ಕೇಂದ್ರ ಸಚಿವ ಚೌಹಾಣ್ ಇವರಿಂದ ಏರ್ ಇಂಡಿಯಾಗೆ ಪ್ರಶ್ನೆ !

ಭೋಪಾಲ್ (ಮಧ್ಯಪ್ರದೇಶ) – ಭೋಪಾಲ್ ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಾಳಾದ ಸೀಟು ನೀಡಿದ್ದಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಪ್ರಶ್ನೆಗಳನ್ನು ಎತ್ತಿದ್ದಾರೆ.
ಚೌಹಾಣ್ ಅವರು “ನಾನು ಹೋಗಿ ಸೀಟಿನ ಮೇಲೆ ಕುಳಿತೆ, ಸೀಟು ಮುರಿದು ಒಳಗೆ ಆಳವಾಗಿ ಬಿದ್ದಿತ್ತು”. ಕುಳಿತುಕೊಳ್ಳುವುದು ಅಪಾಯಕಾರಿಯಾಗಿತ್ತು. ಈ ಬಗ್ಗೆ ನಾನು ಸಿಬ್ಬಂದಿಗಳಿಗೆ ‘ಆಸನ ಹಾಳಾಗಿದ್ದರೆ, ನೀವು ಅದನ್ನು ನನಗೆ ಏಕೆ ಕೊಟ್ಟಿದ್ದೀರಿ?’ ಎಂದು ಕೇಳಿದಾಗ ಅವರು, ‘ಈ ಆಸನ ಉತ್ತಮವಾಗಿಲ್ಲ ಮತ್ತು ಅದರ ಟಿಕೆಟ್ಗಳನ್ನು ಮಾರಾಟ ಮಾಡಬಾರದು’, ಎಂದು ಆಡಳಿತ ಮಂಡಳಿಗೆ ಈಗಾಗಲೇ ತಿಳಿಸಲಾಗಿತ್ತು.’ ಅಂತಹ ಒಂದೇ ಒಂದು ಆಸನವಲ್ಲ, ಹಲವು ಆಸನಗಳಿವೆ. ನನ್ನ ಸಹ ಪ್ರಯಾಣಿಕರು ನನಗೆ ಉತ್ತಮವಾದ ಆಸನದಲ್ಲಿ ಕುಳಿತುಕೊಳ್ಳಲು ವಿನಂತಿಸಿದರು; ಆದರೆ ನನಗಾಗಿ ಇನ್ನೊಬ್ಬ ಸ್ನೇಹಿತನಿಗೆ ಯಾಕೆ ತೊಂದರೆ ಕೊಡಬೇಕು, ಇದೇ ಸೀಟಿನಲ್ಲಿ ಕುಳಿತು ನನ್ನ ಪ್ರಯಾಣವನ್ನು ಮುಗಿಸುತ್ತೇನೆ’, ಎಂದು ನಿರ್ಧರಿಸಿದೆ. ಭವಿಷ್ಯದಲ್ಲಿ ಯಾವುದೇ ಪ್ರಯಾಣಿಕರು ಇಂತಹ ಸಮಸ್ಯೆಗಳನ್ನು ಎದುರಿಸದಂತೆ ಏರ್ ಇಂಡಿಯಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆಯೇ? ಅಥವಾ ಪ್ರಯಾಣಿಕರು ತಮ್ಮ ಉದ್ದೇಶಿತ ಸ್ಥಾನಕ್ಕೆ ಬೇಗ ತಲುಪಲು ಅವರ ಅಸಹಾಯಕತೆಯ ಲಾಭವನ್ನು ಪಡೆದುಕೊಳ್ಳುವುದನ್ನು ಮುಂದುವರಿಸುತ್ತಾರೆಯೇ ?
ಕೇಂದ್ರ ಸರಕಾರವನ್ನು ಟೀಕಿಸಿದ ಕಾಂಗ್ರೆಸ್
ಯುವ ಕಾಂಗ್ರೆಸ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಇವರು ಒಂದು ಪೋಸ್ಟ ಮಾಡುತ್ತಾ, ಕುಂಭಮೇಳಕ್ಕೆ ಹೋಗುವ ಲಕ್ಷಾಂತರ ಭಕ್ತರಿಗೆ ಕಾರುಗಳನ್ನು ನಿಲ್ಲಿಸುವ ಸ್ಥಳಾವಕಾಶ ನೀಡಲು ಶಿವರಾಜ್ ಚೌಹಾಣ್ ಅವರ ಸರಕಾರಕ್ಕೆ ಸಾಧ್ಯವಾಗಲಿಲ್ಲ; ಆದರೆ ಅವರಿಗೆ ಯಾವುದೇ ನೋವು ಅನಿಸಲಿಲ್ಲ; ಆದರೆ ವಿಮಾನದಲ್ಲಿ ಮುರಿದ ಕುರ್ಚಿಯನ್ನು ಕಂಡು ಸಚಿವರು ದುಃಖಿತರಾದರು’, ಎಂದು ಬರೆದಿದ್ದಾರೆ.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !