|

ಪ್ರಯಾಗರಾಜ್, ಜನವರಿ 29 (ಸುದ್ದಿ) – ಮೌನಿ ಅಮವಾಸ್ಯೆಯ ನಿಮಿತ್ತ ಜನವರಿ 28 ರಂದು ಮಧ್ಯರಾತ್ರಿ 1:30 ರ ಸುಮಾರಿಗೆ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಲು ಭಾರಿ ಜನಸಮೂಹ ಸೇರಿದ್ದರಿಂದ ಉಂಟಾದ ಕಾಲ್ತುಳಿತದಲ್ಲಿ ಹದಿನೈದು ಭಕ್ತರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು. ಗಾಯಾಳುಗಳನ್ನು ಪ್ರಯಾಗರಾಜ್ನ ಸ್ವರೂಪಾಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಅಥವಾ ಗಾಯಗೊಂಡ ಭಕ್ತರ ನಿಖರವಾದ ಸಂಖ್ಯೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ವದಂತಿಗಳ ಹರಡುವಿಕೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ; ಆದರೆ ಸರಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಘಟನೆಯ ನಂತರ, ಆ ಪ್ರದೇಶವನ್ನು ಹೊರತುಪಡಿಸಿ ಇತರ ಸ್ಥಳಗಳಿಂದ ಭಕ್ತರು ಸ್ನಾನ ಮಾಡುತ್ತಿದ್ದರು.
ಕಾಲ್ತುಳಿತದ ನಂತರ, ಆಡಳಿತದ ಕೋರಿಕೆಯ ಮೇರೆಗೆ, ಎಲ್ಲಾ 13 ಅಖಾಡಗಳು ಮೌನಿ ಅಮವಾಸ್ಯೆಯಂದು ಅಮೃತಸ್ನಾನವನ್ನು ಮೊದಲು ರದ್ದುಗೊಳಿಸುವುದಾಗಿ ಘೋಷಿಸಿದವು; ಆದರೆ ಕೆಲವು ಗಂಟೆಗಳ ನಂತರ, ಪರಿಸ್ಥಿತಿ ಶಾಂತವಾದಾಗ, ಅವರು ಸ್ನಾನ ಮಾಡುವುದಾಗಿ ಘೋಷಿಸಿದರು. ಮೇಲಿನ ಘಟನೆಯ ಹಿನ್ನೆಲೆಯಲ್ಲಿ, ಈ ಸ್ನಾನವನ್ನು ಅತ್ಯಂತ ಸರಳ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಜನವರಿ 28 ರಂದು ಒಂದೇ ದಿನ ಐದೂವರೆ ಕೋಟಿಗೂ ಹೆಚ್ಚು ಭಕ್ತರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು.
ಎನ್.ಎಸ್.ಜಿ ಕಮಾಂಡೋಗಳ ನೆರವು

ಈ ಅಪಘಾತದ ನಂತರ, ಎನ್.ಎಸ್.ಜಿ. ಕಮಾಂಡೊಗಳು ಸಂಗಮ ದಡಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಸಂಗಮ ಪ್ರದೇಶದ ಕೆಲವು ಭಾಗಗಳಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಜನಸಂದಣಿ ಇನ್ನಷ್ಟು ಹೆಚ್ಚಾಗಬಾರದೆಂದು ಪ್ರಯಾಗರಾಜ್ ನಗರದಲ್ಲಿಯೂ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದಕ್ಕಾಗಿ, ನಗರದ ಪಕ್ಕದ ಜಿಲ್ಲೆಗಳಲ್ಲಿ ಆಡಳಿತವು ಜಾಗರೂಕತೆಯ ಎಚ್ಚರಿಕೆ ನೀಡಿದೆ.
ಪ್ರಧಾನಿಯವರು ಮುಖ್ಯಮಂತ್ರಿ ಯೋಗಿಯಿಂದ ಮಾಹಿತಿ ಪಡೆದರು

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಘಟನೆಯ ಸವಿಸ್ತಾರ ಮಾಹಿತಿ ವಿಚಾರಿಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಿದರು.
ಭಕ್ತರು ಸಂಗಮ ನೋಸ್ಗೆ ಹೋಗಬೇಕೆಂದು ಒತ್ತಾಯ ಮಾಡದೇ ಹತ್ತಿರದ ಘಾಟ್ನಲ್ಲಿ ಸ್ನಾನ ಮಾಡಬೇಕು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಈ ದುರಂತದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಕ್ತರಿಗೆ ‘ಸಂಗಮ ನೋಸ್ಗೆ ಹೋಗುವ ಬದಲು ಹತ್ತಿರದ ಘಾಟ್ನಲ್ಲಿ ಸ್ನಾನ ಮಾಡುವಂತೆ ಮತ್ತು ಪೊಲೀಸರು ಮತ್ತು ಮಹಾಕುಂಭಮೇಳ ಆಡಳಿತಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ’ ಮನವಿ ಮಾಡಿದ್ದಾರೆ. ನಿಜವಾದ ತ್ರಿವೇಣಿ ಸಂಗಮವು ಸಂಗಮ ನೋಜ್ನಲ್ಲಿದೆ ಎಂದು ಭಕ್ತರು ನಂಬುವುದರಿಂದ, ಎಲ್ಲಾ ಭಕ್ತರು ಸ್ನಾನ ಮಾಡಲು ಅಲ್ಲಿಗೆ ಹೋಗಲು ಪ್ರಯತ್ನಿಸುತ್ತಾರೆ. ಅಖಾಡಗಳು ಸಹ ಸ್ನಾನ ಮಾಡಲು ಬರುವುದರಿಂದ ಈ ಸ್ಥಳವು ತುಂಬಾ ಜನದಟ್ಟಣೆಯಿಂದ ಕೂಡಿರುತ್ತದೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath