ದೆಹಲಿಯ ಜಾಮಾ ಮಸೀದಿ ಮೆಟ್ರೋ ನಿಲ್ದಾಣದಲ್ಲಿ ‘ಶಬ್-ಎ-ಬಾರಾತ’ದ ರಾತ್ರಿ ಕೋಲಾಹಲ !

ಮೆಟ್ರೋ ಆಡಳಿತದಿಂದ ಮುಸಲ್ಮಾನರನ್ನು ರಕ್ಷಿಸುವ ಯತ್ನ !

(ಶಬ್-ಎ-ಬಾರಾತ ಇದು ಮುಸಲ್ಮಾನರ ಒಂದು ಮಹತ್ವದ ಹಬ್ಬವಾಗಿದ್ದು ಆ ದಿನದಂದು ಅವರು ಅಲ್ಲಾನ ಆಶೀರ್ವಾದ ಪಡೆಯುವುದರ ಜೊತೆಗೆ ಅವರು ಮಾಡಿರುವ ಕುಕೃತ್ಯಕ್ಕಾಗಿ ಕ್ಷಮೆ ಯಾಚಿಸುತ್ತಾರೆ.)

ನವದೆಹಲಿ – ದೆಹಲಿ ಮೆಟ್ರೋದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು ಅದರಲ್ಲಿ ಅನೇಕ ಮುಸಲ್ಮಾನರು ಇಲ್ಲಿಯ ಜಾಮ ಮಸೀದಿ ಮೆಟ್ರೋ ನಿಲ್ದಾಣದಲ್ಲಿ ಕೋಲಾಹಲ ಎಬ್ಬಿಸಿರುವುದು ಕಾಣುತ್ತಿದೆ. ಈ ಜನರು ನಿಲ್ದಾಣದ ‘ಎಕ್ಸಿಟ್ ಗೇಟ್’ನಿಂದ ಜಿಗಿಯುತ್ತಿರುವುದು ಕಾಣುತ್ತಿದೆ. ಮುಸಲ್ಮಾನರ ಈ ಕೃತ್ಯದ ಕುರಿತು ಟೀಕೆಗಳು ಆದ ನಂತರ ‘ದಿಲ್ಲಿ ಮೆಟ್ರೋ ರೈಲ್ ಕಾರ್ಪೊರೇಷನ್’ನಿಂದ ಈ ಸಂದರ್ಭದಲ್ಲಿ ಹೇಳಿಕೆ ಪ್ರಸಾರವಾಗಿದೆ. ಮೆಟ್ರೋ ಆಡಳಿತವು, ವಿಡಿಯೋದಲ್ಲಿ ತೋರಿಸಿರುವ ಘಟನೆ ‘ಶಬ್-ಎ-ಬಾರಾತ್’ದ ರಾತ್ರಿ (ಫೆಬ್ರುವರಿ ೧೩ ರ ರಾತ್ರಿ) ಸುಮಾರು ೧೧.೩೦ ಗಂಟೆಗೆ ನಡೆದಿದೆ. ಹಬ್ಬದಿಂದಾಗಿ ನಿಲ್ದಾಣದಲ್ಲಿ ದಟ್ಟಣೆ ಹೆಚ್ಚಾಗಿತ್ತು. ಆದ್ದರಿಂದ ‘ಎಕ್ಸಿಟ್ ಗೇಟ್’ನಲ್ಲಿ ದೊಡ್ಡ ಪ್ರಮಾಣದಲ್ಲಿ ದಟ್ಟಣೆ ಆಗಿತ್ತು’, ಎಂದು ಹೇಳಿದೆ.

ಆಡಳಿತ ಸ್ಪಷ್ಟನೆ ನೀಡುತ್ತಾ, ಈ ಘಟನೆ ಕೆಲವು ನಿಮಿಷಗಳವರೆಗೆ ನಡೆದಿದೆ ಮತ್ತು ಬೇಗನೆ ನಿಲ್ದಾಣದಲ್ಲಿನ ಪರಿಸ್ಥಿತಿ ಸಾಮಾನ್ಯವಾಯಿತು. ಅಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿ ಮತ್ತು ಇತರ ಕಾರ್ಮಿಕರು ಉಪಸ್ಥಿತರಿದ್ದರು ಮತ್ತು ಪರಿಸ್ಥಿತಿ ಎಂದಿಗೂ ನಿಯಂತ್ರಣ ಮೀರಿ ಹೋಗಿಲ್ಲ. (ಕೆಲವು ನಿಮಿಷ ಕೋಲಾಹಲ ಎಬ್ಬಿಸುವುದು ಅಥವಾ ಕೆಲವು ನಿಮಿಷ ಗಲಾಟೆ ಮಾಡುವುದು, ಇಂತಹ ಅಯೋಗ್ಯ ವರ್ತನೆಯಿಂದ ಅಲ್ಲಿಯ ಸಾಮಾನ್ಯ ಪ್ರಯಾಣಿಕರಿಗೆ ತೊಂದರೆ ಆಯಿತು, ಅದರ ಬಗ್ಗೆ ಏನು ? ಮೂಲತಃ ಆಡಳಿತದ ಬಗ್ಗೆ ಮುಸಲ್ಮಾನರಿಗೆ ಭಯವೇ ಉಳಿದಿಲ್ಲ ಇದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಇದರ ಬಗ್ಗೆ ಆಡಳಿತ ಏನು ಹೇಳುವುದಿಲ್ಲ ? – ಸಂಪಾದಕರು)