
ಮುಂಬಯಿ – ಫೆಬ್ರುವರಿ ೨೭. ೨೦೦೨ ರಂದು ಅಯೋಧ್ಯೆಯಿಂದ ಹೊರಟಿದ್ದ ಸಾಬರಮತಿ ಎಕ್ಸ್ಪ್ರೆಸ್ ಗುಜರಾತ್ನ ಗೋದ್ರಾ ರೈಲ್ವೆ ನಿಲ್ದಾಣದಲ್ಲಿ ಬಂದಾಗ ಮತಾಂಧರು ರೈಲಿನ ೩ ಭೋಗಿಗಳ ಬಾಗಿಲಗಳನ್ನು ಹೊರಗಿನಿಂದ ಬಂದ್ ಮಾಡಿ ಬೆಂಕಿ ಹಚ್ಚಿದರು. ಆ ಬೆಂಕಿಯಲ್ಲಿ ೫೯ ಕರಸೇವಕರು ಆಸುನೀಗಿದರು. ಈ ಘಟನೆಯ ಆಧಾರಿಸಿದ ‘ದ ಸಾಬರಮತಿ ರಿಪೋರ್ಟ್’ ಈ ಚಲನಚಿತ್ರ ನವೆಂಬರ್ ೧೫ ರಂದು ಬಿಡುಗಡೆಯಾಗಲಿದೆ.
ಈ ಚಲನಚಿತ್ರದ ನಿರ್ದೇಶಕ ಧೀರಜ ಸರನಾ ಇವರು ಹಾಗೂ ಶೋಭಾ ಕಪೂರ್ ಮತ್ತು ಏಕತಾ ಕಪೂರ್ ಇವರು ನಿರ್ಮಾಪಕರಾಗಿದ್ದಾರೆ. ನವೆಂಬರ್ ೬ ರಂದು ಈ ಚಲನಚಿತ್ರದ ‘ಟ್ರೈಲರ್’ ಮುಂಬಯಿಯಲ್ಲಿ ಬಿಡುಗಡೆ ಮಾಡಲಾಯಿತು. ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿ ಆಗಿದ್ದಾಗ ಮತಾಂಧರು ಈ ಹತ್ಯಾಕಾಂಡ ಮಾಡಿದ್ದರು.
ನಾನು ಯಾವುದೇ ಧರ್ಮದ ಕುರಿತು ಟೀಕಿಸುವುದಿಲ್ಲ ! – ಚಲನಚಿತ್ರ ನಿರ್ಮಾಪಕಿ ಏಕತಾ ಕಪೂರ್
ಈ ಚಲನಚಿತ್ರದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಏಕತಾ ಕಪೂರ್ ಅವರು, “ನಾನು ಯಾವುದೇ ರಾಜಕೀಯ ಗುಂಪಿನ ಜೊತೆಗೆ ಸಂಬಂಧ ಹೊಂದಿಲ್ಲ. ನಾನು ಕೇವಲ ಸತ್ಯದ ಪರವಾಗಿದ್ದೇನೆ. ನಾನು ಹಿಂದೂ ಆಗಿದ್ದೇನೆ, ಇದರ ಅರ್ಥ ನಾನು ಜಾತ್ಯತೀತಳಾಗಿದ್ದೇನೆ. ನಾನು ಯಾವುದೇ ಧರ್ಮದ ಕುರಿತು ಟೀಕಿಸುವುದಿಲ್ಲ. ಚಲನಚಿತ್ರ ಬಿಡುಗಡೆಯ ದಿನಾಂಕ ಮೊದಲೇ ಘೋಸಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ವಿಧಾನಸಭೆಯ ಚುನಾವಣೆಗೂ ಈ ಚಲನಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.” ಎಂದು ಹೇಳಿದರು.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ