ದೆಹಲಿಯಲ್ಲಿ ಸ್ಫೋಟ ಪ್ರಕರಣ; ಹೊಣೆ ಹೊತ್ತ ಖಲಿಸ್ತಾನಿ ಭಯೋತ್ಪಾದಕರು !

ನವ ದೆಹಲಿ – ಅಕ್ಟೋಬರ್ 20 ರಂದು ಇಲ್ಲಿನ ರೋಹಿಣಿ ಸೆಕ್ಟರ್ 14 ರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಶಾಲೆಯ ಹತ್ತಿರ ನಡೆದ ಸ್ಫೋಟದ ಹೊಣೆಯನ್ನು ಖಲಿಸ್ತಾನಿ ಭಯೋತ್ಪಾದಕರು ವಹಿಸಿಕೊಂಡಿದ್ದಾರೆ. ಅವರ ಸಂದೇಶವು ‘ಜಸ್ಟೀಸ್ ಲೀಗ್ ಇಂಡಿಯಾ’ ಈ ‘ಟೆಲಿಗ್ರಾಮ್ ಗುಂಪಿ’ನಲ್ಲಿ ಬಂದಿದೆ. ಇದರಲ್ಲಿ ಅವರು ‘ನಾವು ಯಾವುದೇ ಸಮಯದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಖಲಿಸ್ತಾನಿ ಭಯೋತ್ಪಾದಕರ ಈ ದಾವೆ ನಿಜವೇ? ಅಥವಾ ಬೇಕಂತಲೇ ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆಯೇ, ಇದು ತನಿಖಾ ವ್ಯವಸ್ಥೆಯಿಂದ ಬೆಳಕಿಗೆ ಬರಬೇಕಾಗಿದೆ !