|

ಅಗರ್ತಾಲಾ (ತ್ರಿಪುರಾ) – ಉತ್ತರ ತ್ರಿಪುರ ಜಿಲ್ಲೆಯಲ್ಲಿನ ಕದಮತಾಲಾದಲ್ಲಿನ ಸಾರ್ವಜನಿಕ ದುರ್ಗಾ ಪೂಜಾ ಆಯೋಜಕರು ನವರಾತ್ರಿ ಪ್ರಯುಕ್ತ ಓರ್ವ ಮುಸಲ್ಮಾನರಿಗೆ ದೇಣಿಗೆ ಕೇಳಿದ್ದಕ್ಕೆ ಅಲ್ಲಿಯ ಮುಸಲ್ಮಾನರು ಹಿಂದುಗಳ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದರು. ಅಕ್ಟೋಬರ್ ೬ ರಂದು ನಡೆದ ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವಿಗಿಡಾಗಿದ್ದಾನೆ ಮತ್ತು ೧೭ ಜನರು ಗಾಯಗೊಂಡಿದ್ದಾರೆ, ಎಂದು ಒಂದು ಸುದ್ದಿ ವೆಬ್ಸೈಟ್ ಮಾಹಿತಿ ನೀಡಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಸರಕಾರವು ನಿಷೇದಾಜ್ಞೆ ಜಾರಿಗೊಳಿಸಿದೆ.
೧. ಒಂದು ವೆಬ್ಸೈಟ್ ನಲ್ಲಿ ಲಭ್ಯವಾದ ಸುದ್ದಿಯ ಪ್ರಕಾರ ಕದಮತಾಲಾದಲ್ಲಿನ ಒಂದು ಸಾರ್ವಜನಿಕ ದುರ್ಗಾ ಪೂಜೆಯ ಆಯೋಜಕರು ಅಸ್ಸಾಮಿಗೆ ಹೋಗುತ್ತಿದ್ದ ಓರ್ವ ಮುಸಲ್ಮಾನ ಚಾಲಕನಿಗೆ ದೇಣಗಿ ಕೇಳಿದ್ದರು. ಆಗ ಅವರ ನಡುವೆ ವಾಗ್ವಾದ ನಡೆಯಿತು. ಚಾಲಕನ ಸಮರ್ಥನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಅಲ್ಲಿ ಸೇರಿದರು ಮತ್ತು ಅವರು ದುರ್ಗಾ ಪೂಜೆಯ ಆಯೋಜಕರ ಮನೆಯ ಮೇಲೆ ಮತ್ತು ಮನೆಯಲ್ಲಿನ ಸದಸ್ಯರ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಹಿಂದುಗಳ ಎರಡು ಮನೆಗಳು ಮತ್ತು ಒಂದು ಬ್ಯೂಟಿ ಪಾರ್ಲರ್ ಅನ್ನು ಕೂಡ ಧ್ವಂಸಗೊಳಿಸಲಾಯಿತು.
೨. ಕದಮತಾಲಾ ಮಾರುಕಟ್ಟೆಯಲ್ಲಿ ಕೂಡ ಅಂಗಡಿಗಳಿಗೆ ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ. ಸಶಸ್ತ್ರ ಮುಸಲ್ಮಾನರ ಗುಂಪು ಹಿಂದುಗಳನ್ನು ಹೆದರಿಸುತ್ತಾ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಲೂಟಿ ಮಾಡಿದರು. ಈ ದಾಳಿಯಲ್ಲಿ ಓರ್ವ ವ್ಯಕ್ತಿಯ ಬರ್ಬರ್ ಹತ್ಯೆ ನಡೆಸಲಾಗಿದೆ, ಹಾಗೂ ೧೭ ಜನರು ಗಾಯಗೊಂಡಿದ್ದಾರೆ.
೩. ಈ ಘಟನೆಯಿಂದ ಅಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ದಾಳಿಯಲ್ಲಿ ಹಿಂದುಗಳ ಮನೆಯ ಮೇಲೆ ನಡೆದಿರುವ ಮಿತಿಮೀರಿದ ಹಾನಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಘಟನೆಯಿಂದ ಭಯಭೀತವಾಗಿರುವ ಓರ್ವ ಹಿಂದೂ ಮಹಿಳೆಯು ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, ನಮ್ಮ ಮನೆಯ ಎದುರಿನ ಕದಮತಾಲಾ ಮಾರುಕಟ್ಟೆ ಧ್ವಂಸವಾಯಿತು. ಇದು ಭಾರತನಾ? ನಾವು ಇಲ್ಲಿಂದ ಇನ್ನೆಲ್ಲಿ ಹೋಗುವುದು? ಎಂದು ನೋವನ್ನು ತೋಡಿಕೊಂಡರು.
೪. ಈ ಘಟನೆಯ ನಂತರ ಅಲ್ಲಿನ ಕಾನೂನು-ಸುವ್ಯವಸ್ಥೆ ಕಾಪಾಡುವುದಕ್ಕಾಗಿ ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿ.ಎಸ್.ಆರ್.) ಪೊಲೀಸ್ ಮತ್ತು ಅರೆ ಸೈನ್ಯಪಡೆಯನ್ನು ನೇಮಕಗೊಳಿಸಲಾಗಿದೆ. ಪೊಲೀಸರು ಲಾಠಿ ಚಾರ್ಜ್ ಮತ್ತು ಗೋಲಿಬಾರ್ ಕೂಡ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ನಿರ್ಮಲೆಂದು ಸೆನ್ ಮತ್ತು ದ್ವಿಪಜಾಯ್ ನಾಥ ಎಂಬ ಇಬ್ಬರು ಹಿಂದೂಗಳನ್ನು ಬಂಧಿಸಿದ್ದಾರೆ. ಹಾಗೂ ೧೬೩ ಕಲಂ ಜಾರಿಗೊಳಿಸಿದ್ದಾರೆ.
೫. ಕದಮತಾಲಾದಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು ಪೊಲೀಸರು ಯೋಗ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ದಯವಿಟ್ಟು ವದಂತಿಗಳನ್ನು ಹಬ್ಬಿಸಬೇಡಿ ಎಂದು ಉತ್ತರ ತ್ರಿಪುರಾ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ. ತ್ರಿಪುರಾದ ಮುಖ್ಯಮಂತ್ರಿ ಡಾ. ಮಾಣಿಕ ಸಾಹಾ ಅವರು ಈ ಪ್ರಕರಣದ ಕಡೆ ಗಮನಹರಿಸಿದ್ದು ಈ ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಆದೇಶ ನೀಡಿದ್ದಾರೆ.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !