ನಾಗಪುರ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಮನ್ವಯ ಸಭೆಯು ಈ ವರ್ಷ ಕೇರಳದ ಪಾಲಕ್ಕಾಡ್ನಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ನಡೆಲಿದೆ. ಮೂರು ದಿನಗಳ ಈ ಸಭೆ ವರ್ಷಕ್ಕೊಮ್ಮೆ ನಡೆಯುತ್ತದೆ. ಕಳೆದ ವರ್ಷ ಈ ಸಭೆಯನ್ನು ಪುಣೆಯಲ್ಲಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸಂಘದ ವಿವಿಧ ಸಂಸ್ಥೆಗಳ ಒಕ್ಕೂಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಅಧಿಕಾರಿಗಳು ಭಾಗವಹಿಸುತ್ತಾರೆ. ಈ ಸಭೆಯಲ್ಲಿ ಪ.ಪೂ.ಸರಸಂಘಚಾಲಕ ಡಾ. ಮೋಹನ್ಜಿ ಭಾಗವತ್, ಸರಕಾರ್ಯವಾಹ ಶ್ರೀ. ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ ಸಂಘದ ಎಲ್ಲಾ ಆರು ಸಹ ಕಾರ್ಯಾಧ್ಯಕ್ಷರು ಹಾಗೂ ಇತರ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ರಾಷ್ಟ್ರ ಸೇವಿಕಾ ಸಮಿತಿ, ವನವಾಸಿ ಕಲ್ಯಾಣ ಆಶ್ರಮ, ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಜನತಾ ಪಕ್ಷ, ಭಾರತೀಯ ಕಿಸಾನ್ ಸಂಘ, ವಿದ್ಯಾ ಭಾರತಿ, ಭಾರತೀಯ ಮಜ್ದೂರ್ ಸಂಘ ಸೇರಿದಂತೆ ಸಂಘದ 32 ವಿವಿಧ ಸಂಸ್ಥೆಗಳ ರಾಷ್ಟ್ರೀಯ ಅಧ್ಯಕ್ಷರು, ಸಂಘಟನ ಸಚಿವ, ಮತ್ತು ಮುಖ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಂಘದ ಭಾರತ ಪ್ರಚಾರ ಪ್ರಮುಖರಾದ ಸುನಿಲ್ ಅಂಬೇಕರ್ ಅವರು ಮಾಹಿತಿ ನೀಡಿದರು. ಈ ಸಭೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ವಿವಿಧ ವಿಷಯಗಳನ್ನು ಚರ್ಚಿಸಲಾಗುವುದು.
ಸನಾತನ ಪ್ರಭಾತ > ಏಷ್ಯಾ > ಭಾರತ > ಕೇರಳ > RSS Annual Meeting : ಕೇರಳದ ಪಾಲಕ್ಕಾಡ್ನಲ್ಲಿ ಆರ್.ಎಸ್.ಎಸ್ ನ ವಾರ್ಷಿಕ ಅಖಿಲ ಭಾರತ ಸಮನ್ವಯ ಸಭೆ
RSS Annual Meeting : ಕೇರಳದ ಪಾಲಕ್ಕಾಡ್ನಲ್ಲಿ ಆರ್.ಎಸ್.ಎಸ್ ನ ವಾರ್ಷಿಕ ಅಖಿಲ ಭಾರತ ಸಮನ್ವಯ ಸಭೆ
ಸಂಬಂಧಿತ ಲೇಖನಗಳು
- ಇನ್ನು ಮುಂದೆ ಭಕ್ತರಿಗಾಗಿ ಕೈಲಾಸ ಪರ್ವತದ ದರ್ಶನಕ್ಕೆ ಹೆಲಿಕಾಪ್ಟರ್ ಬಳಕೆ !
- Krishna Janmabhoomi Case: ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಆಘಾತ !
- Muslims Stone Pelting : ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆಯಲ್ಲಿ ಮುಸ್ಲಿಮರಿಂದ ದೇವಸ್ಥಾನದ ಮೇಲೆ ಕಲ್ಲು ತೂರಾಟ
- ‘ಭಾರತದಲ್ಲಿ ಇರಬೇಕಿದ್ದರೆ, ಖ್ವಾಜಾ ಖ್ವಾಜಾ ಎಂದು ಹೇಳಬೇಕು !’ (ಅಂತೆ)
- ಅಕ್ಟೋಬರ್ 1 ತನಕ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ! – ಸರ್ವೋಚ್ಚ ನ್ಯಾಯಾಲಯದ ಆದೇಶ
- ಗಾಜಿಪುರದಲ್ಲಿ (ಉತ್ತರ ಪ್ರದೇಶ) ರೈಲ್ವೆ ಹಳಿ ಮೇಲೆ ಕಟ್ಟಿಗೆ ರಾಶಿ; ಇಂಜಿನ್ನೊಳಗೆ ನುಗ್ಗಿತು !