಪ್ರಾಧಿಕಾರವು ‘ಹಿಂದೂ ವಿದ್ಯಾರ್ಥಿಗಳ ಧಾರ್ಮಿಕ ಚಿಹ್ನೆಗಳನ್ನು ತೆಗೆಯುವುದನ್ನು ಮುಂದುವರಿಸಿದರೆ, ಪ್ರತಿಭಟನೆ ಅನಿವಾರ್ಯ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ವಿದ್ಯಾರ್ಥಿಗಳು ಧರಿಸಿರುವ ಜನಿವಾರ, ಕೆಂಪು ದಾರ ಮುಂತಾದ ಧಾರ್ಮಿಕ ಚಿಹ್ನೆಗಳನ್ನು ತೆಗೆದುಹಾಕಲು ಹೇಳುವ ಧೈರ್ಯ ಯಾರಿಗೂ ಬರಬಾರದು, ಅಂತಹ ಶಕ್ತಿಯನ್ನು ಹಿಂದೂಗಳು ನಿರ್ಮಿಸಬೇಕು!