ಏರ್ ಇಂಡಿಯಾ ವಿಮಾನದ ಮುರಿದ ಸೀಟಿನಲ್ಲಿ ಪ್ರಯಾಣಿಸಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ !

ಕೇಂದ್ರ ಸಚಿವ ಚೌಹಾಣ್ ಇವರಿಂದ ಏರ್ ಇಂಡಿಯಾಗೆ ಪ್ರಶ್ನೆ !

ಭೋಪಾಲ್ (ಮಧ್ಯಪ್ರದೇಶ) – ಭೋಪಾಲ್ ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಾಳಾದ ಸೀಟು ನೀಡಿದ್ದಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಪ್ರಶ್ನೆಗಳನ್ನು ಎತ್ತಿದ್ದಾರೆ.

ಚೌಹಾಣ್ ಅವರು “ನಾನು ಹೋಗಿ ಸೀಟಿನ ಮೇಲೆ ಕುಳಿತೆ, ಸೀಟು ಮುರಿದು ಒಳಗೆ ಆಳವಾಗಿ ಬಿದ್ದಿತ್ತು”. ಕುಳಿತುಕೊಳ್ಳುವುದು ಅಪಾಯಕಾರಿಯಾಗಿತ್ತು. ಈ ಬಗ್ಗೆ ನಾನು ಸಿಬ್ಬಂದಿಗಳಿಗೆ ‘ಆಸನ ಹಾಳಾಗಿದ್ದರೆ, ನೀವು ಅದನ್ನು ನನಗೆ ಏಕೆ ಕೊಟ್ಟಿದ್ದೀರಿ?’ ಎಂದು ಕೇಳಿದಾಗ ಅವರು, ‘ಈ ಆಸನ ಉತ್ತಮವಾಗಿಲ್ಲ ಮತ್ತು ಅದರ ಟಿಕೆಟ್‌ಗಳನ್ನು ಮಾರಾಟ ಮಾಡಬಾರದು’, ಎಂದು ಆಡಳಿತ ಮಂಡಳಿಗೆ ಈಗಾಗಲೇ ತಿಳಿಸಲಾಗಿತ್ತು.’ ಅಂತಹ ಒಂದೇ ಒಂದು ಆಸನವಲ್ಲ, ಹಲವು ಆಸನಗಳಿವೆ. ನನ್ನ ಸಹ ಪ್ರಯಾಣಿಕರು ನನಗೆ ಉತ್ತಮವಾದ ಆಸನದಲ್ಲಿ ಕುಳಿತುಕೊಳ್ಳಲು ವಿನಂತಿಸಿದರು; ಆದರೆ ನನಗಾಗಿ ಇನ್ನೊಬ್ಬ ಸ್ನೇಹಿತನಿಗೆ ಯಾಕೆ ತೊಂದರೆ ಕೊಡಬೇಕು, ಇದೇ ಸೀಟಿನಲ್ಲಿ ಕುಳಿತು ನನ್ನ ಪ್ರಯಾಣವನ್ನು ಮುಗಿಸುತ್ತೇನೆ’, ಎಂದು ನಿರ್ಧರಿಸಿದೆ. ಭವಿಷ್ಯದಲ್ಲಿ ಯಾವುದೇ ಪ್ರಯಾಣಿಕರು ಇಂತಹ ಸಮಸ್ಯೆಗಳನ್ನು ಎದುರಿಸದಂತೆ ಏರ್ ಇಂಡಿಯಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆಯೇ? ಅಥವಾ ಪ್ರಯಾಣಿಕರು ತಮ್ಮ ಉದ್ದೇಶಿತ ಸ್ಥಾನಕ್ಕೆ ಬೇಗ ತಲುಪಲು ಅವರ ಅಸಹಾಯಕತೆಯ ಲಾಭವನ್ನು ಪಡೆದುಕೊಳ್ಳುವುದನ್ನು ಮುಂದುವರಿಸುತ್ತಾರೆಯೇ ?

ಕೇಂದ್ರ ಸರಕಾರವನ್ನು ಟೀಕಿಸಿದ ಕಾಂಗ್ರೆಸ್

ಯುವ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಇವರು ಒಂದು ಪೋಸ್ಟ ಮಾಡುತ್ತಾ, ಕುಂಭಮೇಳಕ್ಕೆ ಹೋಗುವ ಲಕ್ಷಾಂತರ ಭಕ್ತರಿಗೆ ಕಾರುಗಳನ್ನು ನಿಲ್ಲಿಸುವ ಸ್ಥಳಾವಕಾಶ ನೀಡಲು ಶಿವರಾಜ್ ಚೌಹಾಣ್ ಅವರ ಸರಕಾರಕ್ಕೆ ಸಾಧ್ಯವಾಗಲಿಲ್ಲ; ಆದರೆ ಅವರಿಗೆ ಯಾವುದೇ ನೋವು ಅನಿಸಲಿಲ್ಲ; ಆದರೆ ವಿಮಾನದಲ್ಲಿ ಮುರಿದ ಕುರ್ಚಿಯನ್ನು ಕಂಡು ಸಚಿವರು ದುಃಖಿತರಾದರು’, ಎಂದು ಬರೆದಿದ್ದಾರೆ.

ಸಂಪಾದಕೀಯ ನಿಲುವು

  • ವಿಮಾನಯಾನ ಸಂಸ್ಥೆಗಳು ಈ ರೀತಿ ಜನರನ್ನು ವಂಚಿಸಿ ಲೂಟಿ ಮಾಡುತ್ತಿವೆ. ಇಲ್ಲಿ, ಕೇಂದ್ರ ಸಚಿವರು ಈ ಘಟನೆಯನ್ನು ಅನುಭವಿಸಿದರು ಮತ್ತು ಅದನ್ನು ಬಹಿರಂಗ ಪಡಿಸಿದರು. ಆದ್ದರಿಂದ ಬಹುಶಃ ಈಗ ಅದನ್ನು ಗಮನಿಸಬಹುದು; ಆದರೆ ಒಬ್ಬ ಸಾಮಾನ್ಯ ನಾಗರಿಕ ಏನು ಮಾಡುತ್ತಿದ್ದ? ನಾಗರಿಕರು ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರಬೇಕು; ಆದರೆ ಅವರು ಯಾರಲ್ಲಿ ಹೇಳಿಬೇಕು ಮತ್ತು ಅವರದ್ದು ಯಾರು ಕೇಳುವರು ?
  • ಮಹಾಕುಂಭದ ಜನದಟ್ಟಣೆಯ ಸಮಯದಲ್ಲಿ ಟಿಕೆಟ್ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸುವ ಮೂಲಕ ಭಕ್ತರನ್ನು ಲೂಟಿ ಮಾಡುತ್ತಿರುವ ಈ ವಿಮಾನಯಾನ ಕಂಪನಿಗಳ ಮೇಲೆ ಕೇಂದ್ರ ಸರಕಾರ ಯಾವುದೇ ಕಡಿವಾಣ ಹಾಕಿಲ್ಲ ಎಂಬುದನ್ನು ಸಹ ಗಮನಿಸಬೇಕು !