ನಿಮಗೆ ಅರರಿಯಾದಲ್ಲಿ (ಬಿಹಾರ) ಇರಬೇಕಿದ್ದರೆ, ಹಿಂದುಗಳಂತೆ ನಡೆದುಕೊಳ್ಳಬೇಕು ! – ಭಾಜಪದ ಸಂಸದ ಪ್ರದೀಪ್ ಸಿಂಹ

ಭಾಜಪದ ಸಂಸದ ಪ್ರದೀಪ್ ಸಿಂಹರಿಂದ ಹಿಂದೂಗಳಿಗೆ ಕರೆ

ಅರರಿಯಾ (ಬಿಹಾರ) – ತಮ್ಮನ್ನು ಹಿಂದೂ ಎಂದು ಹೇಳಲು ನಾಚಿಕೆ ಏತಕ್ಕೆ ? ನೀವು ಅರರಿಯಾದಲ್ಲಿ ವಾಸಿಸಬೇಕಾದರೆ, ಹಿಂದೂ ಆಗಬೇಕು ಮತ್ತು ಹಿಂದೂಗಳಂತೆ ವರ್ತಿಸಬೇಕು ಎಂದು ನಾವು ಹೇಳುತ್ತೇವೆ. ಯಾವಾಗ ನಿಮಗೆ ನಿಮ್ಮ ಮಗನ ಅಥವಾ ಮಗಳ ಮದುವೆ ಮಾಡುವುದಿದ್ದರೆ, ಆಗ ಜಾತಿ ಹುಡುಕಿ; ಆದರೆ ಹಿಂದೂಗಳ ಐಕ್ಯತೆಯ ಪ್ರಶ್ನೆ ಬಂದಾಗ, ಮೊದಲು ಹಿಂದೂ ನಂತರ ಜಾತಿಯನ್ನು ಕಂಡುಕೊಳ್ಳಿ, ಎಂದು ಭಾಜಪದ ಸಂಸದ ಪ್ರದೀಪ ಕುಮಾರ ಸಿಂಹ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹೇಳಿಕೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ. ಈ ಹೇಳಿಕೆ ಎರಡು ಧರ್ಮಕ್ಕಾಗಿ ಅಲ್ಲ, ವಿಭಿನ್ನ ರೀತಿಯ ಮಾರ್ಗಗಳಿಂದ ವಿಭಜನೆಗೊಂಡಿರುವ ಹಿಂದೂಗಳನ್ನು ಒಗ್ಗೂಡಿಸಲು ಎಂದು ಭಾಜಪಗೆ ಸಂಬಂಧಿಸಿದ ಜನರು ಹೇಳಿದ್ದಾರೆ, ಆದರೆ ಇನ್ನೊಂದು ಕಡೆ ವಿರೋಧ ಪಕ್ಷಗಳ ಜನರು ಇದು ಭಾಜಪದ ಸಮಾಜದಲ್ಲಿನ ಸಹೋದರತ್ವವನ್ನು ಕೊನೆಗೊಳಿಸುವ ತಂತ್ರ ಎಂದು ಆರೋಪಿಸಿದ್ದಾರೆ.