Kashmir Terror Attack: ಜಮ್ಮೂ-ಕಾಶ್ಮೀರದಲ್ಲಿ `ತೆಹರಿಕ-ಎ-ಲಬ್ಬೈಕ ಮುಸ್ಲಿಂ’ ಈ ಹೊಸ ಭಯೋತ್ಪಾದಕ ಸಂಘಟನೆ ಸಕ್ರೀಯ !

ಶ್ರೀನಗರ – ಜಮ್ಮೂ-ಕಾಶ್ಮೀರದಲ್ಲಿ `ತೆಹರಿಕ-ಎ-ಲಬ್ಬೈಕ ಮುಸ್ಲಿಂ’ (ಟಿ.ಎಲ್.ಎಂ.) ಈ ಹೊಸ ಭಯೋತ್ಪಾದಕ ಸಂಘಟನೆ ಕಾರ್ಯನಿರತವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. `ಕೌಂಟರ ಇಂಟಲಿಜೆನ್ಸ ವಿಂಗ’ ಮತ್ತು ಪೊಲೀಸರು ಶ್ರೀನಗರ, ಗಾಂದರಬಲ, ಬಂಡಿಪೊರಾ, ಕುಲಗಾಮ, ಅನಂತನಾಗ ಮತ್ತು ಪುಲವಾಮಾದಲ್ಲಿ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದರು. ಪೊಲೀಸರು, `ಟಿ.ಎಲ್.ಎಂ.’ ಈ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ-ಎ-ತೋಯ್ಬಾದ ಒಂದು ಗುಂಪಾಗಿದೆ. ಈ ಗುಂಪಿನಲ್ಲಿ ಭಯೋತ್ಪಾದಕರನ್ನು ನೇಮಕಾತಿ ಮಾಡಲಾಗಿತ್ತು, ಪಾಕಿಸ್ತಾನದಲ್ಲಿರುವ ಲಷ್ಕರ-ಎ-ತೋಯ್ಬಾದ ಗೂಢಚಾರ ಬಾಬಾ ಹಮಾಸನ ಸೂಚನೆಯಂತೆ ನೇಮಕಾತಿ ನಡೆಯುತ್ತಿತ್ತು ಎಂದು ಹೇಳಿದರು.

ಗಾಂದರಬಲ ದಾಳಿಯ ಹೊಣೆಯನ್ನು ಸ್ವೀಕರಿಸಿದ ‘ರೆಸಿಸ್ಟೆನ್ಸ ಫ್ರಂಟ’

ಪಾಕಿಸ್ತಾನದಲ್ಲಿರುವ `ಲಷ್ಕರ-ಎ-ತೋಯ್ಬಾ’ಗೆ ಸಂಬಂಧಿಸಿದ `ರೆಸಿಸ್ಟೆನ್ಸ ಫ್ರಂಟ’ ಈ ಮತ್ತೊಂದು ಭಯೋತ್ಪಾದಕ ಸಂಘಟನೆಯು ಗಾಂದರಬಲ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಶೇಖ ಸಜ್ಜಾದ ಗುಲ, ಈ ‘ರೆಸಿಸ್ಟನ್ಸ ಫ್ರಂಟ’ ಮುಖ್ಯಸ್ಥನಾಗಿದ್ದಾನೆ. ಕಲಂ 370 ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಅಸ್ತಿರತೆಯನ್ನು ಉಂಟುಮಾಡುವಲ್ಲಿ `ರೆಸಿಸ್ಟೆನ್ಸ ಫ್ರಂಟ’ ಕೈವಾಡವಿತ್ತು. ಈ ಸಂಘಟನೆಯು ಸರಕಾರ ಮತ್ತು ಪೊಲೀಸ ಇಲಾಖೆಯಲ್ಲಿ ಕೆಲಸ ಮಾಡುವ ಸ್ಥಳೀಯ ಮುಸಲ್ಮಾನರನ್ನೂ ಗುರಿಯಾಗಿಸಿದೆ.

ಸಂಪಾದಕೀಯ ನಿಲುವು

ಎಲ್ಲಿಯವರೆಗೆ ಭಯೋತ್ಪಾದನೆಯ ಕಾರ್ಖಾನೆಯಾಗಿರುವ ಪಾಕಿಸ್ತಾನ ನಾಶವಾಗುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಹೊಸ ಹೊಸ ಭಯೋತ್ಪಾದಕ ಸಂಘಟನೆಗಳು ನಿರ್ಮಾಣವಾಗುತ್ತಿರುತ್ತವೆಯೆನ್ನುವುದನ್ನು ಸರಕಾರ ಗಮನಕ್ಕೆ ತೆಗೆದುಕೊಳ್ಳಬೇಕು ಮತ್ತು ಈಗ ಪಾಕಿಸ್ತಾನವನ್ನೇ ಮುಗಿಸಲು ಹೆಜ್ಜೆ ಇಡಬೇಕು !