ತಮ್ಮ ಮಗನಿಗೆ ‘ತೈಮೂರ್’ ಎಂದು ಹೆಸರಿಟ್ಟಿದ್ದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಗೆ ಛೀಮಾರಿ

ನವದೆಹಲಿ – ಖ್ಯಾತ ಕವಿ ಕುಮಾರ ವಿಶ್ವಾಸ ಭಾಷಣವೊಂದರಲ್ಲಿ ನಟ ಸೈಫ್ ಅಲಿ ಖಾನ್ ಮತ್ತು ಅವರ ಪತ್ನಿ ಕರೀನಾ ಕಪೂರ್ ಅವರನ್ನು ಹೆಸರು ಹೇಳದೆ ಟೀಕಿಸಿದ್ದಾರೆ. ಅವರು, ‘ಬಾಲಿವುಡ್ ಮಂದಿ ಈ ದೇಶ ಏನನ್ನು ಬಯಸುತ್ತದೆ’, ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನೀವು ನಮ್ಮಿಂದಾಗಿ ಜನಪ್ರಿಯರಾಗಿದ್ದೀರಿ, ನಮ್ಮಿಂದಾಗಿ ನಿಮಗೆ ಹಣ ಸಿಗುತ್ತದೆ. ನಮ್ಮಿಂದಾಗಿ ನೀವು ಹೀರೋ ಆಗುತ್ತೀರಿ; ಆದರೆ ಎರಡನೇ ಮದುವೆಯಿಂದ ನಿಮಗೆ ಮಗುವಾದರೆ, ದಾಳಿಕೋರನ ಹೆಸರನ್ನು ಇಡುತ್ತೀರಿ, ಅದನ್ನು ಸಹಿಸಲಾಗುವುದಿಲ್ಲ.” ಎಂದು ಹೇಳಿದರು. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಮಗನಿಗೆ ‘ತೈಮೂರ್’ ಎಂದು ಹೆಸರಿಟ್ಟರು. ಆ ನಂತರ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದರು.
ಕುಮಾರ ವಿಶ್ವಾಸ ಮಾತು ಮುಂದುವರೆಸುತ್ತಾ
1. ನಿಮ್ಮ ಮಗುವಿಗೆ ರಿಜ್ವಾನ್, ಉಸ್ಮಾನ್, ಯೂನಸ್, ಬೇರೆ ಯಾವುದಾದರೂ ಹೆಸರಿಡಬಹುದಿತ್ತು; ಆದರೆ ನಿಮಗೆ ಸಿಕ್ಕಿದ್ದು ಒಂದೇ ಹೆಸರು. ಅದು ದುಷ್ಟ ಮತ್ತು ಕುಂಟ ವ್ಯಕ್ತಿಯ ಹೆಸರು (ಮುಸ್ಲಿಂ ಆಕ್ರಮಣಕಾರ ತೈಮೂರ್ ಲಂಗ್) ಅವನು ಭಾರತಕ್ಕೆ ಬಂದು ಇಲ್ಲಿನ ತಾಯಂದಿರು ಮತ್ತು ಸಹೋದರಿಯರನ್ನು ಬಲಾತ್ಕಾರ ಮಾಡಿದನು. ಅವನ ಹೆಸರನ್ನು ನಿಮ್ಮ ಪ್ರೀತಿಯ ಮಗನಿಗೆ ಇಡಲು ನಿಮಗೆ ವಿನಾಯತಿ ಸಿಕ್ಕಿದೆ.
2. ಭವಿಷ್ಯದಲ್ಲಿ ಮಗನನ್ನು ಹೀರೋ ಮಾಡಲು ನೀವು ಪ್ರಯತ್ನಿಸಿದರೆ, ನಾಯಕ ಏನು ? ನಾವು (ಸಾರ್ವಜನಿಕರು) ಅವನು ಚಿತ್ರದಲ್ಲಿ ಖಳನಾಯಕ ಆಗಲು ಸಹ ಬಿಡುವುದಿಲ್ಲ. 75 ವರ್ಷಗಳ ನಂತರ ಭಾರತ ಜಾಗೃತಗೊಂಡಿದೆ. ಎಂದು ಹೇಳಿದರು.
🚨👊 Kumar Vishwas Speaks Out! 🗣️
Renowned poet @DrKumarVishwas has slammed Saif Ali Khan and Kareena Kapoor for naming their son “Taimur”. 🤔
He argues that naming children after invaders who brought destruction and pain to India is unacceptable 🚫
Taimur Lang, also known as… pic.twitter.com/3FckKdh9Sp
— Sanatan Prabhat (@SanatanPrabhat) January 3, 2025
ಸಂಪಾದಕೀಯ ನಿಲುವು
|
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir