ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಅರಗ ಜ್ಞಾನೇಂದ್ರ

ನೀವು ಟಿಪ್ಪು ಸುಲ್ತಾನಿನ ಜಯಂತಿ ಆಚರಿಸಿ, ನಾವು ವರಮಹಾಲಕ್ಷ್ಮಿ ಹಬ್ಬ ಆಚರಿಸುತ್ತೇವೆ ! – ಅರಗ ಜ್ಞಾನೇಂದ್ರ

ತೀರ್ಥಹಳ್ಳಿ (ಕರ್ನಾಟಕ) – ನೀವು ಟಿಪ್ಪು ಸುಲ್ತಾನಿನ ಜಯಂತಿ ಆಚರಿಸಿ, ನಾವು ವರಮಹಾಲಕ್ಷ್ಮಿ ಹಬ್ಬ ಆಚರಿಸುತ್ತೇವೆ. ನೀವು ವರಮಹಾಲಕ್ಷ್ಮಿ ಹಬ್ಬ ಆಚರಿಸಿ ತೋರಿಸಿ, ಆದರೆ ಅದು ನೀವು ಎಂದಿಗೂ ಮಾಡುವುದಿಲ್ಲ; ಯಾಕೆಂದರೆ ನಿಮಗೆ ವೋಟ್ ಬ್ಯಾಂಕ್ ನ ಭಯ ಇದೆ, ಎಂದು ಭಾಜಪದ ನಾಯಕ ಅರಗ ಜ್ಞಾನೇಂದ್ರ ಅವರು ಕಾಂಗ್ರೆಸ್ಸಿಗೆ ಸವಾಲ್ ಹಾಕಿದರು. ಅವರು ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಭಾಜಪ ಮಹಿಳಾ ಮೋರ್ಚಾದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅರಗ ಜ್ಞಾನೇಂದ್ರ ಅವರು ಮಾತನ್ನು ಮುಂದುವರೆಸಿ, ಭಾರತೀಯ ಪರಂಪರೆ ಕ್ಷೀಣಿಸಿದಾಗ ಮಾತ್ರ ಭಾರತ ಎರಡು ಭಾಗವಾಗಿ ವಿಭಜನೆಯಾಗುವುದು. ಎಲ್ಲಿ ಭಾರತೀಯ ಪರಂಪರೆ ಮತ್ತು ಸಂಸ್ಕೃತಿ ಶಾಶ್ವತವಾಗಿ ಇರುವುದೋ ಅಲ್ಲಿ ಎಲ್ಲವೂ ಒಳ್ಳೆಯದಾಗಿರುತ್ತದೆ; ಆದರೆ ನಮ್ಮ ಯುವತಿಯರು ಯಾವಾಗ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯುವರೋ ಆಗ ನಮ್ಮ ದೇಶ ನಾಶವಾಗುವುದು ಎಂದು ಹೇಳಿದರು.