ಯಾದಗಿರಿಯಲ್ಲಿ ಕ್ರೈಸ್ತ ಮಹಿಳೆಯರಿಂದ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಲು ಪ್ರಯತ್ನ !

ಯಾದಗಿರಿ – ಯಾದಗಿರಿ ಜಿಲ್ಲೆಯ ಲಕ್ಷ್ಮೀನಗರದಲ್ಲಿ ಬೆಂಗಳೂರಿನ ಇಬ್ಬರು ಕ್ರೈಸ್ತ ಮಹಿಳೆಯರು ಹಿಂದೂಗಳ ಮನೆಗೆ ತೆರಳಿ ಕ್ರೈಸ್ತ ಧರ್ಮದ ಕರಪತ್ರಗಳನ್ನು ಹಂಚಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಲು ಯತ್ನಿಸಿದ್ದಾರೆ. ಅವರು ಹಿಂದೂ ದೇವರುಗಳ ಬಗ್ಗೆ ಕಹಿ ಮತ್ತು ದ್ವೇಷದ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸ್ಥಳೀಯರು ಕ್ರೈಸ್ತ ಮಹಿಳೆಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಮಹಿಳೆಯರನ್ನು ರೇಚೆಲ್ ರಾಬರ್ಟ್ ಮತ್ತು ಕರುಣಾ ಎಂದು ಗುರುತಿಸಲಾಗಿದೆ.
‘ಭೂಮಿಯಲ್ಲಿ ಒಬ್ಬನೇ ದೇವರು ಮತ್ತು ಅದು ಯೇಸು ಕ್ರಿಸ್ತನು. ನಿಮ್ಮ ದೇವರುಗಳು ನಿಮ್ಮನ್ನು ರಕ್ಷಿಸಲಾರರು. ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮ ಸ್ವೀಕರಿಸಿ’, ಎಂದು ಹೇಳಿ ಹಿಂದೂಗಳ ಮನೆಗೆ ತೆರಳಿ ಬಲವಂತವಾಗಿ ಮತಾಂತರಗೊಳ್ಳುವಂತೆ ಪ್ರಚೋದಿಸಲಾಯಿತು, ಎಂದು ಲಕ್ಷ್ಮೀನಗರ ನಿವಾಸಿಗಳು ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳು ಧರ್ಮ ಶಿಕ್ಷಣ ಪಡೆದು ತಮ್ಮ ಧರ್ಮಾಭಿಮಾನ ಹೆಚ್ಚಿಸುವುದು, ಮತಾಂತರವನ್ನು ತಡೆಯಲು ಇದು ಪರಿಣಾಮಕಾರಿ ಪರಿಹಾರವಾಗಿದೆ !